ನಮ್ಮ ಐತಿಹಾಸಿಕ ಅಂಚೆ ಕಚೇರಿ ಉಳಿಸಿ ಕೊಡಿ

ಹಿಂದೆ ನವ ಮಂಗಳೂರಿನ ಪೋರ್ಟಿನ ವಿವಿಧ ಟೆಲಿಗ್ರಾಂ ಮೂಲಕ ಸಂದೇಶ ವಿನಿಮಯಕ್ಕೆಂದು ಬಂದರಿನಲ್ಲಿ ಸ್ಥಾಪಿಸಲಾಗಿದ್ದ ಐತಿಹಾಸಿಕ ಅಂಚೆ ಕಚೇರಿಯು ಕದ್ರಿ ಹಿಲ್ ಅಂಚೆ ಕಚೇರಿಯೊಂದಿಗೆ ಮುಚ್ಚಲ್ಪಡಲಿದೆ. ನಗರದ ಅತ್ಯಂತ ಹಳೆಯ ಅಂಚೆ ಕಚೇರಿ ಇದಾಗಿದೆ. ಬ್ರಿಟಿಷರ ಕಾಲದಿಂದಲೂ ಕಾರ್ಯ ನಿರ್ವಹಿಸುತ್ತಿದೆ.
ಕೆನರಾ ಚೇಂಬರ್ ಆಫ್ ಕಾಮರ್ಸ್ ಆವರಣದಲ್ಲಿರುವ ಈ ಅಂಚೆ ಕಚೇರಿಯು ಸುಮಾರು ಐದಾರು ಸಿಬ್ಬಂದಿಯಿಂದ ಕಾರ್ಯ ನಿರ್ವಹಿಸುತ್ತಿದೆ. ಅಂತೆಯೇ ಕೆಪಿಟಿ ಹಾಸ್ಟೆಲ್ ಆವರಣದಲ್ಲಿರುವ ಕದ್ರಿ ಅಂಚೆ ಕಚೇರಿಯೂ 1962ರಿಂದ ಸೇವೆ ನಿರ್ವಹಿಸುತ್ತಿರುವ ಕಚೇರಿಗಳಲ್ಲಿ ಒಂದಾಗಿದೆ. ಇವೆರಡೂ ಈಗ ಮುಚ್ಚುವ ಅಂಚಿನಲ್ಲಿದೆ.
ಬಂದರು ಅಂಚೆ ಕಚೇರಿ ಶೀಘ್ರವೇ ಪಾಂಡೇಶ್ವರ ಪ್ರಧಾನ ಅಂಚೆ ಅಂಚೆಯೂ ಬೇರೆಡೆ ವಿಲೀನ ಕಚೇರಿಯೊಂದಿಗೆ ವಿಲೀನಗೊಂಡರೆ ಕದ್ರಿ ಅಂಚೆ ಕಚೇರಿ ಯೆಯ್ಯಾಡಿ ವ್ಯಾಪ್ತಿಯೊಳಗೆ ಸೇರಿಕೊಳ್ಳಲಿದೆ ಎಂದು ಹೇಳಲಾಗಿದೆ.
ರಾಷ್ಟ್ರೀಯ ಅಂಚೆ ಯೋಜನೆಯನ್ವಯ ಒಂದೂವರೆ ಕಿಮೀ ಅಂತರದಲ್ಲಿ ಎರಡು ಅಂಚೆ ಕಚೇರಿಗಳಿದ್ದರೆ ಅವುಗಳನ್ನು ಮುಚ್ಚುವ ಉದ್ದೇಶದನ್ವಯ ಈಗ ಕದ್ರಿ ಮತ್ತು ಬಂದರು ಕಚೇರಿಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳಲಿವೆ.
ಕಳಪೆ ಸೇವೆಯನ್ನಾಧರಿಸಿ ನಗರದ ಉಳಿದ ಐದು ಅಂಚೆ ಕಚೇರಿಗಳನ್ನೂ ಮುಚ್ಚಲು ಪತ್ತೆ ಮಾಡಲಾಗಿದೆ ಎಂದು ಮಂಗಳೂರು ವಿಭಾಗೀಯ ಅಂಚೆ ಅಧೀಕ್ಷಕ ಟಿಜಿ ನಾಯಕ್ ಹೇಳಿದ್ದಾರೆ. ದೇಶದ ಬಹುತೇಕ ಅಂಚೆ ಕಚೇರಿಗಳು ನಷ್ಟದಲ್ಲಿದ್ದು, ಅವುಗಳ ಪೈಕಿ
57 ಪ್ರಧಾನ ಮತ್ತು 97 ಶಾಖಾ ಕಚೇರಿಗಳನ್ನು ಗುರುತಿಸಲಾಗಿದೆ.
ಇವುಗಳಲ್ಲಿ ತ್ವರಿತವಾಗಿ ಠೇವಣಿ ಖಾತೆಗಳನ್ನು ಜಾರಿ ಮಾಡುವುದಾಗಿ ತಿಳಿಸಿದ ನಾಯಕ್, ಪ್ರತಿಯೊಂದರಲ್ಲಿ ಸುಮಾರು 300 ಖಾತೆಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದಿದ್ದಾರೆ. ಇಲ್ಲಿಯವರೆಗೆ ಬಂದರ ಕಚೇರಿಯಲ್ಲಿ 1,500 ಆರ್ಡಿ ಖಾತೆಗಳನ್ನು ಹಾಗೂ 20 ಹಿರಿಯ ನಾಗರಿಕ ಖಾತೆಗಳನ್ನು ಹೊಂದಲಾಗಿದೆ. ಅದರಂತೆ 1800 ಆರ್ಡಿ ಖಾತೆ, 1,200 ಉಳಿತಾಯ ಖಾತೆ ಹಾಗೂ 450 ಮಾಸಿಕ ಆದಾಯ ಯೋಜನೆ ಖಾತೆಗಳನ್ನು ಹೊಂದಿರುತ್ತದೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications