ವಿಶ್ವ ಕನ್ನಡ ಕುಸ್ತಿ: ತೊಡೆತಟ್ಟಿ ನಿಂತ ವಿದೇಶೀ ಪೈಲ್ವಾನರು

ನಗರದ ಕ್ಲಬ್ ರಸ್ತೆಯ ಸಿಪಿಎಡ್ ಮೈದಾನ ಈ ರೋಮಾಂಚನಕ್ಕಾಗಿ ಸಿಂಗಾರಗೊಂಡಿದೆ. ಈ ಮೈದಾನದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಸೇರಲಿದ್ದಾರೆ. ಸಿಪಿಎಡ್ ಮೈದಾನ ಮೂರೂವರೆ ಅಡಿ ಎತ್ತರ ಮತ್ತು 40 ಅಡಿ ವ್ಯಾಸದ ಅಖಾಡವನ್ನು ಕೆಂಪು ಮಣ್ಣಿನಿಂದ ಸಜ್ಜುಗೊಳಿಸಲಾಗಿದೆ. ಮಧ್ಯಾಹ್ನ 2 ಗಂಟೆಗೆ ಆರಂಭವಾಗಿ ರಾತ್ರಿ 10 ಗಂಟೆವರೆಗೂ ಹೊನಲು ಬೆಳಕಿನಲ್ಲಿ ಕುಸ್ತಿ ಪ್ರದರ್ಶನ ನಡೆಯಲಿದೆ. ಮಹಿಳಾ ವಿಭಾಗದಲ್ಲೂ ಕುಸ್ತಿ ಸ್ಪರ್ಧೆಗಳಿವೆ.
ರಷ್ಯಾದ ಇಲ್ದರ್ ಲುಕಾ ಕುರ್ತಾನಿಜೆ ಅವರು ಒಲಿಂಪಿಕ್ಸ್-ನಲ್ಲಿ ರಜತ ಪದಕ ಗೆದ್ದವರು. ಗ್ರೋಕೊ ರೋಮನ್ ಶೈಲಿಯ ಕುಸ್ತಿಯಲ್ಲಿ ವಿಶ್ವ ಕಿರೀಟವನ್ನೂ ಎತ್ತಿಹಿಡಿದವರು. ಇತ್ತೀಚೆಗೆ ಅವರು ಮರಳ ಮೇಲಿನ ಕುಸ್ತಿಯಲ್ಲಿ ಪ್ರಾವಿಣ್ಯತೆ ಗಳಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಮಣ್ಣಿನ ಅಖಾಡದಲ್ಲಿ ಪೈಪೋಟಿಗೆ ಇಳಿಯುತ್ತಿದ್ದಾರೆ. ಇವರ ವಿರುದ್ಧ ಭಾರತ್ ಕೇಸರಿ, ಹಿಂದ್ ಕೇಸರಿ ಪ್ರಶಸ್ತಿ ವಿಜೇತ ದೆಹಲಿಯ ಜೋಗಿಂದರ್ ಸಿಂಗ್ ತೊಡೆ ತಟ್ಟಿ ನಿಂತಿದ್ದಾರೆ. ಪೈಲ್ವಾನ್ ಕುರ್ತಾನಜೆ ಮತ್ತು ಸೆತುರಿಜೆ ಅವರಿಗೆ ಒಟ್ಟು 12 ಲಕ್ಷ ರುಪಾಯಿ ನೀಡಿ ಇಲ್ಲಿಗೆ ಕರೆಸಿಕೊಳ್ಳಾಗಿದೆ. ಜೋಗಿಂದರ್ ಮತ್ತು ವರುಣ್ ಕುಮಾರ್ ಅವರಿಗೂ ತಲಾ 3 ಲಕ್ಷ ರು. ನೀಡಲಾಗಿದೆ.
ಕನ್ನಡ ಮತ್ತು ಮರಾಠಿ ಜನರ ನಡುವೆ ರಾಜಕಾರಣದಲ್ಲಿನ ಕಿತ್ತಾಟಕ್ಕಿಂತ ಕುಸ್ತಿ ಸೆಣಸಾಟದ ಮೇಲೆ ಸ್ಥಳೀಯರಿಗೆ ಬಲು ಪ್ರೀತಿ. ಮಹಾರಾಷ್ಟ್ರದ ವರಾಣದ ಸಂಗ್ರಾಮ ಪೋಳ ಮತ್ತು ಬೆಳಗಾವಿಯ ಮಂಜು ಕಕ್ಕೇರಿ ಮಧ್ಯೆ ನಡೆಯುವ ಕದನ ಜನರನ್ನು ರೋಮಾಂಚದ ಅಲೆಯಲ್ಲಿ ತೇಲಿಸಲಿದೆ. ವಿದೇಶೀ ಪೈಲ್ವಾನರು ಕೃತಕ ಹಾಸಿನ ಮೇಲಿನ ಕುಸ್ತಿಗೇ ಹೊಂದುಕೊಂಡಿರುವವರಾಗಿದ್ದು, ಮಣ್ಣಿನ ಅಖಾಡದಲ್ಲಿ ಹೇಗೆ ಸೆಣಸಾಡಬಹುದು ಎಂಬುದು ಇಲ್ಲಿನ ಕುಸ್ತಿ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications