ಶನಿ-ಕುಜ ಯೋಗ, ಯುದ್ಧ ಮುಂದೂಡಿದ ನೋಟಿನ 'ಯಾಗ'
ಒಂದು ವೇಳೆ ನವೆಂಬರ್ 8ರಂದು 500, 1000 ರುಪಾಯಿ ನೋಟಿನ ರದ್ದು ಮಾಡದಿದ್ದರೆ ಏನಾಗುತ್ತಿತ್ತು ಎಂಬ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಪಂಡಿತ್ ವಿಠ್ಠಲ್ ಭಟ್ ಅವರು ತಿಳಿಸಿದ್ದಾರೆ. ಗ್ರಹಸ್ಥಿತಿ ಆಧಾರದಲ್ಲಿ ಅವರು ತಿಳಿಸಿರುವ ಭವಿಷ್ಯ ತುಂಬ ಕುತೂಹಲಕಾರಿಯಾಗಿದೆ.
ಈಗ ಶನಿ-ಕುಜ ಪರಿವರ್ತನೆ ಯೋಗ ನಡೆಯುತ್ತಿದೆ. ಹಾಗೆಂದರೆ ಶನಿಯ ಆಧಿಪತ್ಯ ಇರುವ ಮಕರ ರಾಶಿಯಲ್ಲಿ ಕುಜ ಗ್ರಹವಿದ್ದರೆ, ಕುಜನು ಅಧಿಪತಿಯಾದ ವೃಶ್ಚಿಕ ರಾಶಿಯಲ್ಲಿ ಶನಿ ಗ್ರಹ ಇದೆ. ಇದನ್ನೇ ಜ್ಯೋತಿಷ್ಯದಲ್ಲಿ ಶನಿ-ಕುಜ ಪರಿವರ್ತನೆ ಯೋಗ ಅನ್ನುವುದು. ಒಂದು ವೇಳೆ ನೋಟು ರದ್ದು ಘೋಷಣೆ ಆಗದಿದ್ದರೆ ಭಾರತ-ಪಾಕ್ ಯುದ್ಧ ಸಾಧ್ಯತೆ ಬಹಳ ದಟ್ಟವಾಗಿತ್ತು.[ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]
ಇಲ್ಲಿ ಇನ್ನೊಂದು ಅಂಶ ಗಮನಿಸಬೇಕು. ನೋಟು ರದ್ದು ಘೋಷಣೆಯಾದದ್ದು ಮಂಗಳವಾರ. ಅಂದರೆ ಕುಜ ಗ್ರಹದ ಪ್ರಭಾವ ಹೆಚ್ಚಿರುವ ದಿನ. ಕುಜ ಅಂದರೆ ಸೇನೆಯನ್ನು ಕೂಡ ಪ್ರತಿನಿಧಿಸುವಂಥದ್ದು. ನೋಟು ರದ್ದು ಆಗಿರುವುದರಿಂದ ಚಿನ್ನ, ರಿಯಲ್ ಎಸ್ಟೇಟ್ ತುಂಬ ಚೆನ್ನಾಗಿ ಆಗುತ್ತದೆ, ಬೆಲೆ ಬರುತ್ತದೆ ಎಂಬ ಲೆಕ್ಕಾಚಾರದಲ್ಲಿ ಜನರಿದ್ದಾರೆ. ಅದರೆ ಇವೆರಡರಲ್ಲೂ ಸದ್ಯದಲ್ಲೇ ಕುಸಿತ ಕಾಣುತ್ತದೆ. ಪಂಡಿತ್ ವಿಠ್ಠಲ್ ಭಟ್ ಸಂಪರ್ಕ ಸಂಖ್ಯೆ 9845682380.

ಚಿನ್ನ, ರಿಯಲ್ ಎಸ್ಟೇಟ್ ಕುಸಿಯತ್ತೆ
ಸದ್ಯಕ್ಕೆ ತಮ್ಮ ಕಪ್ಪು ಹಣ ಬದಲಿಸಿಕೊಳ್ಳುವ ಯತ್ನದಲ್ಲಿರುವವರು ಚಿನ್ನಕ್ಕೆ ಒಂದಕ್ಕೆ ಎರಡರಂತೆ ಬೆಲೆ ಕೊಟ್ಟು ಖರೀದಿಸುತ್ತಿರುವುದು ಮಾಧ್ಯಮದ ವರದಿಗಳಲ್ಲೇ ನಾವು ಓದುತ್ತಿದ್ದೇವೆ, ನೋಡುತ್ತಿದ್ದೇವೆ. ಆದರೆ ಚಿನ್ನ-ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಶೀಘ್ರವೇ ಕುಸಿತ ಕಣ್ಣೆದುರಿಗೆ ಇದೆ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ.

ಕೆಳಮಟ್ಟದ ರಾಜಕಾರಣ
ಇನ್ನು ಶನಿಯು ಸದ್ಯದ ಸ್ಥಿತಿಯಲ್ಲಿ ದೇಶಾದ್ಯಂತ ತೀರಾ ಕೆಳ ಮಟ್ಟದ ರಾಜಕಾರಣ ನಡೆಯುತ್ತದೆ. ಜನರು ಕ್ಷುಲ್ಲಕ ರಾಜಕಾರಣವನ್ನು ಕಣ್ಣೆದುರೇ ನೋಡುತ್ತಾರೆ. ಇವೆಲ್ಲ ಗ್ರಹಸ್ಥಿತಿಯು ಸೂಚಿಸುತ್ತಿರುವ ಭವಿಷ್ಯ. ಮುಂದಾಗುವುದರ ಬಗ್ಗೆ ಒಂದಿಷ್ಟು ಎಚ್ಚರ ವಹಿಸುವುದು, ಧರ್ಮ ಕಾರ್ಯಗಳನ್ನು ಹೆಚ್ಚಾಗಿ ಮಾಡುವುದೇ ಅಶುಭ ಫಲಗಳನ್ನು ತಡೆಯುವ ಮೊದಲ ಸ್ಪೀಡ್ ಬ್ರೇಕರ್ ಎಂಬುದು ನೆನಪಿನಲ್ಲಿಡಿ.

ಯುದ್ಧ ಮುಂದೂಡಿದಂತೆ
ಇನ್ನು ಕನ್ಯಾ ರಾಶಿಯಲ್ಲಿ ಇರುವ ಗುರು ಅಂಥ ಶುಭ ಫಲಗಳನ್ನು ನೀಡುವುದಿಲ್ಲ. ಬರುವ ಸೆಪ್ಟೆಂಬರ್ ವರೆಗೆ ಕನ್ಯಾ ರಾಶಿಯಲ್ಲಿದ್ದು, ಆ ನಂತರ ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ಇದು ಅಂಥ ಶುಭ ಸಂದರ್ಭವಲ್ಲ. ಸದ್ಯಕ್ಕೇನೋ ಯುದ್ಧ ಅಗದಿರಬಹುದು. ಇದು ಒಂದು ರೀತಿಯಲ್ಲಿ ಯುದ್ಧವನ್ನು ಮುಂದೂಡಿದಂತೆ. ಭವಿಷ್ಯದಲ್ಲಿ ಯುದ್ಧ ಸಾಧ್ಯತೆ ಹೆಚ್ಚಿದೆ.

ಹೆಣ್ಣುಮಕ್ಕಳು ಹುಷಾರಾಗಿರಬೇಕು
ಇನ್ನು ಹೆಣ್ಣುಮಕ್ಕಳಿಗೂ ಅಂಥ ಒಳ್ಳೆ ಕಾಲವಲ್ಲ. ಹೆಣ್ಣುಮಕ್ಕಳಿನ ಮೇಲೆ ದೌರ್ಜನ್ಯ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ತುಂಬ ಎಚ್ಚರಿಕೆಯಿಂದ ಇರಬೇಕು. ನವೆಂಬರ್ 11ರಂದು 2,000 ಮುಖಬೆಲೆಯ ನೋಟು ದೇಶದಲ್ಲಿ ಬಿಡುಗಡೆಯಾಗಿದೆ. ಆ ದಿನದಂದು ಹೊಸ ನೋಟು ಬಿಡುಗಡೆಯಾಗಿದ್ದು ದೇಶದ ಮೇಲೆ ಎಂಥ ಪರಿಣಾಮ ಬೀರಬಹುದು ಎಂಬುದನ್ನು ಮುಂದಿನ ಲೇಖನಗಳಲ್ಲಿ ತಿಳಿಸಲಾಗುವುದು.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications