ಕಾಫಿ ಡೇಗಳಲ್ಲಿ 'ರೆಕ್ಕೆ ಇದ್ದರೆ ಸಾಕೆ ಹಕ್ಕಿಗೆ ಬೇಕು ಬಾನು' !

ಸಂಸ್ಕೃತ ಓಕೆ. ಅರ್ಥವಾಗದಿದ್ದರೂ ಆಲಿಸುತ್ತಿದ್ದರೆ ಮಂತ್ರಮುಗ್ಧವಾಗುವುದು ಖಂಡಿತ. ವೇದ ಉಪನಿಷತ್ತುಗಳ ಸಂದೇಶವನ್ನು ಹೊತ್ತು ತರುವ ಸಂಸ್ಕೃತ ಎಲ್ಲಿ? ಭಗವಂತನಿಗೂ ಅರ್ಥವಾಗದ ಮಲ್ಲುಗಳ ಹಾಡುಗಳೆಲ್ಲಿ?
ಶಬರಿಮಲೆಯಲ್ಲಿ ಇವತ್ತು, ಬುಧವಾರದಿಂದ ಉಕ್ಕಿ ಬರುವ ಕನ್ನಡ ಕಲರವ ನಮಗೆಲ್ಲ ತುಂಬಾ ತುಂಬಾನೇ ಸಂತೋಷದ ಸಮಾಚಾರವಾಗಿದೆ. ಈ ಸುದ್ದಿಯನ್ನು ನಮಗೆ ತಲುಪಿಸಿದ ದಟ್ಸ್ ಕನ್ನಡ ಸಂಪಾದಕೀಯ ಸಿಬ್ಬಂದಿಗೆ ಅನಂತಾನಂತ ಧನ್ಯವಾದಗಳು.
ಆದರೆ ನಾವುಗಳು ಕನ್ನಡಿಗರ ಇಷ್ಟಕ್ಕೆ ತೃಪ್ತಿ ಪಟ್ಟುಕೊಳ್ಳುವ ಅವಶ್ಯಕತೆ ಬೇಡ. ನಮ್ಮದೇ ಆದ ಬೆಂಗಳೂರಿನಲ್ಲಿರುವ ಕೆಫೆ ಕಾಫಿ ಡೇಗಳಿಗೆ ಕನ್ನಡ ಹಾಡು ಹಾಕಲು ಏನು ಧಾಡಿಯಾಗಿದೆ ಎನ್ನುವ ಪ್ರಶ್ನೆಯನ್ನು ನಾವೆಲ್ಲ ಕೇಳಿಕೊಳ್ಳಬೇಕು. ನಾನಂತೂ ಅಲ್ಲಿ ಕಾಫಿ ಕುಡಿಯೋದೇ ಇಲ್ಲ. ಆದರೆ ಮಗಳನ್ನು ಕರೆದುಕೊಂಡು ಬರಲು ಅಲ್ಲಿಗೆ ಹೋದಾಗ ಕಾಯಬೇಕಾದ ಸಂದರ್ಭ ಎದುರಾಗತ್ತೆ.
ದಬ ದಬಾ ಎನ್ನುವ ಇಂಗ್ಲಿಷ್ ಹಾಡಿನ ಬದಲು ಯಾವುದೋ ಒಂದು ಕನ್ನಡ ಗೀತೆ ಹಾಡಿದರೆ ಅಷ್ಟರಮಟ್ಟಿಗೆ ಸಂತಸವಾಗುತ್ತದೆ. ಕಪುಸಿನೋ ಕಾಫಿ ಹೀರಿದರೂ ಕೂಡ ಎಲ್ಲೋ ಒಂದು ಕಡೆ ನಮ್ಮೂರು ಚಿಕ್ಕಮಗಳೂರು ಕಾಫಿ ಕುಡಿದ ನೆನಪಾದರೂ ಬರುತ್ತದೆ. ಇನ್ನಾದರೂ ಕಾಫಿ ಡೇಗಳಲ್ಲಿ ನಮ್ಮ ಹಾಡು, ನಮ್ಮ ಸಂಗೀತ ಕೇಳಿಬರಲಿ.
ನನ್ನ ಅಚ್ಚುಮೆಚ್ಚಿನ ಗೀತೆ ಇದಾಗಿದೆ:
ರೆಕ್ಕೆ ಇದ್ದರೆ ಸಾಕೆ
ಹಕ್ಕಿಗೆ ಬೇಕು ಬಾನು ಹಾರುತ ಏರಲು ತಾನು
ಕಾಲೊಂದಿದ್ದರೆ ಸಾಕೆ
ಜಿಂಕೆಗೆ ಬೇಕು ಕಾಲು ಆಡುತ್ತ ಕುಣಿಯೋಕೆ
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications