ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭುವನೇಶ್ವರಿ ಪ್ರತಿಮೆ ಸ್ಥಾಪನೆಗೆ ವಿರೋಧ ಬೇಡ
ಈಗಾಗಲೇ ಬೆಂಗಳೂರಿನಲ್ಲಿ ಹಲವು ಪ್ರತಿಮೆಗಳು ಸ್ಥಾಪನೆಗೊಂಡು ಆಯಾ ಪ್ರದೇಶದ ಸೊಬಗನ್ನು ಅರ್ಥವಂತಿಕೆಯನ್ನು ಹೆಚ್ಚಿಸಿವೆ. ಹೀಗಿರುವಾಗ ಕರ್ನಾಟಕ ಮಾತೆಯ ಸಂಕೇತವಾದ ಭುವನೇಶ್ವರಿ ಬೃಹತ್ ಪ್ರತಿಮೆಯನ್ನು ಜ್ಞಾನಭಾರತಿ ಆವರಣದಲ್ಲಿ ಸ್ಥಾಪಿಸುವ ಸೂಚನೆಯೂ ಕೂಡ ಸ್ವಾಗತಾರ್ಹ.
ಬೆಂಗಳೂರು ಮೈಸೂರು ಮಧ್ಯದ ಎರಡು ಹೆದ್ದಾರಿಗಳ ಮಧ್ಯೆ ಇರುವ ಜ್ಞಾನಭಾರತಿ ಒಳ್ಳೆಯ ಪ್ರಶಾಂತವಾದ ಜಾಗ. ಬೆಂಗಳೂರು ವಿವಿಯ ಪ್ರವೇಶದ್ವಾರದ ಎಡಕ್ಕೆ ಹಿಂಭಾಗದ ದೊಡ್ಡ ದಿಬ್ಬದ ಮೇಲೆ ಆ ಪ್ರತಿಮೆ ಸ್ಥಾಪನೆ ಮಾಡಲು ಯೋಚಿಸಬಹುದು. ಜ್ಞಾನಭಾರತಿ ಬಿಟ್ಟು ಬೇರೆ ಸೂಕ್ತ ಕಡೆ ಅದನ್ನು ಸ್ಥಾಪಿಸಿದರೆ ಅದೂ ಸ್ವಾಗತಾರ್ಹವೇ, ಕನ್ನಡಿಗರ ಅಭಿಮಾನದ ಸಂಕೇತವಾದ ಕಂಚಿನ ಭುವನೇಶ್ವರಿ ಭವ್ಯ ಪ್ರತಿಮೆ ಅರ್ಥಪೂರ್ಣವಾಗಿ ರೂಪುಗೊಂಡು ಆದಷ್ಟು ಬೇಗ ಸ್ಥಾಪಿತವಾಗಲಿ.
Comments
English summary
Kannada scholar M Chidananda Murthy has welcomed Kannada Sahitya Parishat decision to install deity Bhuvaneshwari Statue in Karnataka. He also thanked CM BS Yeddyurappa for releasing Rs. 25 Cr for installation. Dr. Chimu suggested Jnana Bharathi campus is best place to install deity statue.
Story first published: Wednesday, March 2, 2011, 14:53 [IST]