ಸೀರೆ ಹಂಚುತ್ತಾ ಹೋಗುವುದು ಅಭಿವೃದ್ಧಿಯೇ ?

ಭಾಗ್ಯಲಕ್ಷ್ಮೀ ಯೋಜನೆಯ ಬಾಂಡ್ ಪಡೆಯಲು ರಾಜ್ಯದಲ್ಲಿ 10 ಲಕ್ಷ ಮಂದಿ ಹೆಸರು ನೋಂದಾಯಿಸಿದ್ದಾರೆ. ಇವರಲ್ಲಿ ಇನ್ನೂ 2.5 ಲಕ್ಷ ಮಂದಿಗೆ ಬಾಂಡ್ ದೊರಕಿಲ್ಲ. ಇಂಥ ಸಂದರ್ಭದಲ್ಲಿ ಬಾಂಡ್ ನೀಡುವ ಮುನ್ನ ಸೀರೆ ನೀಡಬೇಕಿತ್ತೇ? ಇದು ಅಭಿವೃದ್ಧಿಯೇ? ಸುಮಾರು 10 ಲಕ್ಷ ತಾಯಂದಿರಿಗೆ 26 ಕೋಟಿ ರೂಪಾಯಿ ವೆಚ್ಚ ಮಾಡಿ ಸೀರೆ ನೀಡಲಾಗಿದೆ.
ಸರಿ, ಯೋಜನೆಯಡಿ ವಿತರಿಸಲು 250-300 ರೂಪಾಯಿ ಮೌಲ್ಯದ ಸೀರೆಗಳನ್ನು ಸೂರತ್ನಿಂದ ತರಿಸಲಾಗಿದೆ. ಇಷ್ಟು ಸೀರೆಗಳನ್ನು ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮದಿಂದಕೊಂಡಿದ್ದರೆ ನಮ್ಮ ನೇಕಾರರ ಬದುಕು ಒಂದಷ್ಟು ಹಸನಾಗುತ್ತಿತ್ತು. ಸಾಗಾಣಿಕೆ ವೆಚ್ಚ , ಮಾರಾಟ ತೆರಿಗೆ ರಾಜ್ಯಕ್ಕೆ ಸಲ್ಲುತಿತು. ಬೇರೆ ಯಾವುದೋ ರಾಜ್ಯಕ್ಕೆ, ಯಾರೋ ಉದ್ಯಮಿಗೆ ಲಾಭ ಆಯಿತಷ್ಟೆ. ಇದು ಅಭಿವೃದ್ಧಿಯೇ?
ಸಂಕಷ್ಟದಲ್ಲಿ ಯಾವ ರಾಜ್ಯದ ನೇಕಾರರಿಗೆ ನೆರವಿನ ಹಸ್ತ ಚಾಚಿದ್ದ ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮ(ಕೆಹೆಚ್ಡಿಸಿ) ವಿವಿಧೆಡೆ ಎರಡು ಸಾವಿರ ಮನೆಗಳನ್ನು ಹುಡ್ಕೊ ನೆರವಿನಿಂದ ಕಟ್ಟಿಕೊಟ್ಟಿತ್ತು. ಇಂದಿಗೂ ಈ ಮನೆಗಳು ನೇಕಾರರ ಹೆಸರಿಗೆ ಖಾತೆ ಆಗಿಲ್ಲ. ಈ ಯೋಜನೆಯಡಿ ಸಾಲಗಾರರಾದ ನೇಕಾರರ 4.5 ಕೋಟಿ ರೂಪಾಯಿ ಮನ್ನಾ ಮಾಡುವ ಭರವಸೆ ಇನ್ನೂ ಈಡೇರಿಲ್ಲ.
ಸೀರೆ ಹಂಚಲು 26 ಕೋಟಿ ವ್ಯಯ ಮಾಡುವ ಬದಲು ಈ ಸಾಲ ಮನ್ನಾ ಮಾಡಿದ್ದರೆ ನೇಕಾರರ ಬದುಕಿಗೊಂದು ಸ್ವಂತ ಸೂರು ಸಿಗುತ್ತಿತು. ಇದರ ಬದಲು, ಒಂದು ದಿನ ಆಯಾ ಜಿಲ್ಲೆಯ ಸಾರಿಗೆ ವ್ಯವಸ್ಥೆ ಹದಗೆಡಿಸಿ, ಒಂದು ದಿನದ ದುಡಿಮೆಯನ್ನು ಕಿತ್ತುಕೊಂಡು 300 ರೂಪಾಯಿ ಮೌಲ್ಯದ ಸೀರೆ ನೀಡುವುದು ಅಭಿವೃದ್ಧಿ? ತವರುಮನೆ ಲೆಕ್ಕದಲ್ಲಿ ಈ ಸೀರೆಗಳನ್ನು ವಿತರಣೆ ಮಾಡಲಾಗಿದೆಯಂತೆ. ಮುಂದೆ ಭಾಗ್ಯಲಕ್ಷ್ಮೀ ಯೋಜನೆಯ ಅಪ್ಪಂದಿರಿಗೆ ಪಂಚೆ ವಿತರಿಸುವ ಯೋಜನೆ ಹಮ್ಮಿಕೊಳ್ಳಬಹುದು. ಸೀರೆ ಹಂಚುವುದು ಅಭಿವೃದ್ಧಿಯಾದರೆ, ಪಂಚೆ ಹಂಚುವುದೂ ಅದೇ ತಾನೇ?
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications