ಉಪೇಂದ್ರ ಮುಂದೇನು ಮಾಡಬೇಕು, ಇಲ್ಲಿದೆ ಓದುಗರ ಅಭಿಪ್ರಾಯ
ನಟ- ನಿರ್ದೇಶಕ ಉಪೇಂದ್ರ ಮಹತ್ವಾಕಾಂಕ್ಷೆಯಿಂದ ಆರಂಭಿಸಿದ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ (ಕೆಪಿಜೆಪಿ)ದಿಂದ ಅವರೇ ಹೊರಬರುತ್ತಾರಾ ಎಂಬ ಪ್ರಶ್ನೆ ಶುರುವಾಗಿದೆ. ಅವರ ಅಭಿಮಾನಿಗಳು ಹಾಗೂ ಉಪೇಂದ್ರ ಮುಂದಿನ ನಡೆ ಬಗ್ಗೆ ಆಸಕ್ತಿ ಇರುವವರು ಈ ಹಂತದಲ್ಲಿ ಏನು ಸಲಹೆ ಕೊಡಬಹುದು ಎಂಬುದು ಒನ್ಇಂಡಿಯಾ ಕನ್ನಡದ ಕುತೂಹಲವೂ ಆಗಿತ್ತು.
ಆದ್ದರಿಂದ ಈ ಬಗ್ಗೆ ನಮ್ಮ ಓದುಗರನ್ನು ಪ್ರಶ್ನೆ ಕೇಳಿದ್ದೆವು. ಉಪೇಂದ್ರ 'ಕೆಪಿಜೆಪಿ'ಯಿಂದ ಹೊರಬಂದರೆ ಯಾವ ಪಕ್ಷ ಸೇರಬೇಕು ಎಂಬುದು ಪ್ರಶ್ನೆ ಆಗಿತ್ತು. ಮಂಗಳವಾರ ಮಧ್ಯಾಹ್ನ ಹನ್ನೆರಡೂಕಾಲಿನವರೆಗೆ ಬಂದಿರುವ ಮತಗಳು ಅಥವಾ ಅಭಿಪ್ರಾಯಗಳು 2,866. ಆ ಪೈಕಿ ಕಾಂಗ್ರೆಸ್ ಸೇರಲಿ ಎಂದಿರುವ ಮತ 151 (ಶೇ 5.27).
ಉಪೇಂದ್ರ 'ಕೆಪಿಜೆಪಿ'ಯಿಂದ ಹೊರಬಂದರೆ ಯಾವ ಪಕ್ಷ ಸೇರಬೇಕು?
ಇನ್ನು ಬಿಜೆಪಿಯನ್ನು ಸೇರಲಿ ಎಂಬ ಅಭಿಪ್ರಾಯಕ್ಕೆ 1,579 (55.09) ಮತಗಳು ಬಿದ್ದಿವೆ. ಜೆಡಿಎಸ್ ಗೆ ಸೇರಲಿ ಎಂಬ ಸಲಹೆ ನೀಡಿರುವ ಮತಗಳ ಸಂಖ್ಯೆ 261 (9.11). ಯಾವುದೂ ಬೇಡ ಅಂದಿರುವವರ ಸಂಖ್ಯೆಯೂ ಹೆಚ್ಚಿದೆ. 875 (30.53) ಮತಗಳು ಇವು ಯಾವುವೂ ಬೇಡ ಎಂಬ ಆಯ್ಕೆಗೆ ಬಿದ್ದಿವೆ.

ಅಲ್ಲಿಗೆ ಉಪೇಂದ್ರ ಅವರು ಬಿಜೆಪಿಗೆ ಸೇರಲಿ ಅಥವಾ ಯಾವ ಪಕ್ಷಕ್ಕೆ ಸೇರುವುದೇ ಬೇಡ ಎಂಬ ಬಹುಮತದ ಅಭಿಪ್ರಾಯ ಆಗಿದೆ. ಅಂದಹಾಗೆ ನೀವಿನ್ನೂ ಅಭಿಪ್ರಾಯ ತಿಳಿಸಿಲ್ಲವಾ? ಹಾಗಿದ್ದರೆ ಇನ್ನೂ ಅವಕಾಶ ಇದೆ. ಬೇಗ ಬೇಗ ತಿಳಿಸಿ. ನಿಮ್ಮೆಲ್ಲರ ಅಭಿಪ್ರಾಯವನ್ನು ಉಪೇಂದ್ರರಿಗೆ ತಿಳಿಸುವ ಪ್ರಯತ್ನವನ್ನು ನಾವು ಮಾಡ್ತೀವಿ.
-
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ












Click it and Unblock the Notifications