ಹಣಕೋಣ ಯೋಜನೆ ಸಾಧ್ಯವಿಲ್ಲ, ಪಾಟ್ಕರ್
ಕಾರವಾರ, ಡಿ. 20 : ಹಣಕೋಣ ಗ್ರಾಮದಲ್ಲಿ ಯಾವುದೇ ಕಾರಣಕ್ಕೂ ಉಷ್ಣವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಹಣಕೋಣ ವಿಷಯದಲ್ಲಿ ಕಾನೂನು ಜನಪರವಾಗಿದ್ದರೆ ಸರಿ. ಜನಹಿತ ಕಡೆಗಣಿಸುವ ತೀರ್ಪುಗಳು ಬಂದರೆ ಕಾನೂನು ಕೈಗೆತ್ತಿಕೊಳ್ಳಲು ಹಿಂಜರಿಯುವುದಿಲ್ಲ ಎಂದು ಪರಿಸರವಾದಿ ಮೇಧಾ ಪಾಟ್ಕರ್ ಎಚ್ಚರಿಸಿದ್ದಾರೆ.
ಹಣಕೋಣದ ಸಾತೇರಿ ದೇವಸ್ಥಾನದಲ್ಲಿ ಹಣಕೋಣ ಉಷ್ಣಸ್ಥಾವರ ವಿರೋಧಿ ಹೋರಾಟಗಾರರನ್ನುದ್ದೇಶಿಸಿ ಶನಿವಾರ ಮಾತನಾಡಿದ ಅವರು, ಹಣಕೋಣ ಹೋರಾಟಗಾರರ ಮೇಲೆ ನಡೆಸಲಾದ ದೌರ್ಜನ್ಯ ಅಮಾನವೀಯ. ಹೋರಾಟಗಾರರ ಶಕ್ತಿ ಏನೆಂಬುದು ಸರಕಾರಕ್ಕೆ ಗೊತ್ತು. ಹೀಗಾಗಿ ಇಲ್ಲಿನ ಜೈಲಿನಲ್ಲಿಟ್ಟರೆ ತಾವೇ ತೊಂದರೆಗೆ ಒಳಗಾಗಬೇಕಾಗುತ್ತದೆ ಎಂಬುದನ್ನು ಅರಿತೇ ಎಲ್ಲರನ್ನು ಬಳ್ಳಾರಿ ಜೈಲಿನಲ್ಲಿ ಇರಿಸಲಾಗಿತ್ತು. ಉಷ್ಣ ಸ್ಥಾವರ ಇಲ್ಲಿಂದ ತೊಲಗುವವರೆಗೆ ಹೋರಾಟ ಮುಂದುವರಿಯುತ್ತದೆ. ಎಂಥ ದೌರ್ಜನ್ಯಕ್ಕೂ ನಾವು ಬಗ್ಗುವುದಿಲ್ಲ ಎಂದರು.
ವಿಕಾಸದ ಅನುಷ್ಠಾನ ಸುಳ್ಳಿನ ಆಧಾರದ ಮೇಲೆ ಆಗುತ್ತಿದ್ದು ಪರಿಸರ ಹಾಗೂ ಜನಜೀವನವನ್ನು ವಿನಾಶದತ್ತ ತಳ್ಳುತ್ತಿದೆ. ನಮಗೆ ವಿಕಾಸ ಬೇಕು. ಆದರೆ ವಿನಾಶ ಬೇಡ. ಕಾಳಿ ನದಿ ಇಲ್ಲಿನ ಜನರ ಜೀವನಾಡಿ. ಇಲ್ಲಿನ ವಿಕಾಸ ಯಾವ ರೀತಿಯದ್ದಿರಬೇಕು ಎಂಬುದನ್ನು ನಿರ್ಧರಿಸಬೇಕಾದದ್ದು ಈ ಕೊಳ್ಳವನ್ನು ಅವಲಂಬಿಸಿ ಜೀವಿಸುವ ಜನತೆ ಎಂದ ಮೇಧಾ, ಕೋಟ್ಯಂತರ ಜೀವಿಗಳಿಗೆ ಜೀವನ ನೀಡುವ ಸಮುದ್ರ ಮುಂದೆ ಬರದಂತೆ ತಡೆಯುವ ಶಕ್ತಿ ನದಿಗಳಿಗಿದೆ ಎಂದು ಹೇಳಿದರು.
ಹಣಕೋಣ ಹೋರಾಟದಲ್ಲಿ ಯಾರೂ ಕಲ್ಲು ತೂರಿಲ್ಲ, ಬಂದೂಕು ಎತ್ತಿಕೊಂಡಿಲ್ಲ. ತಮ್ಮ ಮೇಲೆ ದೌರ್ಜನ್ಯ ನಡೆದಾಗಲೂ ಹೋರಾಟಗಾರರು ಶಾಂತಿಯುತವಾಗಿ ಚಳವಳಿ ಮುಂದುವರಿಸಿರುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು. ಮೇಧಾ ಪಾಟ್ಕರ್ ಕೋಡಿಬಾಗದಿಂದ ಹಣಕೋಣದವರೆಗೆ ಕಾಳಿ ನದಿಯಲ್ಲಿ ಬೋಟ್ ಮೂಲಕವೇ ತೆರಳಿದರು.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications