ನಮ್ಮ ಐತಿಹಾಸಿಕ ಅಂಚೆ ಕಚೇರಿ ಉಳಿಸಿ ಕೊಡಿ

ಹಿಂದೆ ನವ ಮಂಗಳೂರಿನ ಪೋರ್ಟಿನ ವಿವಿಧ ಟೆಲಿಗ್ರಾಂ ಮೂಲಕ ಸಂದೇಶ ವಿನಿಮಯಕ್ಕೆಂದು ಬಂದರಿನಲ್ಲಿ ಸ್ಥಾಪಿಸಲಾಗಿದ್ದ ಐತಿಹಾಸಿಕ ಅಂಚೆ ಕಚೇರಿಯು ಕದ್ರಿ ಹಿಲ್ ಅಂಚೆ ಕಚೇರಿಯೊಂದಿಗೆ ಮುಚ್ಚಲ್ಪಡಲಿದೆ. ನಗರದ ಅತ್ಯಂತ ಹಳೆಯ ಅಂಚೆ ಕಚೇರಿ ಇದಾಗಿದೆ. ಬ್ರಿಟಿಷರ ಕಾಲದಿಂದಲೂ ಕಾರ್ಯ ನಿರ್ವಹಿಸುತ್ತಿದೆ.
ಕೆನರಾ ಚೇಂಬರ್ ಆಫ್ ಕಾಮರ್ಸ್ ಆವರಣದಲ್ಲಿರುವ ಈ ಅಂಚೆ ಕಚೇರಿಯು ಸುಮಾರು ಐದಾರು ಸಿಬ್ಬಂದಿಯಿಂದ ಕಾರ್ಯ ನಿರ್ವಹಿಸುತ್ತಿದೆ. ಅಂತೆಯೇ ಕೆಪಿಟಿ ಹಾಸ್ಟೆಲ್ ಆವರಣದಲ್ಲಿರುವ ಕದ್ರಿ ಅಂಚೆ ಕಚೇರಿಯೂ 1962ರಿಂದ ಸೇವೆ ನಿರ್ವಹಿಸುತ್ತಿರುವ ಕಚೇರಿಗಳಲ್ಲಿ ಒಂದಾಗಿದೆ. ಇವೆರಡೂ ಈಗ ಮುಚ್ಚುವ ಅಂಚಿನಲ್ಲಿದೆ.
ಬಂದರು ಅಂಚೆ ಕಚೇರಿ ಶೀಘ್ರವೇ ಪಾಂಡೇಶ್ವರ ಪ್ರಧಾನ ಅಂಚೆ ಅಂಚೆಯೂ ಬೇರೆಡೆ ವಿಲೀನ ಕಚೇರಿಯೊಂದಿಗೆ ವಿಲೀನಗೊಂಡರೆ ಕದ್ರಿ ಅಂಚೆ ಕಚೇರಿ ಯೆಯ್ಯಾಡಿ ವ್ಯಾಪ್ತಿಯೊಳಗೆ ಸೇರಿಕೊಳ್ಳಲಿದೆ ಎಂದು ಹೇಳಲಾಗಿದೆ.
ರಾಷ್ಟ್ರೀಯ ಅಂಚೆ ಯೋಜನೆಯನ್ವಯ ಒಂದೂವರೆ ಕಿಮೀ ಅಂತರದಲ್ಲಿ ಎರಡು ಅಂಚೆ ಕಚೇರಿಗಳಿದ್ದರೆ ಅವುಗಳನ್ನು ಮುಚ್ಚುವ ಉದ್ದೇಶದನ್ವಯ ಈಗ ಕದ್ರಿ ಮತ್ತು ಬಂದರು ಕಚೇರಿಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳಲಿವೆ.
ಕಳಪೆ ಸೇವೆಯನ್ನಾಧರಿಸಿ ನಗರದ ಉಳಿದ ಐದು ಅಂಚೆ ಕಚೇರಿಗಳನ್ನೂ ಮುಚ್ಚಲು ಪತ್ತೆ ಮಾಡಲಾಗಿದೆ ಎಂದು ಮಂಗಳೂರು ವಿಭಾಗೀಯ ಅಂಚೆ ಅಧೀಕ್ಷಕ ಟಿಜಿ ನಾಯಕ್ ಹೇಳಿದ್ದಾರೆ. ದೇಶದ ಬಹುತೇಕ ಅಂಚೆ ಕಚೇರಿಗಳು ನಷ್ಟದಲ್ಲಿದ್ದು, ಅವುಗಳ ಪೈಕಿ
57 ಪ್ರಧಾನ ಮತ್ತು 97 ಶಾಖಾ ಕಚೇರಿಗಳನ್ನು ಗುರುತಿಸಲಾಗಿದೆ.
ಇವುಗಳಲ್ಲಿ ತ್ವರಿತವಾಗಿ ಠೇವಣಿ ಖಾತೆಗಳನ್ನು ಜಾರಿ ಮಾಡುವುದಾಗಿ ತಿಳಿಸಿದ ನಾಯಕ್, ಪ್ರತಿಯೊಂದರಲ್ಲಿ ಸುಮಾರು 300 ಖಾತೆಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದಿದ್ದಾರೆ. ಇಲ್ಲಿಯವರೆಗೆ ಬಂದರ ಕಚೇರಿಯಲ್ಲಿ 1,500 ಆರ್ಡಿ ಖಾತೆಗಳನ್ನು ಹಾಗೂ 20 ಹಿರಿಯ ನಾಗರಿಕ ಖಾತೆಗಳನ್ನು ಹೊಂದಲಾಗಿದೆ. ಅದರಂತೆ 1800 ಆರ್ಡಿ ಖಾತೆ, 1,200 ಉಳಿತಾಯ ಖಾತೆ ಹಾಗೂ 450 ಮಾಸಿಕ ಆದಾಯ ಯೋಜನೆ ಖಾತೆಗಳನ್ನು ಹೊಂದಿರುತ್ತದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications