Get Updates
Get notified of breaking news, exclusive insights, and must-see stories!

ತೆಂಗಿನ ಕಾಯಿ, ಎಳನೀರು ಕೊಯ್ಲು ಮಾಡುವವರಿಗೆ ವಿಮಾ ಯೋಜನೆ, ವಿವರಗಳು

ತುಮಕೂರು, ಡಿಸೆಂಬರ್ 29: ತುಮಕೂರು ಜಿಲ್ಲೆಯಲ್ಲಿನ ಪ್ರಮುಖ ಬೆಳೆ ತೆಂಗು. ತೆಂಗಿನ ಕಾಯಿ ಅಥವಾ ಎಳನೀರು ಕೊಯ್ಲು ಮಾಡುವ ಗೊನೆಗಾರರು ಅನೇಕ ಬಾರಿ ಅಪಘಾತಗಳಿಗೆ ತುತ್ತಾಗುತ್ತಾರೆ. ಇಂತಹ ಗೊನೆಗಾರರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ವಿಮಾ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ವಿಮಾ ಯೋಜನೆಯ ಮಾಹಿತಿ, ಬೇಕಾಗುವ ದಾಖಲೆಗಳ ಕುರಿತು ಮಾಹಿತಿಯನ್ನು ನೀಡಲಾಗಿದೆ.

'ಗೊನೆಗಾರರಿಗೆ ಕೇರಾ ಸುರಕ್ಷಾ ವಿಮಾ ಯೋಜನೆ' ಎಂಬ ಹೆಸರಿನಲ್ಲಿ ತೆಂಗಿನ ಕಾಯಿ ಅಥವಾ ಎಳನೀರು ಕೊಯ್ಲು ಮಾಡುವ ಅನುಭವಿ ಗೊನೆಗಾರರಿಗೆ ವಿಮಾ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಸುಲಭ ಕಂತುಗಳನ್ನು ಪಾವತಿ ಮಾಡುವ ಮೂಲಕ ಗೊನೆಗಾರರು ಈ ವಿಮಾ ಯೋಜನೆಯ ಸೌಲಭ್ಯವನ್ನು ಪಡೆಯಬಹುದಾಗಿದೆ.

Insurance Scheme Launched For Coconut Harvesters in Tumakuru

ವಿಮಾ ಯೋಜನೆಯ ಉದ್ದೇಶಗಳು: ಗೊನೆಗಾರರಿಗೆ ಕೇರಾ ಸುರಕ್ಷಾ ವಿಮಾ ಯೋಜನೆಯು ವೈಯಕ್ತಿಕ ಅಪಘಾತ ವಿಮಾ ಯೋಜನೆ ಆಗಿದ್ದು, ತೆಂಗು ಅಭಿವೃದ್ಧಿ ಮಂಡಳಿಯವರು ದಿ ನ್ಯೂ ಇಂಡಿಯಾ ವಿಮಾ ಕಂಪನಿಯ ಸಹಯೋಗದಲ್ಲಿ, ಅನುಷ್ಠಾನಗೊಳಿಸುತ್ತಿದ್ದಾರೆ. ತುಮಕೂರು ಜಿಲ್ಲೆಯಲಿ, ಸುಮಾರು 224507 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದ್ದು, ಇದರಲಿ, ಹೆಚ್ಚಿನ ಪಾಲು ತೆಂಗು ತೋಟಗಾರಿಕೆಗೆ ಕಾಯಿ ಅಥವಾ ಎಳನೀರು ಕೊಯ್ದು, ಮಾಡುವ ಅನುಭವಿ ಗೊನೆಗಾರರು ಬೇಕಾಗಿರುತ್ತದೆ. ಆದಕಾರಣ ಏನೇ ಅಪಘಾತ ಸಂಭವಿಸಿದರೂ ಕೇರಾ ಸುರಕ್ಷಾ ವಿಮಾ ಯೋಜನೆಯಡಿಯಲ್ಲಿ ವಿವಿಧ ಸೌಲಭ್ಯಗಳು ಲಭ್ಯವಿರುತ್ತವೆ.

ತೆಂಗಿನ ಮರ ಹತ್ತುವವರು/ ತೆಂಗಿನಕಾಯಿ ಕೀಳುವವರು/ ನೀರಾ ತಂತ್ರಜ್ಞರು ಅಪಘಾತಕ್ಕೊಳಗಾಗಿ ಮರಣ ಹೊಂದಿದ್ದಲ್ಲಿ ಅಥವಾ ಅಂಗವಿಕಲರಾದಲ್ಲಿ ವಿಮಾ ಕಂಪನಿಯಿಂದ ದೊರಕುವ ವಿಮಾ ಮೊತ್ತದ ಆರ್ಥಿಕ ಸಹಾಯದ ಮಾಹಿತಿ ನೀಡಲಾಗಿದೆ. (ದುರ್ಘಟನೆ/ ಅಪಘಾತ ಆದ 7 ದಿನಗಳ ಒಳಗಾಗಿ ತೆಂಗು ಅಭಿವೃದ್ಧಿ ಮಂಡಳಿಗೆ ಮಾಹಿತಿ ತಲುಪಬೇಕಾಗುತ್ತದೆ).

* ಮರಣ ಹೊಂದಿದ್ದಲ್ಲಿ 5 ಲಕ್ಷ ರೂ. ಗಳು
* ಶಾಶ್ವತ ಭಾಗಶಃ ಅಂಗವಿಕಲತೆ ಹೊಂದಿದ್ದಲ್ಲಿ 2.50 ಲಕ್ಷ ರೂ. ಗಳು
* ಆಸ್ಪತ್ರೆ ವೆಚ್ಚ (24 Hours IP) 1 ಲಕ್ಷ ರೂ. ಗಳು (ಗರಿಷ್ಠ)
* ತಾತ್ಕಾಲಿಕ ಅಂಗವಿಕಲತೆಯನ್ನು ಹೊಂದುವ ಕೊಯ್ಲುಗಾರನಿಗೆ ಗರಿಷ್ಠ ರೂ. 18000 (ರೂ. 3000 ಪ್ರತಿ ವಾರ)
* ಆಂಬುಲೆನ್ಸ್ ಖರ್ಚು ರೂ. 3000 ಹಾಗೂ ಪಾಲಿಸಿದಾರ ಮೃತಪಟ್ಟರೆ ಅಂತ್ಯಸಂಸ್ಕಾರಕ್ಕೆ ರೂ. 5000

ವಾರ್ಷಿಕ ವಿಮಾ ಒಟ್ಟು ಕಂತು ರೂ. 375 ಗಳಾಗಿದ್ದು, ಈ ಪೈಕಿ ಶೇ 75.25ರಂತೆ ತೆಂಗು ಅಭಿವೃದ್ಧಿ ಮಂಡಳಿಯ ವಂತಿಕೆ .281 ಮತ್ತು ರೈತರ ವಂತಿಕೆ ರೂ. 94 ಆಗಿರುತ್ತದೆ (ರೈತರ ವಂತಿಕೆಯನ್ನು ತೆಂಗು ಅಭಿವೃದ್ಧಿ ಮಂಡಳಿಗೆ ಡಿಡಿ ಮೂಲಕ/ ಆನ್ ಲೈನ್ ಮೂಲಕ ಪಾವತಿಸಬಹುದಾಗಿರುತ್ತದೆ).

ಸಲ್ಲಿಸಬೇಕಾದ ದಾಖಲಾತಿಗಳು: ಈ ವಿಮೆಯನ್ನು ಮಾಡಿಸಲು ತೆಂಗು ಅಭಿವೃದ್ಧಿ ಮಂಡಳಿಯ ನಿಗದಿತ ಅರ್ಜಿ ನಮೂನೆ, ಆಧಾರ್‌ಕಾರ್ಡ್‌ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ರೈತರ ವಾರ್ಷಿಕ ವಂತಿಕೆ ಪಾವತಿಸಿದ ರಶೀದಿ (ತೆಂಗಿನ ಮರ ಹತ್ತುವವರು/ ತೆಂಗಿನ ಕಾಯಿ ಕೀಳುವವರು/ ನೀರಾ ತಂತ್ರಜ್ಞನರು ವಾರ್ಷಿಕ ವಂತಿಕೆ ರೂ. 94 ಪಾವತಿಸಲು DD ಮೂಲಕ Coconut development board payable at cochin ಗೆ HAWAII S NEFT/ BHIM/Phone pe/ Google pay/Pay- tm State bank of India, lyyatti Jn., Ernakulam branch (Account No.61124170321, IFSC Code: SBIN0031449)

ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತೋಟಗಾರಿಕೆ ತಾಲೂಕು ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+