ಜೋಗದ ಮಡಿಲಲ್ಲಿ ಮತ್ತುಗ ಎಂಬ ಹೋಂಸ್ಟೇ

* ಆರ್. ಶರ್ಮಾ, ತಲವಾಟ
ವಿಶ್ವ ವಿಖ್ಯಾತ ಜೋಗ ಜಲಪಾತ ಶರಾವತಿ ನದಿ ಸಮುದ್ರ ಸೇರುವ ತವಕದಿಂದ ಧುಮ್ಮಿಕ್ಕುವ ತಾಣ. ಹಾಗಾಗಿ ಪ್ರವಾಸಿಗರ ಕಣ್ಣಿಗೆ ಹಬ್ಬದ ಪ್ರೇಕ್ಷಣೀಯ ಸ್ಥಳ. ಆದರೆ ಅಂತಹ ವಿಖ್ಯಾತಿಯ ಸ್ಥಳ ಪ್ರವಾಸಿಗರಿಗೆ ಉಳಿಯುವ ಹಾಗೂ ಊಟದ ವಿಚಾರಗಳಲ್ಲಿ ಅಷ್ಟೇ ಕುಖ್ಯಾತಿಯನ್ನು ಹೊಂದಿದೆ. ಸರ್ಕಾರಿ ಅಧಿಕಾರಿಗಳ ಮರ್ಜಿ ಬೇಡುವ ಪ್ರವಾಸಿ ಬಂಗಲೆಗಳು, ಊಟ ಎಂದರೆ ಇದೆನಾ? ಎನ್ನುವಂತಹ ಹೋಟೇಲುಗಳು ಕುಖ್ಯಾತಿಗೆ ಕಾರಣೀಭೂತವಾಗಿವೆ. ಇಂಥಹ ಕುಖ್ಯಾತಿಯನ್ನು ಹೋಗಲಾಡಿಸಲು ಇತ್ತೀಚಿನ ದಿನಗಳಲ್ಲಿ ಹೋಂಸ್ಟೇಗಳು ತಲೆ ಎತ್ತತೊಡಗಿವೆ. ಅಂತಹ ಒಂದು ಹೋಂಸ್ಟೆ ಕುರಿತು ಕಳೆದ ವಾರ (ನಮ್ಮನೆ ಎಂಬ ಉಳಿಮನೆ) ದಟ್ಸ್ ಕನ್ನಡದ ಓದುಗರಾದ ನಿಮಗೆ ತಿಳಿದಿದೆ. ಈಗ ಮತ್ತೊಂದು ಹೋಂಸ್ಟೆ "ಮತ್ತುಗ" ಬಗ್ಗೆ ಪರಿಚಯಿಸುತ್ತೇನೆ.
ಸ್ಟೆ ಎಟ್ ಮತ್ತುಗ (http://matthuga.in) ಎಂಬ ಹೆಸರಿನ ಹೋಂಸ್ಟೆ ತಾಳಗುಪ್ಪ ಹಾಗೂ ಜೋಗದ ನಡುವೆ ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಜೋಗದಿಂದ 8 ಕಿಲೋಮೀಟರ್ ಹಿಂದೆ ಸಕಲ ಸೌಲಭ್ಯ ಹೊತ್ತು ನಿಂತಿರುವ ಈ ಹೋಂಸ್ಟೆ ಇನ್ನು ಮೂರು ತಿಂಗಳ ಕೂಸಷ್ಟೆ. ನಾಲ್ಕು ರೂಂಗಳುಳ್ಳ ಈ ಹೋಂಸ್ಟೆ ಒಮ್ಮೆಗೆ ಇಪ್ಪತ್ತು ಜನರಿಗೆ ವಸತಿ ಊಟೋಪಚಾರ ಒದಗಿಸುವ ಸೌಲಭ್ಯವನ್ನು ಹೊಂದಿದೆ. ಆನ್ ಲೈನ್ ಬುಕಿಂಗ್ ವ್ಯವಸ್ಥೆ ಹೊಂದಿರುವ ಈ ಹೋಂಸ್ಟೆ ಕೂಡ ಎಂ.ಎಸ್ ನರಹರಿ ಎಂಬ ಕೃಷಿಕರ ಒಡೆತನದ್ದು ಎಂಬುದು ಹೆಮ್ಮೆಯ ಸಂಗತಿ. ಹತ್ತು ಎಕರೆ ವಿಸ್ತಾರದ ತೊಟದ ನಡುವೆ ಇರುವ ಇದು ಆಹ್ಲಾದಕರ ಎನ್ನಿಸುವುದರಲ್ಲಿ ಅನುಮಾನವಿಲ್ಲ.
ಜೋಗದ (ಛಾಯಾಚಿತ್ರಗಳು) ಸವಿ ಸವಿಯಲು ಬರುವ ಪ್ರವಾಸಿಗರಿಗೆ ಜೋಗದ ಸುತ್ತಮುತ್ತೆಲ್ಲಾ ಏನೇನಿದೆ? ಎಂಬ ಮಾಹಿತಿ ಅಲ್ಲಿ ಸಿಗುವುದಿಲ್ಲ. ಆದರೆ (http://matthuga.in) ಮತ್ತುಗಕ್ಕೆ ಒಮ್ಮೆ ನೀವು ಲಾಗ್ ಇನ್ ಆದರೆ ಜೋಗದ ಸುತ್ತಮುತ್ತ ಐವತ್ತು ಕಿಲೋಮೀಟರ್ ಪಾಸಲೆಯಲ್ಲಿ ಎಂತಹ ಸುಂದರ ತಾಣಗಳಿವೆ ಎಂಬುದರ ಸಮಗ್ರ ಪರಿಚಯ ದೊರಕುತ್ತದೆ. ಸರಿ ಸುಮಾರು ಐವತ್ತು ಪ್ರೇಕ್ಷಣೀಯ ತಾಣಗಳ ಫೋಟೊಗಳ ಸಮೇತ ಮಾಹಿತಿ ವೆಬ್ ತಾಣದಲ್ಲಿ ಲಭ್ಯವಿದೆ.
Trekking - Corporate Activities - Nature/Plantation Walk - Bird Watching Farming - Night Walking Short Trips - Do Nothing ಹೀಗೆ ಪ್ರವಾಸವನ್ನು ವಿಭಾಗ ಮಾಡಿರುವ ಹೋಂಸ್ಟೆಯ ಕೃಷಿಕ ಮಾಲಿಕರು ತಮ್ಮಲ್ಲಿ ಉಳಿಯುವುವ ಪ್ರವಾಸಿಗರ ಮನತಣಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಿನವೊಂದಕ್ಕೆ ಊಟವೂ ಸೇರಿದಂತೆ 1000 ರೂಪಾಯಿಗಳ ಆಸುಪಾಸಿನಲ್ಲಿ ವೆಚ್ಚ ಬೇಡುವ "ಸ್ಟೆ ಎಟ್ ಮತ್ತುಗ"ಕ್ಕೆ ಒಮ್ಮೆ ಬೇಟಿ ನೀಡಿ ಮಲೆನಾಡು ಊಟದ ಸವಿಯ ಜತೆಗೆ ಹತ್ತಾರು ಸ್ಥಳಗಳ ನೋಟ ಸವಿಯಬಹುದು.
ವಿಳಾಸ ಮತ್ತು ಸಂಪರ್ಕ
ಎಮ್ಎಸ್ ನರಹರಿ
ತಲವಾಟ (ಜೋಗ ಜಲಪಾತದ ಬಳಿ), ಬಿಎಚ್ ರಸ್ತೆ (ಎನ್ಎಚ್ 206)
ಸಾಗರ ತಾಲೂಕ್, ಶಿವಮೊಗ್ಗ ಜಿಲ್ಲೆ
ತಲವಾಟ - 577421
ದೂರವಾಣಿ: 08183-207581 / 94480 68870
ಮುಂಗಡ ಕಾಯ್ದಿರಿಸಲು ಮತ್ತು ವಿಚಾರಣೆಗಾಗಿ : 98807 99975 or 98806 76761
ಈ-ಮೇಲ್ ವಿಳಾಸ: [email protected]
ಜೋಗದ ವಿಹಂಗಮ ನೋಟ ನೋಡಲು ಇಲ್ಲಿ ಕ್ಲಿಕ್ಕಿಸಿ
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications