ಲಾಕ್ಡೌನ್ ಸಡಿಲಿಕೆ: ಗಗನಕ್ಕೇರಿದ ಹಣ್ಣು ತರಕಾರಿ ಬೆಲೆ!
ಬೆಂಗಳೂರು, ಮೇ 26: ಲಾಕ್ ಡೌನ್ 4.0 ಜಾರಿಗೊಂಡ ಬೆನ್ನಲ್ಲೆ ಹಲವು ನಿಯಮಗಳನ್ನು ಸಡಿಲಿಕೆ ಮಾಡಿ, ವಿನಾಯತಿ ನೀಡಲಾಗಿದೆ. ಇದರಿಂದಾಗಿ ಹಣ್ಣು ಮತ್ತು ತರಕಾರಿ ದರ ಮನಬಂದಂತೆ ಏರಿಕೆಯಾಗುತ್ತಿದೆ. ಇದರಿಂದ ಗ್ರಾಹಕರ ಜೇಬಿಗೆ ಬೀಳುತ್ತಿದೆ.
ಚಿಲ್ಲರೆ ವ್ಯಾಪಾರಿಗಳು ಒಂದಕ್ಕೆ ಎರಡರಂತೆ ಬೆಲೆ ಏರಿಕೆ ಮಾಡುತ್ತಿರುವುದು ಕಂಡು ಬಂದಿದೆ. ಬೇಸಿಗೆಯಲ್ಲಿ ಹಣ್ಣು- ತರಕಾರಿ ಬೆಲೆ ಏರಿಕೆಯಾಗೋದು ಸಾಮಾನ್ಯ, ಆದರೆ ಈ ಬಾರಿ ಲಾಕ್ ಡೌನ್ ಇದ್ದ ಕಾರಣ ದರಗಳೆಲ್ಲ ಸ್ಥಿರವಾಗಿತ್ತು.
ಶುಭಸಮಾರಂಭಗಳಿಗೆ ನಿರ್ಬಂಧ, ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ಕೊರತೆಯಿಂದ ದರ ಇಳಿಕೆಯೂ ಆಗಿತ್ತು. ಆದರೆ, ಕಳೆದ ಒಂದು ವಾರದಿಂದ ತರಕಾರಿ ದರ ಗಗನಕ್ಕೇರುತ್ತಿದೆ. ಒಂದೆಡೆ ಲಾಕ್ ಡೌನ್ ನಿಂದ ನಷ್ಟ ಅನುಭವಿಸುತ್ತಿದ್ದೇವೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.

ಲಾಭಕ್ಕಾಗಿ ಚಿಲ್ಲರೆ ವ್ಯಾಪಾರಿಗಳ ತಂತ್ರ
ಇನ್ನೊಂದೆಡೆ, ಲಾಭಕ್ಕಾಗಿ ಚಿಲ್ಲರೆ ವ್ಯಾಪಾರಿಗಳು ಬಾಯಿಗೆ ಬಂದ ರೇಟ್ ಹೇಳುತ್ತಿದ್ದಾರೆ.
ಪ್ರತಿ ಸೊಪ್ಪಿನ ಕಟ್ಟಿಗೆ 20 ರು ದರವಿದೆ. ಒಂದು ವಾರದಿಂದ ತರಕಾರಿ, ಸೊಪ್ಪಿನ ದರ ಕೊಂಚ ಏರಿಕೆಯಾಗಿದೆ ಎಂದು ಹಾಪ್ಸ್ ಕಾಮ್ ದರ ಪಟ್ಟಿ ಕೂಡಾ ಹೇಳುತ್ತಿದೆ.

ಕೊತ್ತಂಬರಿ ಸೊಪ್ಪಿನ ಬೆಲೆ
ಸಗಟುದರ ಪ್ರತಿ ಕೊತ್ತಂಬರಿ ಸೊಪ್ಪಿನ ಕಟ್ಟಿಗೆ 30 ರಷ್ಟಿದೆ..! ಚಿಲ್ಲರೆ ಅಂಗಡಿಗಳಲ್ಲಿ ಕೊತ್ತಂಬರಿ ಸೊಪ್ಪಿನ ಮಧ್ಯಮ ಗಾತ್ರದ ಕಟ್ಟು ಒಂದಕ್ಕೆ 60 ರು ನಂತೆ ನಿಗದಿಯಾಗಿದೆ.
ಚಿಲ್ಲರೆ ವ್ಯಾಪಾರಿಗಳು ಸಬ್ಬಕ್ಕಿ ಸೊಪ್ಪು ಅನ್ನು15 ರೂ.ಗೆ ಮಾರಾಟ ಮಾಡುತ್ತಿದ್ದರೆ, ಪಾಲಕ್ ಸೊಪ್ಪಿನ ದರ-20ರೂ ಎಂದು ನಿಗದಿ ಪಡಿಸಿದ್ದಾರೆ.

ತರಕಾರಿಗಳ ದರ
ಮೇ 26ರಂದು ದರಗಳ ಪಟ್ಟಿ (ಪ್ರತಿ ಕೆ.ಜಿ.ಗೆ) ತರಕಾರಿ-ಸಗಟುದರ-ಹಾಪ್ಕಾಮ್ಸ್ದರ*
ಬೀನ್ಸ್-80-80
ಬೆಳ್ಳುಳ್ಳಿ-105-118
ಮೆಣಸಿನಕಾಯಿ-40-38
ಅಲೂಗಡ್ಡೆ-20-40
ಬೆಂಡೆಕಾಯಿ-15-28
ಕ್ಯಾರೆಟ್-15-34
ಈರುಳ್ಳಿ- 10-18
ಬದನೆ-10-25
ಬಿಟ್ರೋಟ್- 10-33
ಟೊಮೆಟೊ-10-15

ಹಣ್ಣುಗಳ ದರ
ಮೇ 26ರಂದು ದರಗಳ ಪಟ್ಟಿ (ಪ್ರತಿ ಕೆ.ಜಿ.ಗೆ)
ಹಣ್ಣುಗಳ - ಸಗಟುದರ - ಹಾಪ್ಕಾಮ್ಸ್ ದರ
ಸೇಬು-110- 168
ದಾಳಿಂಬೆ-85-128
ದ್ರಾಕ್ಷಿ-55- 96
ಕಿತ್ತಳೆ45- 102
ಮೂಸಂಬಿ-45-50
ಮಾವು- 45-65
ಸಪೊಟ- 30-35
ಎಲ್ಲಕ್ಕಿ ಬಾಳೆಹಣ್ಣು 30-44
-
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral












Click it and Unblock the Notifications