ಸಂಖ್ಯಾಶಾಸ್ತ್ರದ ಪ್ರಕಾರ ಯಡಿಯೂರಪ್ಪಗೆ ಕಷ್ಟ ಕಷ್ಟ ಕಷ್ಟ!
ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿರುವ ಯಡಿಯೂರಪ್ಪನವರು ಮೇ 19ರಂದು ಶನಿವಾರ ವಿಶ್ವಾಸಮತ ಯಾಚಿಸಲಿದ್ದು, ಗೆದ್ದು ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಅವರಿಗೆ ಕೆಲ ಲಿಂಗಾಯತ ಶಾಸಕರ ಬೆಂಬಲ ಸಿಗುತ್ತೋ ಇಲ್ಲವೋ ಗೊತ್ತಿಲ್ಲ.
ಯಡಿಯೂರಪ್ಪನವರ ಜಾತಕ ಮತ್ತು ಗ್ರಹಗತಿಗಳ ಪ್ರಕಾರ ಮುಂದೆ ಏನಾಗಲಿದೆ ಎಂಬ ವಿಶ್ಲೇಷಣೆಯನ್ನೂ ಖ್ಯಾತ ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಅವರು ಮಾಡಿದ್ದಾರೆ. ಈಗ, ಸಂಖ್ಯಾಶಾಸ್ತ್ರಜ್ಞರೊಬ್ಬರು ಯಡಿಯೂರಪ್ಪನವರು ಪ್ರಮಾಣ ವಚನ ಸ್ವೀಕರಿಸಿದ ಘಳಿಗೆಯ ವಿಶ್ಲೇಷಣೆ ಮಾಡಿದ್ದಾರೆ.
ನಾಗರಾಜ್ ಎನ್ ಪಾಟೀಲ ಎಂಬ ಖ್ಯಾತ ಸಂಖ್ಯಾಶಾಸ್ತ್ರಜ್ಞರ ಪ್ರಕಾರ, ಯಡಿಯೂರಪ್ಪನವರು ಪ್ರಮಾಣ ಸ್ವೀಕರಿಸುವಾಗಲೇ ಎಡವಿದ್ದಾರೆ. ಅಂದರೆ, ತಪ್ಪು ದಿನಾಂಕದಂದು ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿ ತಪ್ಪು ಮಾಡಿದ್ದಾರೆ. ನಾಗರಾಜ್ ಅವರ ವಿವರಣೆ ಮುಂದಿನಂತೆ ಇದೆ.

ಯಡಿಯೂರಪ್ಪನವರು ಹುಟ್ಟಿದ್ದು 27ನೇ ತಾರೀಖಿನಂದು (27ನೇ ಫೆಬ್ರವರಿ 1943). ಎರಡೂ ಸಂಖ್ಯೆ ಸೇರಿದರೆ 9 ಆಗುತ್ತದೆ. ಆದರೆ, ಅವರು ಪ್ರಮಾಣ ವಚನ ಸ್ವೀಕರಿಸಿದ್ದು 17ರಂದು. ಎರಡೂ ಸಂಖ್ಯೆಯನ್ನು ಕೂಡಿದರೆ ಬರುವುದು 8. ಇದು 9ನೇ ಸಂಖ್ಯೆಗೆ ತದ್ವಿರುದ್ಧ.
* ಸಂಖ್ಯಾಶಾಸ್ತ್ರದ ಪ್ರಕಾರ 9 ಮತ್ತು 8 ಸಂಖ್ಯೆಗಳಿಗೆ ಆಗಿಬರುವುದಿಲ್ಲ. ಎರಡೂ ತದ್ವಿರುದ್ಧ. ಗ್ರಹಗಳು ಕೂಡ ಇದನ್ನೇ ಸೂಚಿಸುತ್ತವೆ. 9ನೇ ಸಂಖ್ಯೆಯನ್ನು ಮಂಗಳ ಪ್ರತಿನಿಧಿಸುತ್ತಿದ್ದರೆ, 8ನೇ ಸಂಖ್ಯೆಯನ್ನು ಶನಿ ಪ್ರತಿನಿಧಿಸುತ್ತದೆ.
* ಇನ್ನು, 17ನೇ ಮೇ, 2018ನ್ನು ಒಟ್ಟಾರೆಯಾಗಿ ಕೂಡಿಸಿದರೆ ಬರುವ ಸಂಖ್ಯೆ 15. ಇದು ಅತೀವ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ ಮತ್ತು ಇದು ಭವಿಷ್ಯದಲ್ಲಿ ಆಂತರಿಕ ಮತ್ತು ಬಾಹ್ಯ ರಾಜಕೀಯ ವೈರಿಗಳನ್ನು ಸೃಷ್ಟಿಸುವಲ್ಲಿ ಸಹಕಾರಿಯಾಗುತ್ತದೆ. ವೈರಿಗಳು ಪ್ರತಿಸ್ಪರ್ಧಿಗಳಿಂದಲೂ ಹುಟ್ಟಬಹುದು ಅಥವಾ ಮಹಿಳಾ ನಾಯಕಿಯರಿಂದಲೂ ಹುಟ್ಟಬಹುದು.
* ಒಂದು ವೇಳೆ ವಿಶ್ವಾಸಮತ ಗೆದ್ದಮೇಲೆ ಕೂಡ ಸರಕಾರ ರಚಿಸಿದ ನಂತರ ಭವಿಷ್ಯದಲ್ಲಿ ಹಲವಾರು ಗಂಭೀರ ಪರಿಸ್ಥಿತಿಗಳನ್ನು ಎದುರಿಸುವಂತಾಗಬಹುದು.

* ಕಾನೂನಾತ್ಮಕವಾಗಿ, ರಾಜಕೀಯವಾಗಿ ಮತ್ತು ವೈಯಕ್ತಿಕವಾಗಿ ಹಲವಾರು ಅಡೆತಡೆಗಳನ್ನು ಅವರು ಎದುರಿಸಲಿದ್ದಾರೆ. ಇದೆಲ್ಲದರಿಂದಾಗಿ ಅವರ ವೈಯಕ್ತಿಕ ಇಮೇಜಿಗೆ ಭಾರೀ ಹೊಡೆತ ಬೀಳುತ್ತದೆ. ಇಷ್ಟು ಮಾತ್ರವಲ್ಲ ಅವರ ಆರೋಗ್ಯದ ಮೇಲೆ ಕೂಡ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications