ಈಗ ಟೋಟಲ್ ಮಾಲ್ನಲ್ಲಿ ಕನ್ನಡ ಕೇಳಿಸಿ!

ಮೊನ್ನೆ ಸರ್ಜಾಪುರ ರಸ್ತೆಯ ಟೋಟಲ್ ಮಾಲ್ಗೆ ಹೋಗಿದ್ದೆ.ಅಲ್ಲಿದ್ದ ಹುಡುಗಿ ಇಂಗ್ಲೀಷಿನಲ್ಲಿ ಮಾತಾಡಲು ಶುರು ಹಚ್ಚಿಕೊಂಡಳು, ನಾನ್ ಹೇಳ್ದೆ 'ನಂಗ್ ಕನ್ನಡ ಬರುತ್ತಮ್ಮ ಕನ್ನಡದಲ್ಲೇ ಮಾತಾಡಿ ಈ ಪರಭಾಷೆ ಕೇಳಿ ಕೇಳಿ ಸಾಕಾಗಿದೆ'. ಅಲ್ಲಿದ್ದ ಕೆಲಸದ ಹುಡುಗರು 'ಸಾರ್,ಇಷ್ಟು ದಿನಕ್ಕೆ ನೀವೊಬ್ರೆ ಕೇಳಿದ್ದು ಸರ್ ಹೀಗೆ,ಮಾತಾಡೋಕೆ ನಮಗೂ ಇಷ್ಟನೇ ಆದ್ರೆ ಬಂದೊವ್ರು ಯಾರು ಕನ್ನಡದಲ್ಲಿ ಮಾತಾಡೋದೇ ಇಲ್ಲ' ಅಂದ್ರು.
'ಅದ್ಸರಿ ಅದ್ಯಾಕ್ ನಿಮ್ಮ ಮಾಲ್ನಲ್ಲಿ ಕನ್ನಡ ಹಾಡು ಹಾಕೊದಿಲ್ವಾ? ಬರಿ ಹಿಂದಿ,ಇಂಗ್ಲೀಶ್ ಹಾಡು ಮಾತ್ರ ಕೇಳ್ತಾ ಇದೆ' ಅಂದೆ. 'ಇಲ್ಲ ಸರ್, ಕಡೆ ಪಕ್ಷ ರಾಜ್ಯೋತ್ಸವದ ದಿನವು ಕನ್ನಡ ಹಾಡು ಹಾಕಲಿಲ್ಲ!' ಅನ್ನೋದಾ!? , ಸರಿ ಎಲ್ರಿ ನಿಮ್ಮ ಮ್ಯಾನೇಜರನ ಕರೀರಿ ಅಂದೆ, ಆ ವೇಳೆಗಾಗಲೇ ಅವ್ನು ಹೊರಟೋಗಿದ್ದ.ಅವನ ನಂಬರ್ ತಗೊಂಡು ಅವನಿಗೆ ಕಾಲ್ ಮಾಡಿದೆ. ನಮ್ಮ ನಡುವಿನ ಸಂಭಾಷಣೆಯನ್ನ ಓದಿದರೆ ಈ ಹೊರ ರಾಜ್ಯದ ಜನ ಅದ್ಹೇಗೆ ಕನ್ನಡವನ್ನ ಕಡೆಗಣಿಸುತ್ತಾರೆ ಅನ್ನುವುದು ಬಹುಷಃ ಗೊತ್ತಾಗಬಹುದು.
ಏನ್ರಿ ನಿಮ್ಮ ಮಾಲ್ನಲ್ಲಿ ಕನ್ನಡ ಹಾಡು ಯಾಕ್ ಹಾಕೋದಿಲ್ಲ?,ಯಾವಾಗ ಬಂದ್ರು ಬರಿ ಹಿಂದಿ ಮತ್ತು ಇಂಗ್ಲೀಶ್ ಹಾಡು ಮಾತ್ರ ಕೇಳುತ್ತೆ ಇಲ್ಲಿ.ಯಾಕೆ?
ನೀವಿದನ್ನ ಯಾವ ಕಾರಣಕ್ಕೆ ಕೇಳ್ತಾ ಇದ್ದೀರಾ? ನೀವ್ಯಾರು?
ನಾನು ನಿಮ್ಮ ಗ್ರಾಹಕ,ನನಗೆ ಕೇಳುವ ಹಕ್ಕಿದೆ ಹೇಳಿ,ಯಾಕ್ ಹಾಕೋದಿಲ್ಲ?
ಯಾಕೆ ಅಂದ್ರೆ (ದರ್ಪದ ದನಿಯಲ್ಲಿ) ಈ ಏರಿಯಾದಲ್ಲಿ ಇರೋ ಹೆಚ್ಚಿನ ಜನ ಕನ್ನಡೇತರರು,ಈ ಮಾಲಿಗೆ ಬರೋರು ಅವ್ರೆ,ಅದಿಕ್ಕೆ ಹಾಕೋದಿಲ್ಲ!'
