ಹಾಸನ: ತೋಟಗಾರಿಕೆ ಮೇಳಕ್ಕೆ ಉತ್ತಮ ರೈತ ಆಯ್ಕೆಗೆ ಅರ್ಜಿ ಆಹ್ವಾನ
ಹಾಸನ ಅಕ್ಟೋಬರ್ 26: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವವು ಕೂಡ ತೋಟಗಾರಿಕೆ ಮೇಳವನ್ನು ಡಿಸೆಂಬರ್ 22 ರಿಂದ 24 ರವರೆಗೆ ಹಮ್ಮಿಕೊಳ್ಳಲಾಗಿದೆ.
ಇದರ ಪ್ರಯುಕ್ತವಾಗಿ ಉತ್ತಮ ತೋಟಗಾರಿಕೆ ರೈತ ಹಾಗೂ ರೈತ ಮಹಿಳೆಯರನ್ನು ಆಯ್ಕೆ ಮಾಡುವ ಸಲುವಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಹಾಸನ ಜಿಲ್ಲೆಯ ರೈತ ಹಾಗೂ ರೈತ ಮಹಿಳೆಯರು ಈ ಕೆಳಗೆ ನೀಡಿರುವ ವಿಳಾಸದಲ್ಲಿ ಅರ್ಜಿಯನ್ನು ಪಡೆದು ನವೆಂಬರ್ 10ರೊಳಗೆ ಭರ್ತಿಮಾಡಿ ಸಲ್ಲಿಸಲು ಕೋರಲಾಗಿದೆ.

ವಿಳಾಸ: ಡಾ.ಹೆಚ್.ಅಮರನಂಜುಂಡೇಶ್ವರ ಸಹಾಯಕ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಸೋಮನಹಳ್ಳಿ ಕಾವಲು, ಕುದುರುಗುಂಡಿ ಪೋಸ್ಟ್, ಹಾಸನ ತಾಲ್ಲೂಕು ಮತ್ತು ಜಿಲ್ಲೆ ಪಿನ್ ಕೋಡ್: 573219
ಮತ್ತು ಡಾ.ಆರ್.ಸಿದ್ದಪ್ಪ ಸಹಾಯಕ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಬೋರನಕೊಪ್ಪಲು, ಅರಸೀಕೆರೆ ತಾಲ್ಲೂಕು, ಹಾಸನ ಜಿಲ್ಲೆ, ಪಿನ್ ಕೋಡ್: 573103.












Click it and Unblock the Notifications