ಬೆಂಗಳೂರು ಸೆಂಟ್ರಲ್ ಮಾಲ್ ನಲ್ಲಿ ಕನ್ನಡ ಹಾಡು ಕೇಳಿಸಿ!

ಹಿಂದಿಯೇ ಭಾರತದ ರಾಷ್ಟ್ರಭಾಷೆಯೆಂಬ ಸುಳ್ಳು ಹಮ್ಮಿನಿಂದ ಈ ಮಾಲ್ ಗಳಲ್ಲಿ ಹಿಂದಿಗೆ ಪ್ರಾಶಸ್ತ್ಯ ಕೊಟ್ಟು ಕನ್ನಡವನ್ನು ಕಡೆಗಣಿಸುತ್ತಿದ್ದಾರೆ. ಉದಾಹರಣೆಗೆ ಕನ್ನಡ ಹಾಡುಗಳನ್ನು ಈ ಮಾಲ್ ಗಳಲ್ಲಿ ಕೆಳಿಸದಿರುವುದು, ಇಲ್ಲಿನ ಮಲ್ಟಿಪ್ಲೆಕ್ಸ್ ಗಳಲ್ಲಿ ಹಿಂದಿ ಸಿನಿಮಾಗಳಿಗೆ ಪ್ರಾಶಸ್ತ್ಯ ನೀಡುವುದು, ಕನ್ನಡದಲ್ಲಿ ನಾಮಫಲಕಗಳಿಲ್ಲದಿರುವುದು, ಇದ್ದರೂ ಕಾಟಾಚಾರಕ್ಕೆ ಎಂಬಂತೆ ಯಾರಿಗೂ ಕಾಣಿಸದಿರುವಂತೆ ನಾಮಫಲಕ ಬರೆಸುವುದು ಇತ್ಯಾದಿ.
ಈ ಮಾಲ್ ಗಳಿಂದ ಕನ್ನಡ ಸಂಸ್ಕೃತಿಗೆ ಸಂಚಕಾರ ಬರುತ್ತಿರುವುದನ್ನು ನೋಡಿಯೂ ಕನ್ನಡಿಗರು ಹಾಗೂ ನಮ್ಮ ಕನ್ನಡ ಸಂಘ-ಸಂಸ್ಥೆಗಳು ಸುಮ್ಮನಿರುವುದು ತುಂಬ ದುಃಖದ ವಿಷಯ. ಕೆಲವು ವರ್ಷಗಳ ಹಿಂದೆ ನಾವು ಕೆಲವು ಕನ್ನಡ ಪ್ರೇಮಿಗಳು ಸೇರಿಕೊಂಡು ಕೋರಮಂಗಲದಲ್ಲಿರುವ ಫೋರಮ್ ಮಾಲ್ ನಲ್ಲಿ ಕನ್ನಡ ನಾಮಫಲಕಗಳಿಲ್ಲದಿರುವುದು ಹಾಗೂ ಸಹಾಯ ಕೇಂದ್ರದಲ್ಲಿ ಕನ್ನಡದಲ್ಲಿ ಮಾಹಿತಿ ನೀಡದಿರುವುದರ ಬಗ್ಗೆ ಅಲ್ಲಿನ ವ್ಯವಸ್ಥಾಪಕರನ್ನು ಸೌಜನ್ಯದಿಂದ ಬೇಟಿ ಮಾಡಿ ದೂರು ನೀಡಿದ್ದೆವು. ಇದಾದ ಮೇಲೆ ಆ ಮಾಲಿನಲ್ಲಿ ಕನ್ನಡಕ್ಕೆ ತಕ್ಕ ಮಟ್ಟಿಗಿನ ಸ್ಥಾನ ದೊರೆತಿದ್ದು ನಮಗೆಲ್ಲ ಸಂತೋಷವಾಗಿತ್ತು.
ಆದರೆ ಇತ್ತೀಚೆಗೆ ಬೆಂಗಳೂರಿನ ಜೆ.ಪಿ.ನಗರದಲ್ಲಿರುವ “ಬೆಂಗಳೂರು ಸೆಂಟ್ರಲ್" ಮಾಲ್ ಗೆ ಹೋದಾಗ ಅಲ್ಲಿ ಹಿಂದಿ ಹಾಡು ಪ್ರಸಾರ ಮಾಡುತ್ತಿರುವುದನ್ನು ಕಂಡು ಬೇಸರವಾಯಿತು. ತಕ್ಷಣ ಡಿ.ಜೆ ಬಳಿ ಹೋಗಿ ಕನ್ನಡ ಹಾಡು ಹಾಕಲು ಕೇಳಿಕೊಂಡೆ. ಆದರೆ ಕನ್ನಡ ಸಿ.ಡಿ ಇಲ್ಲ ಎಂಬ ಉತ್ತರ ಸಿಕ್ಕಿತು. ಬೆಂಗಳೂರಿನಲ್ಲ್ಲಿ ಕನ್ನಡ ಹಾಡುಗಳ ಸಿ.ಡಿ ಸಿಗುವುದಿಲ್ಲವೇ ಎಂದು ದಬಾಯಿಸಿದೆ. ಅಲ್ಲಿನ ಸಹಾಯಕ ವ್ಯವಸ್ಥಾಪಕರನ್ನು ಕರೆಸಿ ಈ ಬಗ್ಗೆ ದೂರು ನೀಡಿದೆ. ವ್ಯವಸ್ಥಾಪಕರು ಇನ್ನು ಮುಂದೆ ಕನ್ನಡ ಹಾಡುಗಳನ್ನು ಕೇಳಿಸುತ್ತೇವೆ ಎಂದು ಸಮಜಾಯಿಷಿ ನೀಡಿದರು.
ಜೆ.ಪಿ.ನಗರ ಹಾಗೂ ಜಯನಗರದಲ್ಲಿ ಕನ್ನಡಿಗರಿಗೆ ಬರವಿಲ್ಲ. ಇಲ್ಲಿನ ಬಿಗ್ ಬಜಾರ್ ಹಾಗೂ ಬೆಂಗಳೂರು ಸೆಂಟ್ರಲ್ ಮಾಲ್ ಗಳಿಗೆ ಬಹಳಷ್ಟು ಕನ್ನಡಿಗರು ವ್ಯಾಪಾರ ಮಾಡಲು ಬರುತ್ತಾರೆ. ಆದರೆ ಯಾರೊಬ್ಬರೂ ಕನ್ನಡ ಹಾಡು ಪ್ರಸಾರ ಮಾಡಿ ಎಂದು ಕೇಳುವುದಿಲ್ಲ. ಆಲ್ಲಿನ ವ್ಯಾಪಾರಿಗಳೊಂದಿಗೆ ಕನ್ನಡದಲ್ಲೇ ಮಾತನಾಡುವ ಕನ್ನಡಿಗರು ಕೆಲವೇ ಮಂದಿ. ಬಹಳಷ್ಟು ಕನ್ನಡಿಗರು ತಾವು ಬಹುಬಾಷಾ ಪ್ರವೀಣರೆಂದು ತೋರಿಸಿಕೊಳ್ಳಲು ಅಲ್ಲಿನ ಸಿಬ್ಬಂದಿಯೊಂದಿಗೆ ಇಂಗ್ಲಿಷ್, ಹಿಂದಿ ಭಾಷೆಯಲ್ಲೇ ವ್ಯವಹರಿಸುವುದನ್ನು ನೋಡಿ ದುಃಖವಾಗುತ್ತದೆ.
ಯಾರೊ ಒಂದಿಬ್ಬರು ಕನ್ನಡಿಗರು ಹೋಗಿ ಕನ್ನಡದ ಹಾಡು ಪ್ರಸಾರ ಮಾಡಿ, ಕನ್ನಡ ನಾಮಫಲಕ ಹಾಕಿ ಎಂದು ಎಲ್ಲಾ ಮಾಲುಗಳಿಗೂ ಹೋಗಿ ಒತ್ತಾಯಿಸುವುದು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬ ಕನ್ನಡಿಗರು ತಾವಿರುವ ಪ್ರದೇಶದ ಮಾಲುಗಳಿಗೆ ಬೇಟಿ ನೀಡಿದಾಗ, ಕನ್ನಡಕ್ಕೆ ಒತ್ತಾಯಿಸಿದರೆ ಆಗ ಮಾಲ್ ಗಳಲ್ಲಿ ಕನ್ನಡ ನುಡಿ ಪಸರಿಸಬಹುದು. ಇಲ್ಲಿನ ವ್ಯವಸ್ಥಾಪಕರ ಹಾಗೂ ಗ್ರಾಹಕ ಸೇವೆಯ ಮಿಂಚೆ(ಇ-ಮೇಲ್) ವಿಳಾಸಕ್ಕೆ ([email protected]; [email protected]) ದಯವಿಟ್ಟು ನೀವೆಲ್ಲ ಮಿಂಚಿಸಿ ಕನ್ನಡ ಹಾಡು ಪ್ರಸಾರ ಮಾಡಲು, ಕನ್ನಡಕ್ಕೆ ಪ್ರಾಶಸ್ತ್ಯ ನೀಡಲು ಒತ್ತಾಯಿಸಬೇಕೆಂದು ಕೋರುತ್ತೇನೆ. ನಾನು ಕಳುಹಿಸಿದ್ದ ಮಿಂಚೆ ನಿಮ್ಮ ಅವಗಾಹನೆಗಾಗಿ ಕೆಳಗೆ ನೀಡಿದ್ದೇನೆ.
ವಂದನೆಗಳು,
ಸಂಪಿಗೆ ಶ್ರೀನಿವಾಸ, ಬೆಂಗಳೂರು
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications