ಪ್ರೊ. ಎಂಡಿಎನ್ ಚಳವಳಿ ಮಾರ್ಗದ ಕುತೂಹಲಕಾರಿ ಘಟನೆಗಳು
ಇಂದು ಕರ್ನಾಟಕ ರಾಜ್ಯ ರೈತ ಸಂಘದ ಸಂಸ್ಥಾಪಕ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ಜನ್ಮದಿನ. ತಮ್ಮ ವಿಚಾರ ಲಹರಿ, ರೈತ ಪರ ನಿಲುವಿನಿಂದ ಸಮಾಜದ ಗಮನ ಸೆಳೆದಿದ್ದ ಅವರು, ಕರ್ನಾಟಕದ ಸಮಾಜವಾದಿ ಚಳವಳಿಯ ರೂವಾರಿಯೂ ಹೌದು. ಹಸಿರು ಸೇನಾನಿ ಎಂದೇ ಕರೆಸಿಕೊಂಡಿದ್ದ ಅವರು, ರೈತರು ಸರ್ಕಾರದ ಮೇಲೆ ಅವಲಂಬಿತರಾಗದೆ, ಸ್ವಾವಲಂಬಿಗಳಾಗಿ ಬದುಕಬೇಕು ಎಂದು ಸದಾ ಪ್ರತಿಪಾದಿಸುತ್ತಿದ್ದರು.
ಪ್ರಸ್ತುತ ಕೇಂದ್ರ ಪರಿಚಯಿಸಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ರೈತರ ಪ್ರತಿಭಟನೆ ದೇಶಾದ್ಯಂತ ಸದ್ದು ಮಾಡುತ್ತಿರುವ ಈ ಹೊತ್ತಿನಲ್ಲಿ ನಂಜುಂಡಸ್ವಾಮಿ ಅವರ ನಿಲುವು ಅತಿ ಅವಶ್ಯಕವೆನಿಸಿದೆ. ಪ್ರೊ. ಎಂಡಿಎನ್ ಚಳವಳಿ ಮಾರ್ಗದ ಕೆಲವೊಂದು ಕುತೂಹಲಕಾರಿ ಘಟನೆಗಳು ಇಲ್ಲಿವೆ...
'ನಮ್ದು': ನಮ್ಮ ಬೆಳೆ... ನಮ್ಮ ಬೆಲೆ... ನಮ್ಮ ಮಾರುಕಟ್ಟೆ..
ಪತ್ರಕರ್ತೆ:
Mr.
Professor
You
have
broken
Mansanto..,
You
have
broken
Kargil..,
You
have
broken
KFC..,
and
you
tell
us
your
movement
believes
in
nonviolence...
What
right
you
have
to
say
so...?
MDN:
ಒಂದೆರಡು
ಸೆಕೆಂಡ್
ಮೌನ.
See.
You
are
scribbling
something
in
your
note
pad,
If
I
grab
your
pen
and
make
you
not
to
write..,
if
I
break
your
glasses
and
make
you
not
to
see
properly
..,
it
is
non-violent
direction
action
against
you.
If
I
slap
you,
it's
a
violence.
You
should
understand
the
difference
between
violence
and
nonviolent
direct
action.
ಈಗ
ಪತ್ರಕರ್ತೆ
ಮೌನ.
**
ಅದೊಂದು
ದಿನ
ಚಾಮರಾಜನಗರದ
ರೈತ
ಸಂಘದ
ಕಾರ್ಯಕರ್ತ
(ಪ್ರೊ
ಶಾಲು
ಹಾಕಿ
ಚಳವಳಿಯಲ್ಲಿ
ತೊಡಗಿರುವವರನ್ನು
ರೈತ
ಸತ್ಯಾಗ್ರಹಿಗಳು
ಎಂದು
ಕರೆಯುತ್ತಿದ್ದರು.
ಎಲ್ಲರಿಗೂ
ಅರ್ಥವಾಗಲೆಂದು
ಕಾರ್ಯಕರ್ತ
ಎಂದು
ಬರೆದಿರುವೆ)
ಎಂಡಿಎನ್
ಅವರ
ಮನೆಯ
ಬಳಿ
ಅವರ
ಮುಂದೆ
ಶಥಪಥ
ತುಳಿದಾಡುತ್ತಿದ್ದ.
ಪ್ರೊ
ಏನೆಂದರು.
ಆತ
ಸಾರ್
ನಮ್ಮೂರತ್ರ
ಕ್ವಾರೆ
ನಡೀತಿದೆ.
Illegal.
ಅದನ್ನ
ನಿಲ್ಸೋಕೆ
ಹೋರಾಟ
ಮಾಡ್ಬೇಕು.
ಸರಿ
ಮಾಡಿ
ಎಂದರು
ಪ್ರೊ.
ಅದಕ್ಕವರು
ಸಾರ್
ಆ
ಕ್ವಾರೆ
ಮಾಡೋವ್ರಿಗೆ
ಡಿಸಿ
ಎಸ್ಪಿ
ಎಲ್ಲಾ
ಸಪೋರ್ಟ್
ಇದೆ
ಅಂದನು.
ನೋಡಿ ಆ ಡಿಸಿ ಎಸ್ಪಿಗೆ ನಾವು ಸಂಬಳ ಕೊಡೋದು ಕ್ವಾರೆ ಮಾಡೋಕೆ ಸಪೋರ್ಟ್ ಮಾಡಿ ಅಂತಲ್ಲಾ. ಹಂಗೇನಾದ್ರೂ ಮಾಡಿದ್ರೆ ಕಪಾಳಕ್ಕೊಡೀರಿ ಅಂದರು ಸಿಟ್ಟಲ್ಲಿ.
ದೆಹಲಿ ರೈತ ಚಳುವಳಿ: ಮರಬಗ್ಗಿ ಶಿರದ ಮೇಲೆ ಒರಗಿತು ಹರಿಯೇ…!
ಆ ಕಾರ್ಯಕರ್ತ ಹೋದ ಎಸ್ ಪಿಗೆ ಕಪಾಳಕ್ಕೆ ಹೊಡೆದು ಅರೆಸ್ಟ್ ಆದ. ಆ ಮುಗ್ದ ಕಾರ್ಯಕರ್ತ ಪ್ರೊ ಮಾತನ್ನ ಯಥಾವತ್ತಾಗಿ ತೆಗೆದುಕೊಂಡು ಫಜೀತಿಗೆ ಸಿಲುಕಿದ್ದ. ಮತ್ತೆ ಪ್ರೊ. ಸ್ಥಳಕ್ಕೆ ಹೋಗಿ ಎಲ್ಲಾ ವಾತಾವರಣ ತಿಳಿ ಮಾಡಿ. ಕಾರ್ಯಕರ್ತನನ್ನು ಕರೆತಂದರೆನ್ನಿ.
**
ಹೊಸದುರ್ಗ ಕೋರ್ಟಿನಲ್ಲಿ ರೈತ ಸಂಘದ ಕಾರ್ಯಕರ್ತರ ಯಾವುದೋ ಒಂದು ಕೇಸ್ ವಿಚಾರಣೆ ಇತ್ತು. ಕಾರ್ಯಕರ್ತರೆಲ್ಲರೂ ಕೋರ್ಟಿಗೆ ಹಾಜರಾದರು. ಎಂದಿನಂತೆ ಅವರ ಹೆಗಲ ಮೇಲೆ ಹಸಿರು ಶಾಲುಗಳಿದ್ದವು. ಕೋರ್ಟ್ ಹಾಲಿಗೆ ಹಾಜರಾದ ನ್ಯಾಯಾಧೀಶರು ಎಲ್ಲಾ ಕಾರ್ಯಕರ್ತರಿಗೂ ಶಾಲು ತೆಗೆದು ಬರಲು ಸೂಚಿಸಿ ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಿದ್ದಾರೆ. ಒಬ್ಬ ಕಾರ್ಯಕರ್ತ ಈ ವಿಷಯವನ್ನು ಪ್ರೊ. ಎಂಡಿಎನ್ ಅವರಿಗೆ ಮುಟ್ಟಿಸುತ್ತಾನೆ. ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸದಲ್ಲಿದ್ದ ಪ್ರೊ. ಅಲ್ಲೇನು ಗಲಾಟೆ ಮಾಡಬೇಡಿ. ನಾನು ಬರುತ್ತೇನೆ ಎಂದು ಮಧ್ಯಾಹ್ನದ ವೇಳೆಗೆ ತಲುಪಿದ್ದಾರೆ.
ನ್ಯಾಯಾಧೀಶರು ಅವರ ಕೊಠಡಿಯೊಳಗಿದ್ದಾರೆ. ಪ್ರೊ ಅಲ್ಲಿಗೇ ನೇರ ಹೋದವರು (ಯಾವ ಅಡಚಣೆಯೂ ಇಲ್ಲದೆ) ಯಾವ ಕಾನೂನಿನಲ್ಲಿ ಶಾಲು ಹಾಕಬಾರದೆಂದಿದೆ ಎಂದು ಜಡ್ಜ್ "ವಿಚಾರಣೆ" ಆರಂಭಿಸಿದ್ದಾರೆ. ತಬ್ಬಿಬ್ಬಾದ ಜಡ್ಜ್ಗೆ ಮಾತಿಲ್ಲ. See you are young man. I am a law professor. Do you want me to speak to chief justice regarding your action.," ನ್ಯಾಯಾಧೀಶರು ಸುಮ್ಮನಾದರು. ಎಲ್ಲಾ ರೈತ ಸಂಘದ ಕಾರ್ಯಕರ್ತರು ಶಾಲು ಹೆಗಲಿಗೇರಿಸಿಕೊಂಡೇ ಮಧ್ಯಾಹ್ನದ ವಿಚಾರಣೆಯಲ್ಲಿ ಭಾಗಿಯಾದರು.