Get Updates
Get notified of breaking news, exclusive insights, and must-see stories!

ಮಲ್ಲಿಗೆ ಹೂ ಕೃಷಿಯಲ್ಲಿ ಯಶಸ್ಸು ಕಂಡ ಮಾದರಿ ರೈತ

ರಾಯಚೂರು ಜನವರಿ 4: ರೈತರ ಜೀವನ ಸಂಕಷ್ಟದಲ್ಲಿದೆ. ಸಮಸ್ಯೆಗಳ ಆಗರವಾಗಿದೆ. ಕೃಷಿಯಲ್ಲಿ ಆಗುವ ಆರ್ಥಿಕ ನಷ್ಟಕ್ಕೆ ಅದೆಷ್ಟೋ ರೈತರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಹೀಗಿರುವಾಗ ರಾಯಚೂರಿನ ರೈತರೊಬ್ಬರು ಹೂವು ಬೆಳೆಸುವ ಮೂಲಕ ಮತ್ತೊಬ್ಬರಿಗೆ ಮಾದರಿಯಾಗಿದ್ದಾರೆ.

ಹೌದು... ಮಾನ್ವಿ ತಾಲ್ಲೂಕಿನ ಕುರ್ಡಿ ಗ್ರಾಮದ ರೈತ ತಿಪ್ಪಣ್ಣ ಹೂಗಾರ ಮಲ್ಲಿಗೆ ಹೂ ಕೃಷಿಯಲ್ಲಿ ಯಶಸ್ಸು ಕಾಣುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆಯ ಮೂಲಕ ನರೇಗಾ ಯೋಜನೆಯ ನೆರವಿನಿಂದ ತಮ್ಮ ಮಳೆ ಆಶ್ರಿತ ಕಪ್ಪು ಮಣ್ಣಿನ ಒಂದು ಎಕರೆ ಜಮೀನಿನಲ್ಲಿ ಮಲ್ಲಿಗೆ ಹೂ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದಾರೆ.

Success in Jasmine Flower Farming: Raichur Model Farmer

2022-23ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯ ಮೂಲಕ ಅಂದಾಜು ಮೊತ್ತ ₹46,378 ವೆಚ್ಚದಲ್ಲಿ ಮಲ್ಲಿಗೆ ಹೂ ಕೃಷಿ ಆರಂಭಿಸಿದ್ದರು. ನರೇಗಾ ಯೋಜನೆಯ ಅಡಿಯಲ್ಲಿ ಸದರಿ ಕಾಮಗಾರಿಯನ್ನು ಮೂರು ಜನರ ಕೂಲಿಕಾರ್ಮಿಕರ 90 ಮಾನವ ದಿನಗಳನ್ನು ಸೃಜನೆ ಮಾಡಿ ಮೊದಲ ಹಂತದಲ್ಲಿ 300 ಸಸಿಗಳನ್ನು ನೆಟ್ಟಿದ್ದರು. ₹28,201 ಕೂಲಿ ಜೊತೆಗೆ ಸಾಮಗ್ರಿ ವೆಚ್ಚವಾಗಿ ₹18,276 ಒಟ್ಟು ₹46,377 ಪಡೆದಿದ್ದರು.

ಎರಡನೇ ಹಂತದಲ್ಲಿಯೂ ಅರ್ಧ ಎಕರೆ ಜಮೀನಿನಲ್ಲಿ 300 ಸಸಿಗಳನ್ನು ನೆಡುವ ಕಾಮಗಾರಿ ನಿರ್ವಹಣೆಗೆ ಮೂರು ಜನರ ಕೆಲಸಕ್ಕೆ 90 ಮಾನವ ದಿನಗಳನ್ನು ಸೃಜನೆ ಮಾಡಿ ₹28,201 ಕೂಲಿ ಹಣ ಜೊತೆಗೆ ಸಾಮಗ್ರಿ ವೆಚ್ಚವಾಗಿ ₹18,276 ಒಟ್ಟು ₹46,377 ಪಡೆದಿದ್ದರು. ಮಳೆ ಕೊರತೆಯಾದಾಗ ಜಮೀನಿನಲ್ಲಿರುವ ಕೊಳವೆ ಬಾವಿಯಿಂದ ನೀರಿನ ಸೌಲಭ್ಯ ದೊರೆತಿದೆ.

Success in Jasmine Flower Farming: Raichur Model Farmer

ಈ ವರ್ಷ ತೋಟದಲ್ಲಿ ಮಲ್ಲಿಗೆ ಹೂಗಳು ಅರಳಿ ಮಾರಾಟ ಆರಂಭಿಸಿದ್ದಾರೆ. ಪ್ರತಿ ದಿನ 4ರಿಂದ 5 ಕೆ.ಜಿ ಹೂವುಗಳ ಮಾರಾಟದಿಂದ ಮಾಡಿ ಒಂದು ವರ್ಷದಲ್ಲಿ ಎಲ್ಲಾ ಖರ್ಚು ವೆಚ್ಚಗಳನ್ನು ತೆಗೆದು ₹1 ಲಕ್ಷ ಆದಾಯ ಗಳಿಸಿದ್ದಾರೆ. 'ಈ ಮೊದಲ ನಮ್ಮ ಹೊಲದಲ್ಲಿ ತೊಗರಿ, ಸಜ್ಜೆ, ಹತ್ತಿ ಬಿತ್ತನೆ ಮಾಡಿದರೆ, ಒಂದು ಎಕರೆಗೆ ₹25 ಸಾವಿರ ಆದಾಯ ಬರುತ್ತಿತ್ತು. ಆದರೆ, ಮಲ್ಲಿಗೆ ಹೂವು ಬೆಳೆಯಿಂದ ₹1 ಲಕ್ಷ ನಿವ್ವಳ ಲಾಭ ಗಳಿಸಲು ಸಾಧ್ಯವಾಗಿದೆ' ಎಂದು ತಿಪ್ಪಣ್ಣ ಹೂಗಾರ ಹೇಳುತ್ತಾರೆ.

ನರೇಗಾ ಯೋಜನೆಯ ನೆರವನ್ನು ಸದ್ಬಳಕೆ ಮಾಡಿಕೊಂಡಿರುವ ರೈತ ತಿಪ್ಪಣ್ಣ ಹೂಗಾರ ಸಾಧನೆಗೆ ಗ್ರಾಮ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಈ ಬಗ್ಗೆ ಮಾತನಾಡಿದ ಕುರ್ಡಿ ರೈತ ತಿಪ್ಪಣ್ಣ ಹೂಗಾರ, 'ನರೇಗಾ ಯೋಜನೆಯ ನೆರವಿನಿಂದ ‌ಮಲ್ಲಿಗೆ ಹೂವು ಕೃಷಿಯಲ್ಲಿ ಯಶಸ್ಸು ಗಳಿಸಲು ಅಧಿಕಾರಿಗಳ ಪ್ರೋತ್ಸಾಹ ಕಾರಣ' ಎಂದರು.

'ರೈತರು ತೋಟಗಾರಿಕೆ ಕೈಗೊಳ್ಳಲು ನರೇಗಾ ಯೋಜನೆಯ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು' ಎಂದು ಮಾನ್ವಿ ತಾಲ್ಲೂಕು ಪಂಚಾಯಿತಿ ನರೇಗಾ ಐಇಸಿ ಸಂಯೋಜಕ ಈರೇಶ ಅವರು ಕಿವಿ ಮಾತು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+