'ಓಹೋ! ಕರ್ನಾಟಕದಲ್ಲಿ ಕನ್ನಡ ಹಾಕೋದಿಲ್ಲ ಅಂದ್ರೆ ಒಪ್ಪೋಕಗೋಲ್ಲ ರೀ'
ಆಗ ವರಸೆ ಬದಲಾಯಿತು
'ಇಲ್ಲ ಸರ್, ನಾವು ಬೆಳಿಗ್ಗೆ ಕನ್ನಡ ಹಾಡು ಹಾಕ್ತಿವಿ'
'ಅಂದ್ರೆ ಏನ್ರಿ, ಕನ್ನಡ ಹಾಡು ಕೇಳೋಕೆ ನಾನು ಬೆಳಿಗ್ಗೆ ಕೆಲಸ ಬಿಟ್ಟು ಇಲ್ಲಿ ಬರ್ಬೇಕ?,ಸಂಜೆ ಹಾಕೋಕೆ ಏನ್ ತೊಂದ್ರೆ ನಿಮ್ಗೆ?'
ಮತ್ತೊಂದು ವರಸೆ ತೆಗೆದ
'ಹಾಗಲ್ಲ ಸರ್, ನಮ್ ಕಂಪೆನಿಯವರು ಕೊಡೊ CD ಲಿ ಕನ್ನಡ ಹಾಡುಗಳಿಲ್ಲ'
'ಇದು ಜಾಸ್ತಿ ಆಯ್ತು, ನಿಮ್ಮ CEO ನಂಬರ್ ಇಲ್ಲ ಮಿಂಚೆ ವಿಳಾಸ ಕೊಡ್ರಿ, ನಾನ್ ಅವ್ರ ಜೊತೆ ಮಾತಾಡ್ತೀನಿ'
'ನಂದೇ ಬರ್ಕೊಳ್ಳಿ'
'ನಿಂದ ತಗೊಂಡು ಏನಪ್ಪಾ ಮಾಡ್ಲಿ,ಈಗ ಮಾತಾಡಿ ಆಯ್ತಲ್ಲ ನಿನ್ ಜೊತೆ'
'ಇಲ್ಲ ನೀವ್ ಕಳ್ಸಿ ನಂಗೆ, ನಾನ್ ಅವ್ರಿಗೆ ಕಳಿಸ್ತೀನಿ' ಅಂದ. ಅಲ್ಲಿಗೆ ಮಾತು ಮುಗಿಸಿ ಮರುದಿನ ಬೆಳಿಗ್ಗೆ ಅವನಿಗೆ ಮಿಂಚೆ ಕಳಿಸಿದೆ.ಕಳಿಸಿ ಎರಡು ದಿನವಾಯ್ತು, ಆಸಾಮಿ ಇನ್ನ ಉತ್ತರ ಕೊಟ್ಟಿಲ್ಲ.ಇದು ಇಂತ ದಪ್ಪ ಚರ್ಮದ ಜನರ ಕನ್ನಡದೆಡೆಗಿನ ಉದಾಸೀನ,ನಿರ್ಲಕ್ಷತೆಯನ್ನ ತೋರಿಸುತ್ತದೆ.
ಒಂದೆಡೆ 'ಕನ್ನಡ ನುಡಿ ತೇರು' ಎಳೆಯುತ್ತಿರೋ ಸರ್ಕಾರ,ಮತ್ತೊಂದೆಡೆ ತಮಿಳರ ಓಲೈಕೆಗೆ 'ತಿರುವಳ್ಳುವರ್ ಜಯಂತಿ' ಮಾಡ್ತಾ ಇರೋ BBMP, ಮಗದೊಂದು ಕಡೆ ನೀತಿ-ನಿಯಮಗಳನ್ನ ಉಲ್ಲಂಘಿಸಿ ಕನ್ನಡವನ್ನ ಕಾಲ ಕಸವನ್ನಗಿಸುತ್ತ ಇರೋ ಮಾಲ್ಗಳು - ಹೋಟೆಲ್ಗಳು! ಸರ್ಕಾರವನ್ನೇ ನಂಬಿ ಕೂತರೆ ಆಗುವುದಿಲ್ಲ, ಇಂತವಕ್ಕೆಲ್ಲ ಕನ್ನಡಿಗರೇ ಮೈ ಕೊಡವಿ ಏಳಬೇಕು. (raghunath_singh@m2sin.ಕಂ) ಇದು ಅವನ ಮಿಂಚೆ ವಿಳಾಸ.ನೀವು ಅವನಿಗೆ ಮಿಂಚೆ ಕಳುಹಿಸಿ ಸ್ವಲ್ಪ ಬುದ್ದಿ ಹೇಳಿ.ಹಾಗೆ ಒಂದು ಪುಟ್ಟ ಮನವಿ ಎಲ್ಲೆಲ್ಲಿ ಕನ್ನಡ ಕೆಳುವುದಿಲ್ಲವೋ ಅಲ್ಲೆಲ್ಲ ಸಣ್ಣದಾಗಿಯಾದರು ದನಿ ಎತ್ತೋಣ, ನಾವು ಬಯಸವ ಬದಲಾವಣೆಗೆ ನಾವೇ ಕಾರಣವಾಗೋಣ.
ಮತ್ತೆ ಸಿಗೋಣ,
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications