ಮಲೆನಾಡಿನ ಮನೆಯಲ್ಲಿ ಮಳೆಗಾಲದ ಮೂರು ದಿನ-ಇದು ಹೋಮ್ ಸ್ಟೇ ಅನುಭವ
'ಅಮ್ತಿ ಹೋಂ ಸ್ಟೇ'-ಗುಡ್ಡೇಕೇರಿ ಎಂಬ ಊರಿನಲ್ಲಿ ಬಚ್ಚಿಟ್ಟುಕೊಂಡಂತಿರುವ ಸೊಗಸಾದ ಹೋಂ ಸ್ಟೇ. ಸಸ್ಯಾಹಾರಿಗಳಿಗಾಗಿ ಹೇಳಿ ಮಾಡಿಸಿದಂತಿರುವ ಇದರ ಮಾಲೀಕರು ಕೆ.ಎಸ್.ಶ್ರೀಧರ್. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ 23 ಕಿ.ಮೀ. ದೂರದಲ್ಲಿದೆ. ಈ ಸ್ಥಳದಿಂದ ಅಂದರೆ ಗುಡ್ಡೇಕೇರಿಯಿಂದ ಆಗುಂಬೆಗೆ ಎಂಟೇ ಕಿಲೋಮೀಟರ್.
ಎಂಜಿನಿಯರಿಂಗ್ ಓದಿಕೊಂಡು, ಸದ್ಯಕ್ಕೆ ಕೃಷಿ ಮಾಡುತ್ತಿರುವ ಶ್ರೀಧರ್ ಅವರಿಗೆ ಮಲೆನಾಡಿನ ಪರಿಸರವನ್ನು, ಸೊಗಸಾದ-ಸವಿಯಾದ ಊಟವನ್ನು ಪರಿಚಯಿಸುವುದರಲ್ಲೂ ಸಂತೋಷವಿದೆ. ಮೂರ್ನಾಲ್ಕು ವರ್ಷದ ಹಿಂದೆ ಅಡಿಕೆಗೆ ಕೊಳೆ ರೋಗ ಬಂದು ನಷ್ಟವಾಗಿ ಹೋಯಿತು. ಆಗ ಪರ್ಯಾಯವಾಗಿ ಏನಾದರೂ ಮಾಡುವ ಅನಿವಾರ್ಯಕ್ಕೆ ಸಿಕ್ಕಿಕೊಂಡಿವಿ. ಆಗ ಹೊಳೆದದ್ದೇ ಈ ಹೋಮ್ ಸ್ಟೇ ಎನ್ನುತ್ತಾರೆ ಶ್ರೀಧರ್.
[ಬಿಸಿಲ ನಾಡು ಕೊಪ್ಪಳ ಜಿಲ್ಲೆಯ ಕಬ್ಬರಗಿ ಜಲಪಾತ]
ಹಾಗಂತ ಇದು ಅವರ ಪುರ್ಣ ಪ್ರಮಾಣದ 'ವ್ಯವಹಾರ'ವೇ ಏನಲ್ಲ. ಶುದ್ಧ ಸಸ್ಯಾಹಾರಿ ಅಡುಗೆ, ಯಾವುದೇ ಕಾರಣಕ್ಕೂ ಮದ್ಯಪಾನಕ್ಕೆ ಅವಕಾಶವಿಲ್ಲ, ಅಡಿಕೆ ಕೊಯ್ಲಿನ ವೇಳೆ ಅತಿಥಿಗಳಿಗೆ ಅವಕಾಶ ಸಾಧ್ಯವಿಲ್ಲ.. ಹೀಗೆ ಕೆಲ ನಿಬಂಧನೆಗಳು ಕೂಡ ಇವೆ. ಮನೆಯಲ್ಲಿ ನಿತ್ಯ ಅಗ್ನಿಹೋತ್ರ ಮಾಡುವ ಅವರಿಗೆ ದುಡ್ಡಿಗಾಗಿ ಎಲ್ಲದರಲ್ಲೂ ರಾಜಿಯಾಗುವುದು ಇಷ್ಟವಿಲ್ಲ.

