Arecanut Price: ಅಡಿಕೆ ಬೆಲೆ ಅಲ್ಪ ಕುಸಿತ; ಕೊಬ್ಬರಿ ಬೆಲೆ ಹೇಗಿದೆ ತಿಳಿಯಿರಿ
ರಾಜ್ಯ ಅಡಿಕೆ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ ಮುಂದುವರೆದಿದೆ. ಕಳೆದ ವಾರ ₹54,000 ದಾಟಿದ್ದ ಅಡಿಕೆ ಬೆಲೆ ಅಡಿಕೆ ಬೆಳೆಗಾರರಲ್ಲಿ ಸಂತಸ ತಂದಿತ್ತು. ಈ ವಾರ ಅಡಿಕೆ ಧಾರಣೆ ಮತ್ತಷ್ಟು ಏರುವ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ನಿರಾಸೆಯಾಗಿದೆ. ರಾಜ್ಯ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಅಲ್ಪ ಕುಸಿತ ಕಂಡಿದೆ.
ಬುಧವಾರ ರಾಶಿ ಅಡಿಕೆ ಧಾರಣೆ ವಿವಿಧ ಮಾರುಕಟ್ಟೆಗಳಲ್ಲಿ ₹1000 ದವರೆಗೆ ಕುಸಿತ ಕಂಡಿದೆ. ಹೊಳಲ್ಕೆರೆಯಲ್ಲಿ ಕ್ವಿಂಟಾಲ್ ರಾಶಿ ಅಡಿಕೆ ಧಾರಣೆ ಕನಿಷ್ಠ ₹50,519 ಇದ್ದರೆ ಗರಿಷ್ಠ ₹52,819 ಆಗಿತ್ತು. ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಕನಿಷ್ಠ ₹47,512 ಇದ್ದರೆ ಗರಿಷ್ಠ ₹53,700 ಆಗಿತ್ತು.

ಸಾಗರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಕನಿಷ್ಠ ₹28,989 ಇದ್ದರೆ ಗರುಷ್ಠ ₹52,219 ಕ್ಕೆ ಮಾರಾಟವಾಗಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ₹30,008-₹53,009 ದರಕ್ಕೆ ಮಾರಾಟವಾಗಿದೆ. ಸರಕು ಅಡಿಕೆ ಧಾರಣೆ ಕನಿಷ್ಠ ₹54,069 ಇದ್ದರೆ ಗರಿಷ್ಠ ₹79,896 ಆಗಿತ್ತು.
ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ (ಕ್ವಿಂಟಲ್ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಹೊಳಲ್ಕೆರೆ | ರಾಶಿ | ₹50,519 | ₹52,819 | ₹51,426 |
| 2 | ಚನ್ನಗಿರಿ | ರಾಶಿ | ₹47,512 | ₹53,700 | ₹52,539 |
| 3 | ಚಿತ್ರದುರ್ಗ | ಅಪಿ | ₹52,719 | ₹53,129 | ₹52,949 |
| 4 | ಚಿತ್ರದುರ್ಗ | ಬೆಟ್ಟೆ | ₹37,110 | ₹37,599 | ₹37,379 |
| 5 | ಚಿತ್ರದುರ್ಗ | ರಾಶಿ | ₹52,239 | ₹52,669 | ₹52,489 |
| 6 | ಪುತ್ತೂರು | ಹೊಸ ವೆರೈಟಿ | ₹28,000 | ₹38,000 | ₹33,000 |
| 7 | ಸಾಗರ | ಬಿಳೆ ಗೊಟು | ₹27,699 | ₹29,599 | ₹28,385 |
| 8 | ಸಾಗರ | ರಾಶಿ | ₹28,989 | ₹52,219 | ₹51,699 |
| 9 | ಶಿವಮೊಗ್ಗ | ಬೆಟ್ಟೆ | ₹45,069 | ₹55,319 | ₹54,119 |
| 10 | ಶಿವಮೊಗ್ಗ | ಸರಕು | ₹54,069 | ₹79,896 | ₹68,996 |
| 11 | ಶಿವಮೊಗ್ಗ | ರಾಶಿ | ₹30,008 | ₹53,009 | ₹52,169 |
| 12 | ಸಿದ್ದಾಪುರ | ಬಿಳೆ ಗೊಟು | ₹27,319 | ₹31,009 | ₹30,209 |
| 13 | ಸಿದ್ದಾಪುರ | ಕೋಕಾ | ₹26,289 | ₹30,009 | ₹27,899 |
| 14 | ಸಿದ್ದಾಪುರ | ರಾಶಿ | ₹44,099 | ₹49,799 | ₹48,499 |
| 15 | ಸಿರಾ | ಬೇರೆ | ₹20,000 | ₹25,000 | ₹24,177 |
| 16 | ಶಿರಸಿ | ಕೆಂಪು ಗೋಟು | ₹25,699 | ₹30,290 | ₹27,707 |
| 17 | ಶಿರಸಿ | ರಾಶಿ | ₹44,099 | ₹49,589 | ₹47,874 |
| 18 | ಶಿರಸಿ | ಚಾಲಿ | ₹34,099 | ₹39,098 | ₹37,592 |
| 19 | ಯಲ್ಲಾಪುರ | ಅಪಿ | ₹56,833 | ₹57,661 | ₹56,833 |
| 20 | ಯಲ್ಲಾಪುರ | ರಾಶಿ | ₹44,899 | ₹53,899 | ₹50,999 |
| 21 | ಯಲ್ಲಾಪುರ | ಹಣ್ಣು | ₹33,099 | ₹39,141 | ₹37,599 |
ಕೊಬ್ಬರಿ ಬೆಲೆ ಹೇಗಿದೆ?
ರಾಜ್ಯದಲ್ಲಿ ಕೊಬ್ಬರಿ ಧಾರಣೆ ಆರಕ್ಕೇರದೆ ಮೂರಕ್ಕಿಳಿಯದೆ ಸ್ಥಿರವಾಗಿದೆ. ಬಹುತೇಕ ಮಾರುಕಟ್ಟೆಗಳಲ್ಲಿ ಕೊಬ್ಬರಿ ಕ್ವಿಂಟಾಲ್ಗೆ ₹8,000 ರಿಂದ ₹9,500 ನಡುವೆ ಮಾರಾಟವಾಗುತ್ತಿದೆ. ₹ 10 ಸಾವಿರ ದಾಟುತ್ತದೆ ಎಂದು ನಿರೀಕ್ಷೆ ಮಾಡಿದ್ದ ತೆಂಗು ಬೆಳೆಗಾರರಿಗೆ ನಿರಾಸೆಯಾಗಿದೆ.
ಬುಧವಾರ ಅರಸೀಕೆರೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆ ಕನಿಷ್ಠ ₹8,000 ಇದ್ದರೆ ₹8,800 ಆಗಿತ್ತು. ಮಧುಗಿರಿ ಮಾರುಕಟ್ಟೆಯಲ್ಲಿ ಕನಿಷ್ಠ ₹7,500 ಇದ್ದರೆ ಗರಿಷ್ಠ ₹9,000 ಆಗಿತ್ತು. ರಾಜ್ಯದ ಪ್ರಮುಖ ಕೊಬ್ಬರಿ ಮಾರುಕಟ್ಟೆ ತಿಪಟೂರಿನಲ್ಲಿ ಕೊಬ್ಬರಿ ಬೆಲೆ ಕನಿಷ್ಠ ₹8,500 ಇದ್ದರೆ ಗರಿಷ್ಠ ಧಾರಣೆ ₹9,500 ಆಗಿತ್ತು.
ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ಬೆಲೆ (ಕ್ವಿಂಟಲ್ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಅರಸೀಕೆರೆ | ಕೊಬ್ಬರಿ | ₹8,000 | ₹8,800 | ₹8,800 |
| 2 | ಮಧುಗಿರಿ | ಕೊಬ್ಬರಿ | ₹7,500 | ₹9,000 | ₹8,300 |
| 3 | ಮಧುಗಿರಿ | ಬೇರೆ | ₹5,000 | ₹7,800 | ₹7,300 |
| 4 | ತಿಪಟೂರು | ಕೊಬ್ಬರಿ | ₹8,500 | ₹9,500 | ₹8,600 |
| 5 | ಮಳವಳ್ಳಿ | ಕೊಬ್ಬರಿ | ₹6,800 | ₹7,300 | ₹7,300 |
| 6 | ನಾಗಮಂಗಲ | ಮಾಧ್ಯಮ | ₹6,600 | ₹8,600 | ₹8,600 |
-
ಮಾರ್ಚ್ 13ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ -
Arecanut Price: ಶಿವಮೊಗ್ಗ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಅಡಿಕೆ ಧಾರಣೆ ಎಷ್ಟಿದೆ?: ಇಲ್ಲಿದೆ ಮಾರ್ಚ್ 13ರ ದರಪಟ್ಟಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ












Click it and Unblock the Notifications