2011-2015ರ ಮಧ್ಯೆ ದೇಶದಲ್ಲಿ ಕೇವಲ ಎಪ್ಪತ್ತು ಲಕ್ಷ ಉದ್ಯೋಗ ಸೃಷ್ಟಿ
ಬೆಂಗಳೂರು, ಜೂನ್ 16: ಭಾರತದ ಉದ್ಯೋಗ ಮಾರುಕಟ್ಟೆಯಲ್ಲಿ ಬದಲಾವಣೆ ಗೋಚರಿಸುತ್ತಿದೆ. 2010-11 ಹಾಗೂ 2014-15ರ ಮಧ್ಯೆ 3.3 ಕೋಟಿ ಕೃಷಿಯೇತರ ಉದ್ಯೋಗಗಳು ಸೃಷ್ಟಿಯಾಗಿವೆ. ಈ ಬಗ್ಗೆ ಮೆಕ್ ಕಿನ್ಸಿ ಗ್ಲೋಬಲ್ ಇನ್ ಸ್ಟಿಟ್ಯೂಟ್ ಅಧ್ಯಯನ ನಡೆಸಿದೆ.
ಈ ಸಂಖ್ಯೆ ಮೂಲಕ ಹೇಳುವುದಾದರೆ ವಾರ್ಷಿಕ ಸರಾಸರಿ ಎಂಬತ್ತು ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಆದರೆ ಇದೇ ಅವಧಿಯಲ್ಲಿ ಕೃಷಿ ಉದ್ಯೋಗ ಎರಡೂವರೆ ಕೋಟಿಗೂ ಹೆಚ್ಚು ಇಳಿಕೆಯಾಗಿದೆ. ಈ ನಾಲ್ಕು ವರ್ಷದ ಅವಧಿಗೆ ನಿವ್ವಳ ಹೆಚ್ಚಳವನ್ನು ಲೆಕ್ಕ ಹಾಕಿದರೆ ಅದು ಬರೀ ಎಪ್ಪತ್ತು ಲಕ್ಷ ಮಾತ್ರ.

ಒಟ್ಟಾರೆ ಉದ್ಯೋಗವು 4.56 ಕೋಟಿಯಿಂದ 4.63 ಕೋಟಿಗೆ ಹೆಚ್ಚಾಗಿದೆ. ಪ್ರತಿ ವರ್ಷ ಬರುತ್ತಿರುವ ಕಾರ್ಮಿಕರ ಸಂಖ್ಯೆಗೆ ಹೋಲಿಸಿದರೆ ಕೃಷಿಯೇತರ ವಲಯದಲ್ಲಿ ಸೃಷ್ಟಿಯಾದ ಉದ್ಯೋಗ ಏನೇನೂ ಸಾಲುವುದಿಲ್ಲ. ದುಡಿಮೆಯ ವಯೋಮಾನದವರ ಲೆಕ್ಕವನ್ನು ಹಿಡಿದು ಹೇಳುವುದಾದರೆ ಭಾರತದಲ್ಲಿ ಉದ್ಯೋಗ ಸೃಷ್ಟಿಯ ಪ್ರಮಾಣ ಅಂಥ ವೇಗವಾಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ನ್ಯಾಷನಲ್ ಸ್ಯಾಂಪಲ್ ಸರ್ವೇ ಕಚೇರಿ ನಡೆಸಿದ ಉದ್ಯೋಗ ಹಾಗೂ ನಿರುದ್ಯೋಗ ಪ್ರಮಾಣದ ಆಧಾರದ ಮೇಲೆ ಈ ವರದಿ ಸಿದ್ಧವಾಗಿದೆ. 2011-2012ರ ಆರ್ಥಿಕ ವರ್ಷದಲ್ಲಿ ಅಂದರೆ ಆರ್ಥಿಕ ಹಿಂಜರಿತ ಇದ್ದ ಸಂದರ್ಭದಲ್ಲಿ ಕೇವಲ 1.1 ಕೋಟಿ ಉದ್ಯೋಗ ಸೃಷ್ಟಿಯಾಗಿದೆ.
ಆ ನಂತರದ ಎರಡು ವರ್ಷಗಳಲ್ಲಿ ಮತ್ತೆ ಪ್ರಗತಿಯಾಗಿದ್ದು, 2.2 ಕೋಟಿ ಉದ್ಯೋಗ ಸೃಷ್ಟಿಯಾಗಿದೆ. ಪ್ರಮುಖವಾಗಿ ವ್ಯಾಪಾರ, ಆತಿಥ್ಯ, ನಿರ್ಮಾಣ ಹಾಗೂ ಸಂಚಾರ ವಲಯದಲ್ಲಿ ಸೃಷ್ಟಿಯಾದ ಉದ್ಯೋಗಗಳಿವು. ಗಣಿಗಾರಿಕೆ ಹಾಗೂ ಉತ್ಪಾದನಾ ವಲಯದಲ್ಲಿ ಸಂಖ್ಯೆ ಇಳಿಮುಖವಾಗಿದೆ.
ಒಟ್ಟಾರೆಯಾಗಿ ನೋಡುವಾಗ ಕೃಷಿ ವಲಯದಲ್ಲಿ 2011ರಲ್ಲಿ ಶೇ 55.4ರಷ್ಟಿದ್ದ ಕಾರ್ಮಿಕರ ಪಾಲ್ಗೊಳ್ಳುವ ಪ್ರಮಾಣ 2015ರ ಹೊತ್ತಿಗೆ ಶೇ 52.4ಕ್ಕೆ ಕುಸಿದಿದೆ. ಈ ಪೈಕಿ ಬಹುತೇಕ ಕುಸಿತ ಕಂಡಿರುವುದು ಆರ್ಥಿಕ ಹಿಂಜರಿಕೆಯ ಆರಂಭದ ವರ್ಷದಲ್ಲಿ ಎಂಬುದು ಗಮನಾರ್ಹ ಅಂಶ.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು












Click it and Unblock the Notifications