ಸಾಲಮನ್ನಾ ಅರ್ಜಿ, ರೈತರು ಆತಂಕ ಪಡಬೇಕಿಲ್ಲ:ಕುಮಾರಸ್ವಾಮಿ ಅಭಯ
ಬೆಂಗಳೂರು, ಅಕ್ಟೋಬರ್ 5: ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿಯೇ ಕೃಷಿ ಸಾಲಮನ್ನಾ ಯೋಜನೆ ಘೋಷಿಸಲಾಗಿದೆ. ಸಾಲ ಮನ್ನಾ ಅರ್ಜಿ ಭರ್ತಿಗೆ ಯಾವುದೇ ಕಾಲಮಿತಿ ಇಲ್ಲ ಎಂದು ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅಭಯ ನೀಡಿದ್ದಾರೆ.
ಸಾಲಮನ್ನಾ ಯೋಜನೆಗಾಗಿ ಅಭಿವೃದ್ಧಿ ಬಲಿ ಕೊಡಲ್ಲ: ಎಚ್ಡಿಕೆ ಅಭಯ
ಸಾಲ ಮನ್ನಾ ಅರ್ಜಿ ಭರ್ತಿಗೆ ಯಾವುದೇ ಕಾಲಮಿತಿ ಹಾಕಿಲ್ಲ, ರೈತರು ಗಾಬರಿ ಪಡುವ ಅಗತ್ಯವಿಲ್ಲ, ನಿಧಾನವಾಗಿಯೇ ಸಾಲಮನ್ನಾ ಅರ್ಜಿ ಭರ್ತಿ ಮಾಡಿ ಸಲ್ಲಿಸಿ, ಕಾಲಮಿತಿ ಹಾಕಿದ್ದಾರೆಂಬ ವದಂತಿಗಳಿಗೆ ಕಿವಿಗೊಡಬೇಡಿ ಎಂದರು.
ರೈತರ ಠೇವಣಿ ಹಣ ಸಾಲಕ್ಕೆ ವಜಾ ಇಲ್ಲ: ಬಂಡೆಪ್ಪ ಕಾಶೆಂಪುರ
ಸಾಲಮನ್ನಾ ಹಣ ಮಧ್ಯವರ್ತಿಗಳ ಪಾಲಾಗಬಾರದು ಎಂಬುದು ನಮ್ಮ ಕಳಕಳಿ, ಹೀಗಾಗಿ ಸವಿವರ ಅರ್ಜಿ ಪಡೆದು ಅನುಕೂಲ ಮಾಡಿಕೊಳ್ಳುತ್ತಿದ್ದೇವೆ, ಋಣ ಮುಕ್ತ ಕಾಯ್ದೆ ಬಗ್ಗೆ ಕೇಂದ್ರ ಗೇಹ ಸಚಿವರೊಂದಿಗೆ ಚರ್ಚೆ ನಡೆಸಿದ್ದೇನೆ, ಹಣಕಾಸು ಇಲಾಖೆಯಿಂದ ಎರಡು ಕ್ಲಾರಿಫಿಕೇಷನ್ ಕೇಳಿದ್ದರು, ಅದನ್ನು ಸಹ ಕಳುಹಿಸಿಕೊಟ್ಟಿದ್ದೇನೆ ಎಂದು ಹೇಳಿದರು.
ಸಾಲಬಾಧೆ: ಮಂಡ್ಯದಲ್ಲಿ ಕುಟುಂಬದ ನಾಲ್ವರು ಸಾಮೂಹಿಕ ಆತ್ಮಹತ್ಯೆ
ಆ ವಿಷಯ ಭಯಪಡಬೇಕಾಗಿಲ್ಲ, ಸರ್ಕಾರ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುತ್ತದೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರ ಭೇಟಿ ಬಳಿಕ ಕುಮಾರಸ್ವಾಮಿ ಹೇಳಿದ್ದಾರೆ.