ಕುಂಭಮೇಳಕ್ಕಾಗಿ ಕನ್ನಡಿಗರಿಗೆ ವಿಶೇಷ ಪ್ಯಾಕೇಜ್
ವಿಶ್ವಪ್ರಸಿದ್ಧ ಕುಂಭಮೇಳದಲ್ಲಿ ಭಾಗವಹಿಸುವ 40 ರಾಷ್ಟ್ರಗಳ ವಿದೇಶಿಯರಿಗೆ ಊಟ, ವಸತಿ, ಪ್ರವಾಸಿ ಮಾರ್ಗದರ್ಶಕ್ಕೆ ಅನುಕೂಲ ಮಾಡಿಕೊಡಲೆಂದು ಸೃಷ್ಟಿಸಲಾಗಿದ್ದ ಈ ತಾಣ ಮೊದಲ ಬಾರಿಗೆ ದಕ್ಷಿಣ ಭಾರತದ ಪ್ರವಾಸಿಗಳನ್ನು ಆಕರ್ಷಿಸಲು ವಿಶೇಷ ಪ್ಯಾಕೇಜನ್ನು ರೂಪಿಸಿದೆ.
ಕರ್ನಾಟಕದಿಂದ ಕುಂಭಮೇಳಕ್ಕೆಂದು ಹೋಗುವ ಕನ್ನಡಿಗರು ಅಲ್ಲಿ ಭಾಷೆ, ವಸತಿ, ಮಾಹಿತಿ, ಮಾರ್ಗದರ್ಶನದ ಕೊರತೆಗಳನ್ನು ಅನುಭವಿಸುವುದು ಸಹಜ. ಆದರೆ, ಈ ವಿಶೇಷ ಪ್ಯಾಕೇಜಿನಿಂದಾಗಿ ಈ ಯಾವ ತೊಂದರೆಗಳು ಕರ್ನಾಟಕದ ಕಲ್ಪವಾಸಿಗಳಿಗೆ ಎದುರಾಗುವುದುದಿಲ್ಲ ಎನ್ನುವುದು ಅಂತರ್ಜಾಲ ತಾಣದ ಅನಿಸಿಕೆ. ಕನ್ನಡಿಗರಿಗಾಗಿ ವಿಶೇಷವಾಗಿ ತರಬೇತಿ ಪಡೆದ ಗೈಡುಗಳನ್ನು ಮತ್ತು ರಕ್ಷಣೆಯನ್ನು ಒದಗಿಸಲಾಗುವುದು.
9 ದಿನಗಳ ವೈಭವದ ಮೇಳದಲ್ಲಿ 5 ದಿನ ಕುಂಭಮೇಳದಲ್ಲಿ ಭಾಗವಹಿಸುವಿಕೆ ಮತ್ತು 4 ದಿನಗಳ ಪ್ರಯಾಣ ಒಳಗೊಂಡಿರುತ್ತದೆ. 9 ದಿನಗಳ ಪ್ರವಾಸಕ್ಕಾಗಿ ಕೇವಲ 25 ಸಾವಿರ ರು.ಗಳನ್ನು ನೀಡಬೇಕಾಗುತ್ತದೆ. ಈ ವಿಶೇಷ ಪ್ಯಾಕೇಜ್, ಮೂರನೇ ದರ್ಜೆಯ ಹೋಗಿಬರುವ ರೈಲು ಟಿಕೆಟ್, ದೆಹಲಿ-ಹರಿದ್ವಾರ-ದೆಹಲಿ ಪ್ರಯಾಣ, ಕ್ಯಾಂಪ್ ಸೈಟಿನಲ್ಲಿ ಟೆಂಟ್ ವ್ಯವಸ್ಥೆ, ಒಂದು ದಿನ ಹರಿದ್ವಾರ ಮತ್ತು ರಿಷಿಕೇಶ ವೀಕ್ಷಣೆಯನ್ನು ಒಳಗೊಂಡಿರುತ್ತದೆ.
ಕುಂಭಮೇಳದಲ್ಲಿ ಭಾಗವಹಿಸಲಿಚ್ಛಿಸುವವರು ಕಲ್ಪವಾಸಿ.ಕಾಂನಲ್ಲಿ ತಮ್ಮ ವಿವರಗಳನ್ನು ನೀಡಿದರೆ ಮುಂದಿನ ವ್ಯವಸ್ಥೆ ಅಂತರ್ಜಾಲ ತಾಣವೇ ಮಾಡಲಿದೆ.