New Year 2025: ಈ ರಾಶಿಯವರು ಅಪ್ಪಿತಪ್ಪಿಯೂ ಕೆಂಪು ಬಟ್ಟೆ, ಚಿನ್ನ ಹಾಕಲೇಬಾರದು
2025 ದ್ವಾದಶಿ ರಾಶಿಗಳ ಮೇಲೆ ವಿಭಿನ್ನ ಶುಭ ಪರಿಣಾಮಗಳನ್ನು ಬೀರುತ್ತದೆ. ಯಾಕೆಂದರೆ ಈ ವರ್ಷವನ್ನು ಮಂಗಳ ವರ್ಷ ಎಂದು ಕರೆಯಲಾಗುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ ಈ ವರ್ಷ 9 ಅನ್ನು ಮಂಗಳಕರ ಸಂಖ್ಯೆ ಎಂದು ಕರೆಯಲಾಗುತ್ತದೆ. ಯುದ್ಧ, ಸೈನ್ಯ, ಶಕ್ತಿ, ಶೌರ್ಯ, ಭೂಮಿ ಮತ್ತು ಧೈರ್ಯಕ್ಕೆ ಕಾರಣವಾದ ಮಂಗಳ ಗ್ರಹ ಕೆಲವು ರಾಶಿಗಳಿಗೆ ಭಾರವಾಗಲಿದೆ. ಹೊಸ ವರ್ಷದಲ್ಲಿ ಮಂಗಳನು ಆಳ್ವಿಕೆ ನಡೆಸಲಿದ್ದಾನೆ. ಹೀಗಾಗಿ ಕೆಲವು ರಾಶಿಯವರು ಕೆಲ ಬಣ್ಣದ ಬಟ್ಟೆಗಳನ್ನು ಧರಿಸಬಾರದು. ಹಾಗಾದರೆ ಯಾವ ರಾಶಿಯವರು ಯಾವ ಬಣ್ಣದ ಬಟ್ಟೆ ಧರಸಬಾರದು ಎಂದು ಈಗ ತಿಳಿಯೋಣ.
ಗ್ರಹಗಳ ಕಮಾಂಡರ್ ಮಂಗಳ ಗ್ರಹದ ರಹಸ್ಯಗಳು
2025ರ ಮೂಲ ಸಂಖ್ಯೆ 9 ಇದು ಮಂಗಳದ ಸಂಕೇತವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳ ವರ್ಷದಲ್ಲಿ ಕೆಲವರು ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸುವುದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಹಾಗಾದರೆ 2025 ರಲ್ಲಿ ಯಾವ ಜನರು ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಬಾರದು ಎಂದು ಈಗ ತಿಳಿಯೋಣ.
ಈ ಜನರು 2025ರಲ್ಲಿ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಲೇಬಾರದು
ತುಂಬಾ ಕೋಪಗೊಳ್ಳುವ ಜನರು 2025ರಲ್ಲಿ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಬಾರದು. ಅವರು ಯಾವಾಗಲೂ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಬೇಕು. ಕೆಂಪು ಬಣ್ಣದ ಸಂಕೇತ - ಕೋಪ, ಶಕ್ತಿ, ಧೈರ್ಯ, ಮಹತ್ವಾಕಾಂಕ್ಷೆ, ಶೌರ್ಯ, ಸನಾತನ ಮತ್ತು ಪುನರ್ಜನ್ಮದ ಅಂಶವಾಗಿದೆ. ಮಂಗಳದ ಬಣ್ಣವನ್ನು ಸಹ ಕೆಂಪು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ತುಂಬಾ ಕೋಪ ಇರುವವರು ಕೆಂಪು ಬಣ್ಣದ ಬಟ್ಟೆಯಿಂದ ದೂರವಿರಬೇಕು.
ನಿಮ್ಮ ರಾಶಿ ಯಾವುದೇ ಆಗಿರಲಿ ನೀವು ತುಂಬಾ ಕೋಪಗೊಂಡರೆ ಕೆಂಪು ಬಣ್ಣವನ್ನು ಧರಿಸಬೇಡಿ. ಮಂಗಳನು ನಿಮ್ಮ ರಾಶಿಯ ಅಧಿಪತಿಯಾಗಿದ್ದರೂ ಸಹ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸುವುದು ಉತ್ತಮ. ವಿಶೇಷವಾಗಿ ಕೋಪಗೊಳ್ಳುವ ರಾಶಿಯ ಜನರು ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಬಾರದು.
ಕೆಂಪು ಬಣ್ಣಕ್ಕೆ ಬದಲಾಗಿ ಈ ಬಣ್ಣವನ್ನು ಧರಿಸುವುದು ಮಂಗಳಕರ
ಮಂಗಳ ಗ್ರಹವನ್ನು ಆಳುವ ರಾಶಿಗಳು ತುಂಬಾ ಕೋಪಗೊಳ್ಳುತ್ತಾರೆ. ಹೀಗಾಗಿ 2025 ರಲ್ಲಿ ಕೆಂಪು ಬಣ್ಣಕ್ಕೆ ಬದಲಾಗಿ ಬಿಳಿ, ಗುಲಾಬಿ ಮತ್ತು ಹಳದಿ ಬಣ್ಣಗಳು ನಿಮಗೆ ಮಂಗಳಕರವಾಗಿರುತ್ತದೆ. 2025ರಲ್ಲಿ ಈ ಬಣ್ಣಗಳ ಬಟ್ಟೆಗಳನ್ನು ಧರಿಸುವುದರಿಂದ ಪ್ರಗತಿ ಮತ್ತು ಮನಸ್ಸಿನಲ್ಲಿ ಶಾಂತಿ ಹೆಚ್ಚಾಗುತ್ತದೆ.
ಈ 3 ರಾಶಿಯವರು ಚಿನ್ನವನ್ನು ಧರಿಸಬಾರದು..
ಜ್ಯೋತಿಷ್ಯದ ಪ್ರಕಾರ ಕಲ್ಲುಗಳು ಮತ್ತು ಲೋಹಗಳು ಗ್ರಹಗಳೊಂದಿಗೆ ಸಂಬಂಧ ಹೊಂದಿವೆ. ಉದಾಹರಣೆಗೆ, ಕಬ್ಬಿಣ ಶನಿಗ್ರಹದೊಂದಿಗೆ ಸಂಬಂಧಿಸಿದೆ. ಹಾಗೆಯೇ ಚಿನ್ನವು ಗುರುವಿಗೆ ಸಂಬಂಧಿಸಿದೆ.
ಲೋಹಗಳಲ್ಲಿ ಚಿನ್ನ ಅತ್ಯಂತ ಅಮೂಲ್ಯವಾದುದು. ಈ ಚಿನ್ನ ಸುಂದರವಾದ ನೋಟವನ್ನು ನೀಡುತ್ತದೆ. ಮಹಿಳೆಯರಿಗೆ ಚಿನ್ನದ ಆಭರಣಗಳ ಮೇಲೆ ಸ್ವಲ್ಪ ಹೆಚ್ಚೇ ಆಸೆ ಇರುತ್ತದೆ. ಒಂದು ವೇಳೆ ಜಾತಕದಲ್ಲಿ ಗುರು ದುರ್ಬಲವಾಗಿದ್ದರೆ ಅಂಥವರು ಚಿನ್ನವನ್ನು ಧರಿಸುವುದರಿಂದ ಬಲ ಪ್ರಾಪ್ತಿಯಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಇದಕ್ಕಾಗಿಯೇ ಕೆಲವು ರಾಶಿಚಕ್ರದವರು ಚಿನ್ನವನ್ನು ಧರಿಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯುತ್ತಾರೆ. ಆದರೆ ಕೆಲವು ರಾಶಿಯವರಿಗೆ ಚಿನ್ನ ಧರಿಸುವುದು ಒಳ್ಳೆಯದಲ್ಲ. ಧರಿಸಿದರೆ ತಮ್ಮ ಜೀವನದಲ್ಲಿ ವಿವಿಧ ಸಮಸ್ಯೆಗಳನ್ನು ಮತ್ತು ಕಷ್ಟಗಳನ್ನು ಎದುರಿಸುತ್ತಾರೆ ಎಂದು ಹೇಳಲಾಗುತ್ತದೆ. ಈಗ ಯಾವ ರಾಶಿಯವರು ಚಿನ್ನವನ್ನು ಧರಿಸಬಾರದು ಎಂದು ನೋಡೋಣ.

ವೃಷಭ ರಾಶಿ
ವೃಷಭ ರಾಶಿಯವರು ಚಿನ್ನದ ಉಂಗುರಗಳು ಮತ್ತು ಚಿನ್ನದ ಸರಗಳಂತಹ ಆಭರಣಗಳನ್ನು ಧರಿಸುವುದನ್ನು ತಪ್ಪಿಸಬೇಕು. ಏಕೆಂದರೆ ಈ ರಾಶಿಯವರಿಗೆ ಚಿನ್ನ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ತರುತ್ತದೆ. ಅದೂ ಕೂಡ ಕೆಲಸದಲ್ಲಿ ಪ್ರಗತಿ ಕಾಣುವುದಿಲ್ಲ. ಆರೋಗ್ಯ ಹದಗೆಡಲಿದೆ. ವ್ಯವಹಾರದಲ್ಲಿ ಯಶಸ್ಸು ಕಷ್ಟವಾಗಬಹುದು. ಬಹಳಷ್ಟು ಹಣದ ನಷ್ಟ ಉಂಟಾಗಲಿದೆ. ಮುಖ್ಯವಾಗಿ ನೀವು ಬಹಳಷ್ಟು ಹಣದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಮಕರ ರಾಶಿ
ಮಕರ ರಾಶಿಯವರು ಚಿನ್ನವನ್ನು ಧರಿಸುವುದು ಒಳ್ಳೆಯದಲ್ಲ. ಬಹುಶಃ ಈ ರಾಶಿಚಕ್ರದವರು ಚಿನ್ನದ ಆಭರಣಗಳನ್ನು ಧರಿಸಿದರೆ, ಅವರು ಆಗಾಗ್ಗೆ ಕೆಲವು ಆರೋಗ್ಯ ಸಮಸ್ಯೆಯಿಂದ ಬಳಲಬಹುದು. ಜೀವನದಲ್ಲಿ ಅನೇಕ ಕೆಟ್ಟ ಬದಲಾವಣೆಗಳನ್ನು ಕಾಣಬಹುದು. ಮುಖ್ಯವಾಗಿ ಹೊಟ್ಟೆ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಎಷ್ಟೇ ಪ್ರಯತ್ನ ಪಟ್ಟರೂ ವ್ಯಾಪಾರದಲ್ಲಿ ಯಶಸ್ಸು ಸಿಗುವುದು ಕಷ್ಟ. ಕೆಲಸದಲ್ಲಿ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬಹುದು.

ಕುಂಭ ರಾಶಿ
ಕುಂಭ ರಾಶಿಯವರು ಬಂಗಾರದ ಆಭರಣಗಳನ್ನು ಧರಿಸುವುದು ಒಳ್ಳೆಯದಲ್ಲ. ಈ ಸ್ಥಳೀಯರು ಚಿನ್ನವನ್ನು ಧರಿಸಿದರೆ, ಅವರು ಕುಟುಂಬದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದರೊಂದಿಗೆ ನೀವು ವೃತ್ತಿಪರ ಸಮಸ್ಯೆಗಳನ್ನು ಎದುರಿಸಬಹುದು. ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗಬಹುದು.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)
-
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು?












Click it and Unblock the Notifications