'ಅಣ್ಣಾಬಾಂಡ್' ಗೆ ಕನ್ನಡದ ಕೋಟ್ಯಾಧಿಪತಿಗಳ ಲಗ್ಗೆ

ಪುನೀತ್ ಅಭಿನಯದ 'ಅಣ್ಣಾಬಾಂಡ್' ನಿಜಕ್ಕೂ ಯಶಸ್ವಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಏಕೆಂದರೆ ನಾಯಕನಟ ಪುನೀತ್ ಗೆ ಈ ಬಾರಿ ಅಪಾರ ಸಂಖ್ಯೆಯಲ್ಲಿ ಹೊಸ ಅಭಿಮಾನಿಗಳೂ ಸೇರ್ಪಡೆಯಾಗಿದ್ದಾರೆ. ಯಾರಪ್ಪ ಅವರು ಎಂದು ಆಶ್ಚರ್ಯಚಕಿತರಾದಿರಾ!? ಅವರೇ ಸ್ವಾಮಿ, ಕನ್ನಡದ ಕೋಟ್ಯಾಧಿಪತಿಗಳು. ಅದೇ ಸ್ವಾಮಿ, ಪುನೀತ್ ರಾಜ್ ಕುಮಾರ್ ಅವರು ಸುವರ್ಣ ಚಾನೆಲಿನಲ್ಲಿ ನಡೆಸಿಕೊಡುವ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದ ಅಪಾರ ವೀಕ್ಷಕ ವರ್ಗ.
ಇಲ್ಲಿ ಇನ್ನೂ ಯಾರೂ ಕೋಟ್ಯಾಧಿಪತಿ ಆಗಿಲ್ಲವಾದರೂ ಕಾರ್ಯಕ್ರಮ ನೋಡುತ್ತಿರುವವರ ಪೈಕಿ ಕನಿಷ್ಠ ಶೆ. 90ರಷ್ಟು ಮಂದಿ ಅದಾಗಲೇ ಪುನೀತ್ ನಡೆಸಿಕೊಡುತ್ತಿರುವ ರೀತಿನೀತಿಗೆ ಫಿದಾ ಆಗ್ಬಿಟ್ಟಿದ್ದಾರೆ. ಪುನೀತ್ ಜತೆ ನಮ್ದೂಕೆ ಪ್ಯಾರ್ಗೆ ಆಗ್ಬುಟೈತೆ ಅಂತಿದ್ದಾರೆ. ಅಷ್ಟೊಂದು ಸೊಗಸಾಗಿ ಅವರು 'ಕನ್ನಡದ ಕೋಟ್ಯಾಧಿಪತಿ' ಸಾದರಪಡಿಸುತ್ತಿದ್ದಾರೆ. ಇನ್ನು ಈ ಶೇ. 90ರಷ್ಟು ಮಂದಿ 'ಅಣ್ಣಾಬಾಂಡ್'ಗೆ ಮನಸೋಲುತ್ತಾರಾ? 'ಅಣ್ಣಾಬಾಂಡ್' ಸಿನಿಮಾ ನೋಡಲು ಥಿಯೇಟರ್ ವರೆಗೂ ಹೋಗುತ್ತಾರಾ? ಅಂದರೆ ಖಂಡಿತಾ ಎಂಬ ಉತ್ತರ ಸಿಗುತ್ತದೆ.
ಹಾಗಾಗಿ ಇವರೇ ಆ ಹೊಸ ವೀಕ್ಷಕರು. ಸೋ, ಇವರೆಲ್ಲ ಥಿಯೇಟರ್ ಗೆ ಲಗ್ಗೆ ಹಾಕಿದರೆ 'ಅಣ್ಣಾಬಾಂಡ್' ಖಂಡಿತ ಯಶಸ್ವಿಯಾಗುತ್ತದೆ ಎಂಬುದು ನನ್ನ ವಿಶ್ವಾಸ. ಅಷ್ಟೇ ಅಲ್ಲ. ಮೊದಲ ನೋಟದಲ್ಲೇ ಪ್ಯಾರ್ಗೆ ಆಗ್ಬುಟೈತೆ ಅನ್ನೋ ಹಾಗೆ ಕನ್ನಡದ ಕೋಟ್ಯಾಧಿಪತಿ ಮೊದಲ ವರ್ಷದಲ್ಲೇ ಪುನೀತ್ ಹೈ ಫಸ್ಟ್ ಕ್ಲಾಸ್ ನಲ್ಲಿ ಪಾಸಾಗಿದ್ದಾರೆ. ಮುಂದಿನ ವರ್ಷಗಳಲ್ಲಿ ಕನ್ನಡದ ಕೋಟ್ಯಾಧಿಪತಿ ಮನೆ ಮಾತಾಗುವುದಲ್ಲಿ ಯಾವುದೇ ಸಂಶಯವಿಲ್ಲ. ಇನ್ನು ಕನ್ನಡದ ಕೋಟ್ಯಾಧಿಪತಿ ನೋಡುಗರು ಪುನೀತ್ ಸಿನಿಮಾಭಿಮಾನಿಗಳಾಗಿ convert ಆಗುವುದಂತೂ ಖಂಡಿತ. ಅಷ್ಟರಮಟ್ಟಿಗೆ ಪುನೀತ್ ಸಿನಿ ಪಯಣಕ್ಕೆ ಕನ್ನಡದ ಕೋಟ್ಯಾಧಿಪತಿ ಇಂಬು ನೀಡಲಿದೆ. ಅವರ ಜೈತ್ರ ಯಾತ್ರೆಗೆ ಅಣ್ಣಾಬಾಂಡ್ ಮುನ್ನುಡಿ ಬರೆಯಲಿದೆ.
-
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ












Click it and Unblock the Notifications