'ಸಾಲ ಮನ್ನಾ ಸಾಧ್ಯವಿಲ್ಲ' ಎಂದು ಎಲ್ಲೂ ಹೇಳಿಲ್ಲ : ಕುಮಾರಸ್ವಾಮಿ
ನವ ದೆಹಲಿ, ಮೇ 28: 'ಸಾಲ ಮನ್ನಾ ಸಾಧ್ಯವಿಲ್ಲ' ಎಂದು ಎಲ್ಲೂ ನಾನು ಹೇಳಿಲ್ಲ, ಹೇಳುವುದೂ ಇಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರುಸ ಸ್ಪಷ್ಟಪಡಿಸಿದ್ದಾರೆ.
ನವ ದೆಹಲಿಯಲ್ಲಿ ಇಂದು ಪ್ರಧಾನಿ ಮೋದಿ ಅವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಾಲಮನ್ನಾದ ನೀಲ ನಕ್ಷೆ ತಯಾರಿದೆ ಅದರ ಬಗ್ಗೆ ಬುಧವಾರ ಪೂರ್ಣ ಮಾಹಿತಿ ನೀಡುತ್ತೇನೆ ಎಂದು ಹೇಳಿದರು.
ಕುಮಾರಸ್ವಾಮಿ ಆ ಮಾತಲ್ಲಿ ಸತ್ಯ, ವ್ಯಂಗ್ಯ, ಜಾಣತನವೂ ಇದೆ!
ಕುಮಾರಸ್ವಾಮಿ ಯೂ-ಟರ್ನ್ ಹೊಡೆದಿದ್ದಾರೆ ಎಂದು ಪ್ರಚಾರ ಮಾಡಲಾಗುತ್ತಿದೆ, ಆದರೆ ನಾನು ಯೂ-ಟರ್ನ್ ಹೊಡೆದಿಲ್ಲ, ಹೊಡೆಯುವುದೂ ಇಲ್ಲ. ನನ್ನ ಮೇಲೆ ಆರೋಪ ಮಾಡುವ ಯಡಿಯೂರಪ್ಪ ಅವರು 'ಏನು ಸ್ಟ್ರೈಟ್ ವೇ'ನಲ್ಲಿ ಹೋಗುತ್ತಿದ್ದಾರಾ? ಎಂದು ಪ್ರಶ್ನೆ ಮಾಡಿದರು.
ನಾನು ಕರ್ನಾಟಕ ಜನರ ಹೆಸರಲ್ಲಿ ಪ್ರಮಾಣ ವಚನ ತೆಗೆದುಕೊಂಡಿದ್ದೀನಿ, ನನಗೆ ಯಾರೂ ಸಲಹೆ ನೀಡುವ ಅವಶ್ಯಕತೆ ಇಲ್ಲ, ಜನರ ಮಾತಿಗೆ ತಪ್ಪಿ ನಡೆಯುವ ಸಂದರ್ಭ ಬಂದರೆ ನಾನು ರಾಜಿನಾಮೆ ಕೊಟ್ಟು ಹೋಗುತ್ತೇನೆ' ಎಂದು ಖಾರವಾಗಿ ನುಡಿದರು ಎಚ್ಡಿಕೆ.