ತಂದೆ-ಮಗ ಒಂದೇ ನಕ್ಷತ್ರವಾದರೆ ಏಕನಕ್ಷತ್ರ ದೋಷ, ಅದಕ್ಕೆ ಪರಿಹಾರವೇನು?
ತಂದೆ-ಮಗ ಇಬ್ಬರದೂ ಒಂದೇ ನಕ್ಷತ್ರವಾದರೆ ಅದನ್ನು ಏಕನಕ್ಷತ್ರ ದೋಷ ಎಂದು ಪರಿಗಣಿಸಲಾಗುತ್ತದೆ. ಏನಿದು ಏಕನಕ್ಷತ್ರ ದೋಷ? ಅದರಿಂದ ಪರಿಣಾಮಗಳೇನು? ಪರಿಹಾರ ಏನು? ಇತ್ಯಾದಿ ವಿಚಾರಗಳ ಬಗ್ಗೆಯೇ ಇಂದಿನ ಲೇಖನ. ಈ ರೀತಿ ಏಕನಕ್ಷತ್ರ ದೋಷ ಆಗಿದೆ ಅನ್ನೋದನ್ನು ಏನೆಂದು ಪರಿಗಣಿಸಬೇಕು ಎಂಬುದನ್ನು ಸಹ ತಿಳಿಸಲಾಗುವುದು.
ಪಿತೃ ದೋಷವಿದ್ದರೆ ಅಥವಾ ಹಿರಿಯರು ಹಾಗೂ ಪೋಷಕರು ನೀವು ಮಾಡಿದ ಕೆಲವು ಕಾರ್ಯದಿಂದ ಅಸಮಾಧಾನಗೊಂಡಿದ್ದರೆ ಅದರ ಫಲಿತವನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಹಿರಿಯರನ್ನು ಗೌರವಿಸಬೇಕು. ಪೋಷಕರು, ಅತ್ತೆ-ಮಾವ, ತಾತ- ಅಜ್ಜಿಯನ್ನು ಗೌರವದಿಂದ ನಡೆಸಿಕೊಳ್ಳಬೇಕು.
ಒಂದು ವೇಳೆ ನಿಮ್ಮ ಕುಟುಂಬದವರು ತೀರಿಹೋದ ಹಿರಿಯರ ವರ್ಷಾವರ್ಷ ಶ್ರಾದ್ಧ ಮಾಡುವುದನ್ನು ನಿಲ್ಲಿಸಿದ್ದರೆ ಅದು ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ಪ್ರತಿ ವರ್ಷ ಸಾಂವತ್ಸರಿಕ ಶ್ರಾದ್ಧವನ್ನು ಕಡ್ಡಾಯವಾಗಿ ಮಾಡಲೇಬೇಕು. ಇನ್ನು ಏಕನಕ್ಷತ್ರ ದೋಷ ಎಂಬುದು ಅನ್ವಯಿಸುವುದು ತಂದೆ-ಮಗನಿಗೆ ಮಾತ್ರ. ತಂದೆ-ಮಗಳು, ತಾಯಿ-ಮಗಳಿಗೆ ಅನ್ವಯಿಸುವುದಿಲ್ಲ.

ಈ ದೋಷವಿದೆ ಎಂದು ಗೊತ್ತಾದ ಮೇಲೆ ಅದರ ನಿವಾರಣೆಗಾಗಿ ಏಕನಕ್ಷತ್ರ ಶಾಂತಿ ಪೂಜೆಯನ್ನು ಮಾಡಿಸಬೇಕು. ತಂದೆ ಹಾಗೂ ಮಗನದು ಒಂದೇ ನಕ್ಷತ್ರವಾದರೆ ಈ ದೋಷ ಬರುತ್ತದೆ. ಪಾದ ಒಂದೇ ಇರಲಿ ಅಥವಾ ಬೇರೆ ಇರಲಿ ಅದು ವಿಷಯವಲ್ಲ. ನಕ್ಷತ್ರ ಒಂದೇ ಆದರೆ ಮಾತ್ರ ಖಚಿತವಾಗಿಯೂ ದೋಷವಾಗುತ್ತದೆ.
ಯಾವಾಗ ಮಗನು ತಂದೆಯಿಂದ ಬೇರೆಯಾಗಿ ಜೀವನ ನಡೆಸಲು ಆರಂಭಿಸಿದಾಗ ಸಮಸ್ಯೆಗಳು ಉದ್ಭವವಾಗುತ್ತವೆ. ಅದು ಆರೋಗ್ಯ ಸಮಸ್ಯೆ, ಹಣಕಾಸಿನ ಸಮಸ್ಯೆಗಳಾಗಿರುತ್ತವೆ. ಈ ದೋಷದ ಕಾರಣಕ್ಕೆ ಮಗನ ಮದುವೆ ವಿಳಂಬ ಆಗುವ ಸಾಧ್ಯತೆಗಳಿರುತ್ತವೆ. ಮದುವೆ ಆದ ನಂತರ ಸಂತಾನ ಆಗುವುದು ತಡವಾಗುತ್ತದೆ. ಇನ್ನೂ ಒಂದು ಸಲ ನೆನಪಿಸುತ್ತಿದ್ದೇನೆ: ಈ ದೋಷ ಮಗಳಿಗೆ ಅನ್ವಯ ಆಗುವುದಿಲ್ಲ.
-
ಒಂದೇ ವರ್ಷದಲ್ಲಿ 800 ಕೋಟಿ ರೂ ಮೌಲ್ಯದ ಕಂಪನಿ ಕಟ್ಟಿದ 23ರ ಹರೆಯದ ಅಂಜಲಿ ಸರ್ದಾನಾ -
Vrial News: ಕೆಲಸದಿಂದ ತೆಗೆದ ಬಳಿಕ ಪುಕ್ಕಟೆ ಸಹಾಯ ಕೇಳಿದ ಮಾಜಿ ಬಾಸ್: ನೌಕರ ಕೊಟ್ಟ ಉತ್ತರ ವೈರಲ್ -
Today Horoscope Mar 3: ಹುಣ್ಣಿಮೆಯ ದಿನ ಚಂದ್ರಗ್ರಹಣ, ಈ ರಾಶಿಯವರ ಆರೋಗ್ಯದಲ್ಲಿ ಏರುಪೇರು -
Property: ಖಾತಾ ಎಂದರೇನು, ಇ, ಬಿ - ಎ ಖಾತಾಗಳ ವ್ಯತ್ಯಾಸ, ಆಸ್ತಿದಾರರಿಗೆ ಹೇಗೆ ಲಾಭ ಇಲ್ಲಿದೆ ಸಂಪೂರ್ಣ ವಿವರ -
National Highway: ರಾಷ್ಟ್ರೀಯ ಹೆದ್ದಾರಿ-373 ಕಾಮಗಾರಿ ಎಲ್ಲಿಗೆ ಬಂತು? -
ಬೆಂಗಳೂರು ಆಡಳಿತ ಬಿಬಿಎಂಪಿಯಿಂದ ಜಿಬಿಎಗೆ: 5 ಪಾಲಿಕೆಗಳ ರಚನೆ, ಹೊಸ ಪ್ರದೇಶಗಳ ಸೇರ್ಪಡೆಯಿಂದ ರಿಯಲ್ ಎಸ್ಟೇಟ್ಗೆ ಬಂಪರ್ -
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದುವೆ ಸಂಭ್ರಮ: 'ಸಂಗೀತ' ರಾತ್ರಿಯ ನೆನಪುಗಳನ್ನು ಹಂಚಿಕೊಂಡ ನಟಿ -
RCB: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐದು ಪಂದ್ಯಗಳ ಆಯೋಜನೆಗೆ ಆರ್ಸಿಬಿ ಒಪ್ಪಿಗೆ -
Dharavi Slum: ಏಷ್ಯಾದ ದೊಡ್ಡ ಕೊಳಗೇರಿ ಧಾರಾವಿಯಲ್ಲಿ ಬಡತನವೂ ಬಂಡವಾಳ, ಧಾರಾವಿ ಸಂಪೂರ್ಣ ವಿವರ ಇಲ್ಲಿದೆ -
ದುಬೈಯಿಂದ ತಾಯ್ನಾಡಿಗೆ ಮರಳಿದ ಕನ್ನಡಿಗರು: ಪಿ.ವಿ ಸಿಂಧು, ಭೋಜೇಗೌಡ ಸೇರಿದಂತೆ ಹಲವರು ಬೆಂಗಳೂರಿಗೆ ವಾಪಾಸ್ -
ಇರಾನ್-ಇಸ್ರೇಲ್ ಸಂಘರ್ಷ: ಕತಾರ್ನಲ್ಲಿ LNG ಉತ್ಪಾದನೆ ಸ್ಥಗಿತ: ಗಗನಕ್ಕೇರಿದ ತೈಲ ಮತ್ತು ಅನಿಲ ಬೆಲೆ -
Fuel Price: ತೀವ್ರಗೊಂಡ ಯುದ್ಧದ ಕಿಚ್ಚು, ಕಚ್ಚಾ ತೈಲ ದರ ಏರಿಕೆಯಾದರೂ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರ












Click it and Unblock the Notifications