ಮಾವಿನ ಗಿಡಗಳ ಆರೈಕೆ; ರೈತರಿಗೆ ಸಲಹೆಗಳು
ಬೆಂಗಳೂರು, ಆಗಸ್ಟ್ 08; ಮಾವಿನ ಹಣ್ಣಿನ ಕೊಯ್ಲು ಮುಗಿದ ಬಳಿಕ ಮುಂಗಾರು ಹಂಗಾಮಿನಲ್ಲಿ ಮಾವಿನ ಗಿಡಗಳ ರಕ್ಷಣೆಗೆ ರೈತರು ಗಮನ ಕೊಡಬೇಕಿದೆ. ರೆಂಬೆ ತೆರವುಗೊಳಿಸುವಿಕೆ, ಗೊಬ್ಬರ ನೀಡುವುದು, ತೋಟಗಳ ಕಳೆ ನಿರ್ವಹಣೆ ಬಗ್ಗೆ ತೋಟಗಾರಿಕಾ ಇಲಾಖೆ ಮಾವು ಬೆಳೆಗಾರರಿಗೆ ಕೆಲವು ಸಲಹೆಗಳನ್ನು ನೀಡಿದೆ.
ಮರದ ಮಧ್ಯದ 1 ರಿಂದ 2 ರೆಂಬೆಗಳನ್ನು ತೆಗೆದು ಮೇಲ್ಭಾಗದಿಂದ ಸೂರ್ಯ ಕಿರಣಗಳು ಮರದ ಒಳಗಿನ ಎಲ್ಲಾ ಭಾಗಗಳನ್ನು ತಲುಪುವಂತೆ ಮಾಡಬೇಕು. ಇದಾದ ನಂತರ ಮರದ ಬದಿಗಳ ದಟ್ಟತೆಯನ್ನು ಕಡಿಮೆ ಮಾಡಲು ಹಲವಾರು ಬದಿ ರೆಂಬೆಗಳನ್ನು ಕತ್ತರಿಸಿ ತೆಗೆಯುವುದು. ಒಟ್ಟಾರೆ ಈ ಕ್ರಮಗಳಿಂದ ಗಿಡದ ಎಲ್ಲಾ ಭಾಗಗಳಲ್ಲಿ ಸೂರ್ಯನ ಬೆಳಕು ಗಾಳಿಯಾಡುವಿಕೆ ಉತ್ತಮಗೊಳಿಸಬೇಕು ಎಂದು ಸಲಹೆ ನೀಡಲಾಗಿದೆ.

ಮಾವು ಬೆಳೆಗಾರರು ಆಗಸ್ಟ್ ತಿಂಗಳಿನಲ್ಲಿ ರೆಂಬೆಗಳನ್ನು ತೆರವುಗೊಳಿಸಿ ಮರದ ಎಲ್ಲಾ ಭಾಗಗಳಲ್ಲಿ ಸೂರ್ಯನ ಬೆಳಕು ಹಾಗೂ ಗಾಳಿಯಾಡುವಿಕೆ ಉತ್ತಮಗೊಳಿಸಬೇಕು. ಇದರಿಂದಾಗಿ ಹೂ ಬಿಡುವಿಕೆ, ಫಸಲಿನ ಪ್ರಮಾಣ ಮತ್ತು ಹಣ್ಣಿನ ಗುಣಮಟ್ಟವನ್ನು ಅಧಿಕಗೊಳಿಸಲು ಸಾಧ್ಯವಾಗುತ್ತದೆ.
ಕತ್ತರಿಸುವಿಕೆಗೆ ಒಳಗಾದ ಮಾವಿನ ಗಿಡದ ಕಾಂಡದ ತುದಿಗಳಿಗೆ ಕಾಪರ್ ಆಕ್ಸಿ ಕ್ಲೋರೈಡ್ 50 ಗ್ರಾಂ ಮತ್ತು ಕ್ಲೋರೋಪೈರಿಪಾಸ್ 5 ಮಿ.ಲಿ.ಯನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಬ್ರಶ್ ಮೂಲಕ ಲೇಪಿಸುವುದು.
ಕಾಂಡ ಕೊರಕದ ಹಾವಳಿ; ಮುಖ್ಯವಾಗಿ ಮಾವಿನ ಬಾದಾಮಿ ತಳಿಯಲ್ಲಿ ಕಾಂಡ ಕೊರಕದ ಹಾವಳಿ ಬಹು ಸಾಮಾನ್ಯವಾಗಿದೆ. ಕಾಂಡದ ಬುಡದಲ್ಲಿ ಮರದ ಹೊಟ್ಟು ಕಾಣಿಸಿಕೊಂಡಲ್ಲಿ ಕಾಂಡ ಕೊರಕವು ಇರುತ್ತದೆ. ಅಂತಹ ಮರಗಳಲ್ಲಿ ಉಂಟಾಗಿರುವ ರಂಧ್ರಗಳಲ್ಲಿ ಚೂಪಾದ ತಂತಿಯನ್ನು ತೂರಿಸಿ ಒಳಗಿರುವ ಹುಳುವನ್ನು ನಾಶ ಪಡಿಸುವುದು. ಅಲ್ಲದೇ ಆ ರಂಧ್ರಗಳ ಒಳಗೆ ಡೈಕ್ಲೋರೋವಾಸ್ (ನುವಾನ್) ರಾಸಾಯನಿಕವನ್ನು ಹತ್ತಿಯಲ್ಲಿ ನೆನಸಿ ಒಳ ತೂರಿಸಿ ರಂಧ್ರದ ಬಾಯಿಯನ್ನು ಹಸಿಮಣ್ಣಿನಿಂದ ಮುಚ್ಚುವುದು. ಇದರಿಂದ ಒಳಗಿರುವ ಕಾಂಡ ಕೊರಕ ಸಾಯುತ್ತದೆ ಎಂದು ತಿಳಿಸಲಾಗಿದೆ.
ಕಾಂಡ ಕೊರಕದ ಪುನರಾವರ್ತನೆಯನ್ನು ತಪ್ಪಿಸಲು ಮಾವಿನ ಗಿಡದ ಕಾಂಡಕ್ಕೆ ಕಾಂಡ ರಕ್ಷಣಾ ಪೇಸ್ಟ್ ಲೇಪಿಸುವ ಅಗತ್ಯತೆ ಇದೆ. ಈ ಪದಾರ್ಥಗಳನ್ನು ಒಂದು ಲೀಟರ್ ನೀರಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ 3 ಬ್ರಶ್ ಸಹಾಯದಿಂದ ಮಾವಿನ ಕಾಂಡದ ಬುಡಕ್ಕೆ ಮೂರು ಅಡಿ ಎತ್ತರದವರೆಗೆ ಚೆನ್ನಾಗಿ ಲೇಪಿಸುವುದು.
ಮಾವಿನ ಮರದಲ್ಲಿ ಪರಾವಲಂಬಿ (ಬದನಿಕೆ) ಸಸ್ಯಗಳು ಬೆಳೆದಿರುವುದು ಕಂಡು ಬಂದಲ್ಲಿ ಅವುಗಳನ್ನು ಸಂಪೂರ್ಣವಾಗಿ ಕತ್ತರಿಸಿ ನಾಶಪಡಿಸುವುದು. ಈ ಪರಾವಲಂಬಿ ಸಸ್ಯಗಳು ಯಾವುದೇ ಕಾರಣಕ್ಕೂ ಹೂ ಬಿಟ್ಟು ಕಾಯಿ ಕಚ್ಚದಂತೆ ನೋಡಿಕೊಳ್ಳುವುದರಿಂದ ಇವುಗಳನ್ನು ಇತರೆ ಮರಗಳಿಗೆ ಹರಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವುದು.
ಈ ಸಮಯದಲ್ಲಿ ಗಿಡಗಳಿಗೆ ನೀಡುವ ಗೊಬ್ಬರಗಳಲ್ಲಿ ಸೇಂದ್ರೀಯ ಗೊಬ್ಬರಗಳಲ್ಲಿ ಬೇವಿನ ಹಿಂಡಿ, ತಿಪ್ಪೆಗೊಬ್ಬರ ಕಾಂಪೋಸ್ಟ್ಗಳು ಪ್ರಮುಖ. ಬೇವಿನ ಹಿಂಡಿಯನ್ನು ಪ್ರತಿ ವಯಸ್ಕ ಮರಕ್ಕೆ ಒಂದು ಕೆ.ಜಿ. ಪ್ರಮಾಣದಲ್ಲಿ ನೀಡುವುದರಿಂದ ಪೋಷಕಾಂಶಗಳ ಜೊತೆಗೆ ಹಣ್ಣಿನ ನೊಣಗಳ ಕೋಶ, ಗೆದ್ದಲು, ಗೊಣ್ಣೆಹುಳು ಮುಂತಾದವುಗಳು ಸಹ ನಿವಾರಣೆಯಾಗುತ್ತದೆ.
ತೋಟವನ್ನು ಚೆನ್ನಾಗಿ ಉಳುಮೆ ಮಾಡಿಸಿ ಕಸ, ಕಡ್ಡಿ, ಹುಲ್ಲುಗಳನ್ನು ತೆಗೆದು ಸ್ವಚ್ಛವಾಗಿಡಬೇಕು. ಮಾವಿನ ಮರಗಳಿಗೆ ಅವುಗಳ ವಯಸ್ಸಿಗೆ ಅನುಗುಣವಾಗಿ ಸೂಕ್ತ ಅಳತೆಯ ಪಾತಿ ಮಾಡಬೇಕು ಎಂದು ಸಲಹೆ ನೀಡಲಾಗಿದೆ.
ಮಾವು ಬೆಳೆಯುವ ರೈತರು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಜಿಲ್ಲಾ/ ತಾಲ್ಲೂಕು ಮಟ್ಟದ ತೋಟಗಾರಿಕೆ ಅಧಿಕಾರಿಗಳು ಮತ್ತು ಮಾವು ಅಭಿವೃದ್ಧಿ ನಿಗಮದ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.
-
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು?












Click it and Unblock the Notifications