ವಿಶ್ವ ಕನ್ನಡ ಕುಸ್ತಿ: ತೊಡೆತಟ್ಟಿ ನಿಂತ ವಿದೇಶೀ ಪೈಲ್ವಾನರು

ನಗರದ ಕ್ಲಬ್ ರಸ್ತೆಯ ಸಿಪಿಎಡ್ ಮೈದಾನ ಈ ರೋಮಾಂಚನಕ್ಕಾಗಿ ಸಿಂಗಾರಗೊಂಡಿದೆ. ಈ ಮೈದಾನದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಸೇರಲಿದ್ದಾರೆ. ಸಿಪಿಎಡ್ ಮೈದಾನ ಮೂರೂವರೆ ಅಡಿ ಎತ್ತರ ಮತ್ತು 40 ಅಡಿ ವ್ಯಾಸದ ಅಖಾಡವನ್ನು ಕೆಂಪು ಮಣ್ಣಿನಿಂದ ಸಜ್ಜುಗೊಳಿಸಲಾಗಿದೆ. ಮಧ್ಯಾಹ್ನ 2 ಗಂಟೆಗೆ ಆರಂಭವಾಗಿ ರಾತ್ರಿ 10 ಗಂಟೆವರೆಗೂ ಹೊನಲು ಬೆಳಕಿನಲ್ಲಿ ಕುಸ್ತಿ ಪ್ರದರ್ಶನ ನಡೆಯಲಿದೆ. ಮಹಿಳಾ ವಿಭಾಗದಲ್ಲೂ ಕುಸ್ತಿ ಸ್ಪರ್ಧೆಗಳಿವೆ.
ರಷ್ಯಾದ ಇಲ್ದರ್ ಲುಕಾ ಕುರ್ತಾನಿಜೆ ಅವರು ಒಲಿಂಪಿಕ್ಸ್-ನಲ್ಲಿ ರಜತ ಪದಕ ಗೆದ್ದವರು. ಗ್ರೋಕೊ ರೋಮನ್ ಶೈಲಿಯ ಕುಸ್ತಿಯಲ್ಲಿ ವಿಶ್ವ ಕಿರೀಟವನ್ನೂ ಎತ್ತಿಹಿಡಿದವರು. ಇತ್ತೀಚೆಗೆ ಅವರು ಮರಳ ಮೇಲಿನ ಕುಸ್ತಿಯಲ್ಲಿ ಪ್ರಾವಿಣ್ಯತೆ ಗಳಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಮಣ್ಣಿನ ಅಖಾಡದಲ್ಲಿ ಪೈಪೋಟಿಗೆ ಇಳಿಯುತ್ತಿದ್ದಾರೆ. ಇವರ ವಿರುದ್ಧ ಭಾರತ್ ಕೇಸರಿ, ಹಿಂದ್ ಕೇಸರಿ ಪ್ರಶಸ್ತಿ ವಿಜೇತ ದೆಹಲಿಯ ಜೋಗಿಂದರ್ ಸಿಂಗ್ ತೊಡೆ ತಟ್ಟಿ ನಿಂತಿದ್ದಾರೆ. ಪೈಲ್ವಾನ್ ಕುರ್ತಾನಜೆ ಮತ್ತು ಸೆತುರಿಜೆ ಅವರಿಗೆ ಒಟ್ಟು 12 ಲಕ್ಷ ರುಪಾಯಿ ನೀಡಿ ಇಲ್ಲಿಗೆ ಕರೆಸಿಕೊಳ್ಳಾಗಿದೆ. ಜೋಗಿಂದರ್ ಮತ್ತು ವರುಣ್ ಕುಮಾರ್ ಅವರಿಗೂ ತಲಾ 3 ಲಕ್ಷ ರು. ನೀಡಲಾಗಿದೆ.
ಕನ್ನಡ ಮತ್ತು ಮರಾಠಿ ಜನರ ನಡುವೆ ರಾಜಕಾರಣದಲ್ಲಿನ ಕಿತ್ತಾಟಕ್ಕಿಂತ ಕುಸ್ತಿ ಸೆಣಸಾಟದ ಮೇಲೆ ಸ್ಥಳೀಯರಿಗೆ ಬಲು ಪ್ರೀತಿ. ಮಹಾರಾಷ್ಟ್ರದ ವರಾಣದ ಸಂಗ್ರಾಮ ಪೋಳ ಮತ್ತು ಬೆಳಗಾವಿಯ ಮಂಜು ಕಕ್ಕೇರಿ ಮಧ್ಯೆ ನಡೆಯುವ ಕದನ ಜನರನ್ನು ರೋಮಾಂಚದ ಅಲೆಯಲ್ಲಿ ತೇಲಿಸಲಿದೆ. ವಿದೇಶೀ ಪೈಲ್ವಾನರು ಕೃತಕ ಹಾಸಿನ ಮೇಲಿನ ಕುಸ್ತಿಗೇ ಹೊಂದುಕೊಂಡಿರುವವರಾಗಿದ್ದು, ಮಣ್ಣಿನ ಅಖಾಡದಲ್ಲಿ ಹೇಗೆ ಸೆಣಸಾಡಬಹುದು ಎಂಬುದು ಇಲ್ಲಿನ ಕುಸ್ತಿ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications