ಉಡುಪಿ ರೈತರ ನಿದ್ದೆಗೆಡಿಸಿದ ಬನಾನ ಸ್ಕಿಪ್ಪರ್ ರೋಗ

ಉಡುಪಿ, ಡಿಸೆಂಬರ್, 09: ಉಡುಪಿ ಜಿಲ್ಲೆಯಾದ್ಯಂತ ಬಾಳೆ ಎಲೆಗೆ ಬನಾನ ಸ್ಕಿಪ್ಪರ್ ರೋಗ ಹರಡುತ್ತಿದ್ದು ಬಾಳೆ ಕೃಷಿಕರು ಕಂಗಾಲಾಗಿದ್ದಾರೆ. ಬಾಳೆ ಹಣ್ಣಿನ ಬೆಲೆ ಗಗನಕ್ಕೇರಿರುವ ಈ ಹೊತ್ತಲ್ಲೇ ಬಾಳೆ ಎಲೆಗಳ ಮೇಲೆ ಗೂಡುಕಟ್ಟುವ ಈ ಹುಳುಗಳು ರೈತರ ನಿದ್ದೆಗೆಡಿಸಿದೆ.

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ತೋಟಗಳಲ್ಲಿ ಹುಳ ಬಾಧೆ ಕಾಣಿಸಿಕೊಂಡ ಪರಿಣಾಮ ಗಿಡದ ಎಲ್ಲಾ ಎಲೆಗಳು ಸುರುಳಿಯಾಗಿ ಹಾಳಾಗಿದೆ. ಈ ಬಾರಿ ಒಳ್ಳೆ ಬೆಲೆ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಕೃಷಿಕರಿಗೆ ಹುಳ ಬಾಧೆ ಪುನಃ ನಿರಾಸೆ ತಂದಿದೆ.[ರೈತರ ಸಮಸ್ಯೆ ನಿವಾರಣೆಗೊಂದು 'ಯೂ ಫಾರ್ಮ್']

Banana skipper disease attacked to Banana tree at Udupi

ಬನಾನ ಸ್ಕಿಪ್ಪರ್ ರೋಗಕ್ಕೆ ಕಾರಣವಾಗುವ ಹುಳುಗಳು ಮೊದಲು ಮೊಟ್ಟೆ ರೂಪದಲ್ಲಿರುತ್ತದೆ. ನಂತರ ಚಿಟ್ಟೆ ರೂಪ ತಾಳುವ ಈ ಹುಳುಗಳಿಗೆ ಬಾಳೆ ಎಲೆಯೇ ಆಹಾರವಾಗಿದದ್ದು, ಬಾಳೆ ಕೃಷಿ ಹೆಚ್ಚಿದ್ದಲ್ಲಿ ಈ ಹುಳುಗಳು ಠಿಕಾಣಿ ಹೂಡುತ್ತವೆ.

ಮಳೆಗಾಲ ಮುಗಿದು ಉಷ್ಣಾಂಶ ಜಾಸ್ತಿಯಾದಾಗ ಈ ಹುಳುಗಳು ಹುಟ್ಟುತ್ತದೆ. ಇದೀಗ ಈ ರೋಗ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರ ತೋಟಗಳಲ್ಲಿ ಕಾಣಿಸಿಕೊಂಡಿದೆ. ಇದರಿಂದ ಬಾಳೆಗಿಡದ ಎಲ್ಲಾ ಎಲೆಗಳು ಸುರುಳಿಯಾಗಿ ಹಾಳಾಗಿದೆ.[ವಿಶಿಷ್ಟ ರುಚಿಯ ಮಟ್ಟುಗುಳ್ಳ ತರಕಾರಿಗೆ 'ಕಾಂಡ ಕೊರಕ ರೋಗ']

ಬನಾನ ಸ್ಕಿಪ್ಪರ್ ಹುಳಬಾಧೆಗೆ ಕೀಟ ನಾಶಕ ಸಿಂಪಡಣೆಯೂ ಕಷ್ಟಸಾಧ್ಯ. ಹುಳುಗಳು ಸುರುಳಿಕಟ್ಟಿ ಮೊಟ್ಟೆಯಿಡುವುದರಿಂದ ಅಲ್ಲಿಗೆ ಕೀಟನಾಶಕ ತಲುಪುವುದಿಲ್ಲ. ರಾಸಾಯನಿಕ ಸಿಂಪಡಿಸಿದರೆ ಹಣ್ಣಿಗೂ ವಿಷ ಸೇರುವ ಸಾಧ್ಯತೆಯಿದೆ.

ತಮಿಳುನಾಡು, ಕೇರಳ ರಾಜ್ಯದಲ್ಲಿ ಬಾಳೆ ಕೃಷಿಗೆ ಕೀಟಬಾಧೆ ತಗುಲಿತ್ತು. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾಧೆ ಕಾಣಿಸಿಕೊಂಡಿದೆ. ರೈತರು ತೋಟದ ಪಕ್ಕ ಹಣ್ಣು ಹಂಪಲು ಮರ ಬೆಳೆಸಿದರೆ ಹಕ್ಕಿಗಳನ್ನು ಆಕರ್ಷಿಸಬಹುದಾಗಿದೆ.[ಕೃಷಿಯನ್ನೇ ಬದುಕಾಗಿಸಿಕೊಂಡ ಮೈಸೂರಿನ ಎಂ.ಕಾಂ ಪದವೀಧರೆ]

ಆಗ ಹಕ್ಕಿಗಳು ಹುಳಗಳನ್ನು ತಿನ್ನುವುದರಿಂದ ತಗುಲಿರುವ ರೋಗ ಕೊಂಚ ಮಟ್ಟಿಗಾದರೂ ಕಡಿಮೆ ಆಗಬಹುದು. ಬನಾನ ಸ್ಕಿಪ್ಪರ್ ರೋಗಕ್ಕೆ ಇದೇ ರಾಮಬಾಣ ಎಂದು ಕೃಷಿ ಇಲಾಖೆ ವಿಜ್ಞಾನಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+