ಮಲೆನಾಡಿನ ಅಡುಗೆ
ಹೋಮ್ ಸ್ಟೇಯಲ್ಲಿ ಮಾಡುವುದು ಮಲೆನಾಡಿನ ಅಡುಗೆಯನ್ನೇ. ತಂಬುಳ್ಳಿ, ಕಾಯಿರಸ, ಪತ್ರೊಡೆ, ಇನ್ನು ಆಯಾ ಕಾಲಕ್ಕೆ ದೊರೆಯುವ ಸಹಜವಾಗಿ ಬೆಳೆದ ಸೊಪ್ಪು-ಸದೆಯ ಸಾರು, ಹುಳಿ, ಚಟ್ನಿಯ ರುಚಿ ನೋಡಬೇಕೆಂದರೆ ಇಲ್ಲಿ ಕನಿಷ್ಠ ಮೂರು ದಿನ ಇರಲೇಬೇಕು ಬಿಡಿ. ಇನ್ನು ಮಳೆ ಇಷ್ಟಪಡುವವರಾದರೆ ಜೂನ್ ನಿಂದ ಅಗಸ್ಟ್ ವರೆಗಿನ ವೇಳೆಯಲ್ಲಿ ಇಲ್ಲಿಗೆ ಹೋದರೆ ಬಿಸಿ ಊಟ, ತಣ್ಣಗಿನ ಮಳೆ, ನೋಡುತ್ತಾ ನಿಂತು ಕಳೆದುಹೋದವೇನೋ ಎಂಬಂಥ ಸ್ಥಳಗಳನ್ನು ಅನುಭವಿಸಬಹುದು.

ಎಷ್ಟೊಂದು ಸ್ಥಳವಿದೆ!
ಈ ಹೋಮ್ ಸ್ಟೇಯಿಂದ ಹತ್ತಿರದಲ್ಲೇ ನೋಡುವಂಥ ಹಲವು ಸ್ಥಳಗಳಿವೆ. ಆಗುಂಬೆ ಸೂರ್ಯಾಸ್ತಮಾನದ ಸ್ಥಳ, ಕುಂದಾದ್ರಿ, ಜೋಗಿಗುಂಡಿ, ಬರ್ಕಣ, ಸಿಬಲಗುಡ್ಡೆ, ಶೃಂಗೇರಿ, ಸಿರಿಮನೆ ಜಲಪಾತ, ಭೀಮನ ಕಟ್ಟೆ, ಕುಪ್ಪಳಿ...ಓಹ್ ಎಷ್ಟೊಂದು ಸ್ಥಳಗಳಿವೆ ಗೊತ್ತಾ? ಆದರೆ ಒಂದೇ ದಿನದಲ್ಲಿ ನೋಡ್ತೀವಿ ಅಂತ ಮಾತ್ರ ಅಂದುಕೊಳ್ಳಬೇಡಿ.

ಸಪಾಟು ರಸ್ತೆ, ಸಲೀಸಾದ ಪ್ರಯಾಣ ಅಲ್ಲ
ಏಕೆಂದರೆ ಕೆಲವು ಕಡೆ ಗುಡ್ಡ ಏರಬೇಕು, ಹಳ್ಳದಲ್ಲಿ ಇಳಿಯಬೇಕು...ತೀರಾ ಸಪಾಟು ರಸ್ತೆ. ಸಲೀಸಾದ ಪ್ರಯಾಣ ಅಂದುಕೊಂಡು ಕೆಲವರು ಹೋಗಿ ಆ ನಂತರ ಲೆಕ್ಕ ತಪ್ಪಿದ ಉದಾಹರಣೆಗಳೂ ಇವೆ. ಅದರೆ ಅಮ್ತಿ ಹೋಮ್ ಸ್ಟೇಯ ತೊಟ್ಟಿ ಮನೆಯಲ್ಲಿ ಚಕ್ಕಳಮಕ್ಕಳ ಹಾಕಿ ಕೂತು, ಚೆನ್ನಾಗಿ ಊಟ ಮಾಡಿ, ಕಣ್ತುಂಬ ನಿದ್ದೆ ಮಾಡಿ ಹೋದವರೂ ಇದ್ದಾರೆ.

ನಕ್ಷತ್ರ ಎಣಿಸಬಹುದು
ಬಿಎಸ್ ಎನ್ ಎಲ್ ನೆಟ್ ವರ್ಕ್ ಬಿಟ್ಟು ಮತ್ತೊಂದು ದೊರೆಯುವುದಿಲ್ಲ. ಕೆಲವು ಸಲ ಅದೂ ಸಿಗಲ್ಲ. ಟಿವಿ ಇಲ್ಲ. ಕಣ್ಣು ಹಾಯಿಸಿದಷ್ಟು ದೂರಕ್ಕೂ ಹಸಿರು ಸೀರೆಯುಟ್ಟ ಚೆಲುವೆಯಂತೆ ಕಾಣುವ ಭೂಮಿ, ತಂಪಾದ-ಮಾಲಿನ್ಯ ಇಲ್ಲದ ಗಾಳಿ, ಅಂಗಳದ ಹಸಿರು ಹಾಸಿಗೆ ತಲೆ ಕೊಟ್ಟು ಮಲಗಿದರೆ ಎಲ್ಲಿದ್ದವೋ ಇಷ್ಟೊಂದು ನಕ್ಷತ್ರ ಎನಿಸುವಂಥ ಅನುಭೂತಿ ಬೇಕೆಂದರೆ ಇಲ್ಲಿಗೆ ಭೇಟಿ ನೀಡಬೇಕು.

ವೈದ್ಯಕೀಯ ಸಸ್ಯ ರಕ್ಷಣೆ
ಈಚೆಗೆ ಮನೆ ಎದುರಿನ ತೋಟದ ಬಳಿಯಲ್ಲೇ ವೈದ್ಯಕೀಯ ಸಸ್ಯಗಳ ರಕ್ಷಣೆಯನ್ನೂ ಮಾಡಲಾಗುತ್ತಿದೆ. ನಡೆದಾಡುವುದಕ್ಕೆ ಒಂದು ಪಥವೂ ಇದೆ. ಆಯಾ ಕಾಲಕ್ಕೆ ತಕ್ಕಂತೆ ಕಾಣಿಸಿಕೊಳ್ಳುವ ಅಪರೂಪದ ಹಕ್ಕಿಗಳನ್ನು ಕಣ್ಣು ತುಂಬಿಕೊಳ್ಳಬಹುದು. ಮನೆಯಲ್ಲಿ ಇರುವುದು ಶ್ರೀಧರ್, ಅವರ ತಾಯಿ ನಾಗರತ್ನ ಮತ್ತು ಪತ್ನಿ ರಾಗಿಣಿ.

ವೆಬ್ ಸೈಟ್ ವಿಳಾಸ, ಫೋನ್ ನಂಬರ್
ಸಹಜವಾದ ಅರಿಶಿನ, ಪಾಲಿಶ್ ಇಲ್ಲದ ಅಕ್ಕಿ ಇತರ ವಸ್ತುಗಳು ಬೇಕಿದ್ದರೆ, ಶ್ರೀಧರ್ ಅವರು ನಂಬಿಕಸ್ಥರಿಂದ ಅದನ್ನು ಖರೀದಿಗೆ ಕೊಡಿಸುತ್ತಾರೆ. ಎಷ್ಟು ಮಂದಿ ಇಲ್ಲಿ ಉಳಿದುಕೊಳ್ಳುವುದಕ್ಕೆ ಅವಕಾಶ ಇದೆ? ಒಬ್ಬರಿಗೆ, ಒಂದು ದಿನಕ್ಕೆ ಎಷ್ಟು ಹಣ ತೆಗೆದುಕೊಳ್ತಾರೆ? ಅಡ್ವಾನ್ಸ್ ಕೊಡಬೇಕಾ? ಎಷ್ಟು ಮುಂಚಿತವಾಗಿ ತಿಳಿಸಬೇಕು?
-
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ












Click it and Unblock the Notifications