'ಅಣ್ಣಾಬಾಂಡ್' ಗೆ ಕನ್ನಡದ ಕೋಟ್ಯಾಧಿಪತಿಗಳ ಲಗ್ಗೆ

ಪುನೀತ್ ಅಭಿನಯದ 'ಅಣ್ಣಾಬಾಂಡ್' ನಿಜಕ್ಕೂ ಯಶಸ್ವಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಏಕೆಂದರೆ ನಾಯಕನಟ ಪುನೀತ್ ಗೆ ಈ ಬಾರಿ ಅಪಾರ ಸಂಖ್ಯೆಯಲ್ಲಿ ಹೊಸ ಅಭಿಮಾನಿಗಳೂ ಸೇರ್ಪಡೆಯಾಗಿದ್ದಾರೆ. ಯಾರಪ್ಪ ಅವರು ಎಂದು ಆಶ್ಚರ್ಯಚಕಿತರಾದಿರಾ!? ಅವರೇ ಸ್ವಾಮಿ, ಕನ್ನಡದ ಕೋಟ್ಯಾಧಿಪತಿಗಳು. ಅದೇ ಸ್ವಾಮಿ, ಪುನೀತ್ ರಾಜ್ ಕುಮಾರ್ ಅವರು ಸುವರ್ಣ ಚಾನೆಲಿನಲ್ಲಿ ನಡೆಸಿಕೊಡುವ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದ ಅಪಾರ ವೀಕ್ಷಕ ವರ್ಗ.
ಇಲ್ಲಿ ಇನ್ನೂ ಯಾರೂ ಕೋಟ್ಯಾಧಿಪತಿ ಆಗಿಲ್ಲವಾದರೂ ಕಾರ್ಯಕ್ರಮ ನೋಡುತ್ತಿರುವವರ ಪೈಕಿ ಕನಿಷ್ಠ ಶೆ. 90ರಷ್ಟು ಮಂದಿ ಅದಾಗಲೇ ಪುನೀತ್ ನಡೆಸಿಕೊಡುತ್ತಿರುವ ರೀತಿನೀತಿಗೆ ಫಿದಾ ಆಗ್ಬಿಟ್ಟಿದ್ದಾರೆ. ಪುನೀತ್ ಜತೆ ನಮ್ದೂಕೆ ಪ್ಯಾರ್ಗೆ ಆಗ್ಬುಟೈತೆ ಅಂತಿದ್ದಾರೆ. ಅಷ್ಟೊಂದು ಸೊಗಸಾಗಿ ಅವರು 'ಕನ್ನಡದ ಕೋಟ್ಯಾಧಿಪತಿ' ಸಾದರಪಡಿಸುತ್ತಿದ್ದಾರೆ. ಇನ್ನು ಈ ಶೇ. 90ರಷ್ಟು ಮಂದಿ 'ಅಣ್ಣಾಬಾಂಡ್'ಗೆ ಮನಸೋಲುತ್ತಾರಾ? 'ಅಣ್ಣಾಬಾಂಡ್' ಸಿನಿಮಾ ನೋಡಲು ಥಿಯೇಟರ್ ವರೆಗೂ ಹೋಗುತ್ತಾರಾ? ಅಂದರೆ ಖಂಡಿತಾ ಎಂಬ ಉತ್ತರ ಸಿಗುತ್ತದೆ.
ಹಾಗಾಗಿ ಇವರೇ ಆ ಹೊಸ ವೀಕ್ಷಕರು. ಸೋ, ಇವರೆಲ್ಲ ಥಿಯೇಟರ್ ಗೆ ಲಗ್ಗೆ ಹಾಕಿದರೆ 'ಅಣ್ಣಾಬಾಂಡ್' ಖಂಡಿತ ಯಶಸ್ವಿಯಾಗುತ್ತದೆ ಎಂಬುದು ನನ್ನ ವಿಶ್ವಾಸ. ಅಷ್ಟೇ ಅಲ್ಲ. ಮೊದಲ ನೋಟದಲ್ಲೇ ಪ್ಯಾರ್ಗೆ ಆಗ್ಬುಟೈತೆ ಅನ್ನೋ ಹಾಗೆ ಕನ್ನಡದ ಕೋಟ್ಯಾಧಿಪತಿ ಮೊದಲ ವರ್ಷದಲ್ಲೇ ಪುನೀತ್ ಹೈ ಫಸ್ಟ್ ಕ್ಲಾಸ್ ನಲ್ಲಿ ಪಾಸಾಗಿದ್ದಾರೆ. ಮುಂದಿನ ವರ್ಷಗಳಲ್ಲಿ ಕನ್ನಡದ ಕೋಟ್ಯಾಧಿಪತಿ ಮನೆ ಮಾತಾಗುವುದಲ್ಲಿ ಯಾವುದೇ ಸಂಶಯವಿಲ್ಲ. ಇನ್ನು ಕನ್ನಡದ ಕೋಟ್ಯಾಧಿಪತಿ ನೋಡುಗರು ಪುನೀತ್ ಸಿನಿಮಾಭಿಮಾನಿಗಳಾಗಿ convert ಆಗುವುದಂತೂ ಖಂಡಿತ. ಅಷ್ಟರಮಟ್ಟಿಗೆ ಪುನೀತ್ ಸಿನಿ ಪಯಣಕ್ಕೆ ಕನ್ನಡದ ಕೋಟ್ಯಾಧಿಪತಿ ಇಂಬು ನೀಡಲಿದೆ. ಅವರ ಜೈತ್ರ ಯಾತ್ರೆಗೆ ಅಣ್ಣಾಬಾಂಡ್ ಮುನ್ನುಡಿ ಬರೆಯಲಿದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications