ದೇವೇಗೌಡ ದೊಡ್ಡ ನಾಟಕಕಾರ: ಖೇಣಿ

"ನನ್ನ ಬಳಿ ಗೂಂಡಾಗಲಿಲ್ಲ. ಗೂಂಡಾಗಳಿದ್ದರೆ ಹೋರಾಟ ತಡೆಯುತ್ತಿದ್ದೆ. ಗೌಡರಿಗೆ ದೇವರೇ ಬುದ್ಧಿ ಕೊಡಬೇಕು. ಗೌಡರು ಅನಾವಶ್ಯಕವಾಗಿ ರೈತರನ್ನು ಎತ್ತಿಕಟ್ಟುತ್ತಿದ್ದಾರೆ .ರೈತರೇ ಯಡಿಯೂರಪ್ಪ ಅವರಿಗೆ ಸಹಕಾರ ನೀಡಿ, ನೈಸ್ ಗೆ ಸಂಬಂಧಿಸಿದಂತೆ ಸುಮಾರು 400 ಪ್ರಕರಣಗಳನ್ನು ಗೆದ್ದಿದ್ದೇನೆ.ಕರ್ನಾಟಕದಲ್ಲಿ 2500 ಕಿ.ಮೀ ಬೀದರ್ ನಿಂದ ಬೆಂಗಳೂರು, ಮಂಗಳೂರು ನಿಂದ ಬೆಂಗಳೂರು ಸಂಪರ್ಕ ಸಾಧಿಸುವ ಯೋಜನೆ ಸರ್ಕಾರಕ್ಕೆ ನೀಡುವ ತಯಾರಿಯಲ್ಲಿದ್ದೇನೆ. ಕರ್ನಾಟಕ ಸ್ಲಮ್ ಮುಕ್ತವಾಗಬೇಕು ಎಂಬುದು ನನ್ನಾಸೆ. ನೀರಾವರಿ ಪೂರೈಕೆ, ವಿದ್ಯುತ್ ಸೌಲಭ್ಯ ನೀಡಲು ಯೋಜನೆ ರೂಪಿಸಲು ಸಿದ್ಧ. ನೈಸ್ ಯೋಜನೆಯಲ್ಲಿ ಭೂಕಬಳಿಕೆ ನಿರೂಪಿಸಿದರೆ ತಲೆದಂಡಕ್ಕೆ ಸಿದ್ಧ" ಎಂದು ಅಶೋಕ್ ಖೇಣಿ ಹೇಳಿದರು.
ಖೇಣಿ ಅವರ ಸುದ್ದಿಗೋಷ್ಠಿಗೆ ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು, ಖೇಣಿ ಜನರಿಗೆ ಮಕ್ಮಲ್ ಟೋಪಿ ಹಾಕಲು ಬಂದಿದ್ದಾನೆ. ಖೇಣಿ ಮಾತಿಗೆ ಬೆಲೆಯಿಲ್ಲ ಎಂದಿದ್ದಾರೆ.












Click it and Unblock the Notifications