ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ ತರಕಾರಿ ಬೆಲೆ

ರಾಜ್ಯದ ಬರಗಾಲ, ಕೆಲವು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆಯ ಕೊರತೆಯಿಂದಾಗಿ ತರಕಾರಿ, ಸೊಪ್ಪು, ಹಣ್ಣು, ಹೂಗಳ ಬೆಲೆಗಳು ಹೆಚ್ಚಾಗುತ್ತಲಿವೆ. ತರಕಾರಿ ಬೆಲೆಯಂತೂ ಅಧಿಕವಾಗಿ ಹೆಚ್ಚಾಗಿದ್ದು, ವ್ಯಾಪಾರಸ್ತರು ಮತ್ತು ಗ್ರಾಹಕರನ್ನು ಕಂಗೆಡಿಸಿದೆ.
ಮೇ ತಿಂಗಳ ಅಂತ್ಯ ಮತ್ತು ಜೂನ್ ಮೊದಲವಾರದಲ್ಲಿ ಹಲವಾರು ಸಮಾರಂಭಗಳು ಇರುವುದರಿಂದಲೂ ಬೇಡಿಕೆ ಹೆಚ್ಚಾಗಿ, ತರಕಾರಿ ಬೆಲೆ ಏರಿದೆ ಎಂದು ವಿಶ್ಲೇಷಿಸಲಾಗುತ್ತದ್ದರೂ, ನೀರಿನ ಕೊರತೆ ಇಂದಾಗಿ ತರಕಾರಿ ಪೂರೈಕೆ ಕಡಿಮೆಯಾಗಿ ಬೆಲೆ ಏರಿಕೆ ಆಗಿದೆ ಎಂದು ಹಾಪ್ ಕಾಮ್ಸ್ ಅಧಿಕಾರಿಗಳು ಹೇಳಿದ್ದಾರೆ.
ಎಷ್ಟು ಹೆಚ್ಚಾಗಿದೆ : ಕಳೆದ ವಾರ ಕೆ.ಜಿಗೆ 30ರೂ ಇದ್ದ ಟೊಮೆಟೋ ದರ ಇಂದು 60ರೂ. ಬೀನ್ಸ್ 50ರೂ ಇದ್ದದ್ದು, 100 - 120 ಆಗಿದೆ.ರೂ ಆಗಿದೆ. ಯಾವಾಗಲೂ ಕಡಿಮೆಗೆ ದೊರೆಯುತ್ತಿದ್ದ ಬದನೇಕಾಯಿ 45 ರೂ. ಆಗಿದೆ. ಕ್ಯಾರೆಟ್ ಕೆ.ಜಿಗೆ 60ರೂ ಆಗಿದೆ.
ಯಾವಾಗಲೂ ಕಡಿಮೆ ದರದಲ್ಲಿ ದೊರೆಯುತ್ತಿದ್ದ ಆಲೂಗಡ್ಡೆ 60 ರೂ. ಬೆಂಡೆಕಾಯಿ 40-50ರೂ. ಆಗಿ ಗ್ರಾಹಕರನ್ನು ಆತಂಕಗೊಳಿಸಿದೆ. ಬೆಲೆ ಏರಿಕೆ ಕೇವಲ ತರಕಾರಿಗಳನ್ನು ಮಾತ್ರ ಕಾಡುತ್ತಿಲ್ಲ. ಹಣ್ಣು, ಹೂವು, ಸೊಪ್ಪು ಮುಂತಾದವುಗಳಿಗೂ ದರ ಹೆಚ್ಚಳದ ಬಿಸಿ ತಟ್ಟಿದೆ.
ಬೆಂಗಳೂರು ನಗರ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಮಳೆಯ ಕೊರತೆ ಉಂಟಾಗಿರುವುದರಿಂದ ಟೊಮೆಟೋ ಬೆಳೆಯಲಾಗುತ್ತಿಲ್ಲ ಆದ್ದರಿಂದ ದರ ಹೆಚ್ಚಾಗಿದೆ. ಟೊಮೆಟೋ ದರ ಇತ್ತೀಚೆಗೆ 50 ರೂ. ದಾಟಿದ ಉದಾಹರಣೆ ಇಲ್ಲ ಎಂದು ಕೆ.ಆರ್.ಮಾರುಕಟ್ಟೆಯ ವ್ಯಾಪಾರಿ ಸುಂದರಂ ಹೇಳಿದ್ದಾರೆ.
ಹಾಪ್ಸ್ ಕಾಮ್ ಅಧಿಕಾರಿಗಳ ಪ್ರಕಾರ ಮಳೆ ಸರಿಯಾಗಿ ಮಳೆ ಬೀಳುವ ತನಕ ತರಕಾರಿ ಬೆಲೆಗಳು ಕಡಿಮೆ ಆಗುವುದಿಲ್ಲ. ಜೂನ್ ಮೊದಲ ವಾರದಲ್ಲಿ ಮುಂಗಾರು ರಾಜ್ಯ ಪ್ರವೇಶಿಸುವ ಸಾಧ್ಯತೆ ಇದ್ದು, ನಂತರ ತರಕಾರಿ ಬೆಲೆ ಕಡಿಮೆ ಆಗಬಹುದು ಎಂಬುದು ಅಧಿಕಾರಿಗಳ ಲೆಕ್ಕಾಚಾರ.
ಅಕ್ಕಿ, ಬೇಳೆಗಳ ಬೆಲೆಗಳು ಗಗನಕ್ಕೆ ಏರಿದ ನಂತರ ಈಗ ತರಕಾರಿಗಳ ಬೆಲೆ ಅಧಿಕವಾಗಿದೆ. ಬೆಲೆ ಏರಿಕೆಯಿಂದ ತತ್ತರಿಸುವ ಗ್ರಾಹಕರು ತರಕಾರಿ ಬೆಲೆಯೂ ಹೆಚ್ಚಾಗಿರುವುದರಿಂದ ಪರಿತಪಿಸುವಂತಾಗಿದೆ. ವರುಣಾ ದೇವನ ಕೃಪೆ ಮಾತ್ರ ತರಕಾರಿ ಬೆಲೆ ಮತ್ತು ಕುಡಿಯುವ ನೀರಿನ ಸಮಸ್ಯೆಯಿಂದ ಪಾರುಮಾಡಬಲ್ಲದು.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications