ಗದಗದಲ್ಲಿ ಅತ್ಯಾಧುನಿಕ ನಾಸಿಕ್ ಮಾದರಿ ಈರುಳ್ಳಿ ಗೋದಾಮು ನಿರ್ಮಾಣ
ಗದಗ, ಸೆಪ್ಟೆಂಬರ್ 11: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ರಾಜ್ಯದ ಮೊದಲ ಅತ್ಯಾಧುನಿಕ ಈರುಳ್ಳಿ ಗೋದಾಮು ತಲೆ ಎತ್ತಲಿದೆ.
ಅಂದುಕೊಂಡಂತೆ ನಡೆದರೆ 2018ಕ್ಕೆ ಗದಗದಲ್ಲಿ ನಾಸಿಕ್ ಮಾದರಿಯ ಈರುಳ್ಳಿ ಗೋದಾಮು ಗದಗದಲ್ಲಿ ತಲೆ ಎತ್ತಲಿದೆ.

2016-17ನೇ ಸಾಲಿನ ಬಜೆಟ್ನಲ್ಲಿ ಈರುಳ್ಳಿ ಗೋದಾಮು ನಿರ್ಮಾಣಕ್ಕೆ 5 ಕೋಟಿ ರೂ. ಎತ್ತಿಡಲಾಗಿತ್ತು. ಈ ಹಣದಲ್ಲಿ 11 ಸಾವಿರ ಚದರ ಅಡಿ ವಿಸ್ತೀರ್ಣದ ಬೃಹತ್ ಗೋದಾಮು ನಿರ್ಮಾಣವಾಗಲಿದೆ. ಈ ಗೋದಾಮಿನಲ್ಲಿ ಒಂದೂವರೆ ಸಾವಿರ ಟನ್ ಈರುಳ್ಳಿ ಸಂಗ್ರಹಿಸಬಹುದಾಗಿದೆ. ಈ ಅತ್ಯಾಧುನಿಕ ಗೋದಾಮು ನಿರ್ಮಾಣಕ್ಕೆ ಈಗಾಗಲೆ ಟೆಂಡರ್ ಕೂಡಾ ಕರೆಯಲಾಗಿದೆ.
ರೈತರಿಗೆ ಅನುಕೂಲ
ನಾಸಿಕ್ ಗೋದಾಮನ್ನು ಅಧ್ಯಯನ ನಡೆಸಿ ಇಲ್ಲಿಯೂ ಅದೇ ರೀತಿ ಗೋದಾಮು ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಈ ಗೋದಾಮು ನಿರ್ಮಾಣವಾದರೆ ರೈತರಿಗೆ ಭಾರೀ ಅನುಕೂಲವಾಗಲಿದೆ.
ಸಾಮಾನ್ಯವಾಗಿ ಈರುಳ್ಳಿಗಳನ್ನು ಅಟ್ಟಿ ಇಟ್ಟರೆ ಮೊಳಕೆ ಬಂದು ಕೊಳೆತು ಹೋಗುತ್ತದೆ. ಇದಕ್ಕೆ ಪರಿಹಾರವಾಗಿ ಈ ಗೋದಾಮಿನಲ್ಲಿ ಅಟ್ಟಗಳನ್ನು ನಿರ್ಮಿಸಲಾಗುತ್ತದೆ. ಈ ಅಟ್ಟಗಳಲ್ಲಿ ಚೌಕಾಕಾರದ ಕಬ್ಬಿಣದ ಗ್ಯಾಲರಿ ಇರುತ್ತದೆ.
ಪ್ರತಿ ಗ್ಯಾಲರಿಯನ್ನು ಒಬ್ಬೊಬ್ಬರು ರೈತರಿಗೆ ನೀಡಲಾಗುತ್ತದೆ. ಅವುಗಳ ಕೀಲಿ ಕೈ ಕೂಡ ರೈತರ ಬಳಿಯೇ ಇರುತ್ತದೆ. ಈ ಗೋದಾಮಿನೊಳಗೆ ಸಾಕಷ್ಟು ಗಾಳಿ, ಬೆಳಕಿಗೆ ವ್ಯವಸ್ಥೆ ಇರುತ್ತದೆ. ರೈತರು ಉಚಿತವಾಗಿ ಇಲ್ಲಿ 15 ದಿನಗಳವರೆಗೆ ಈರುಳ್ಳಿಯನ್ನು ಇಡಲು ಅವಕಾಶವಿದೆ.
ಗೋದಾಮಿನಿಂದ ಖರೀದಿದಾರರಿಗೆ ಅನುಕೂಲವಾಗಿದ್ದು ನೇರವಾಗಿ ಗೋದಾಮಿಗೆ ಬಂದು ಖರೀದಿ ನಡೆಸಬಹುದಾಗಿದೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು












Click it and Unblock the Notifications