ಸೀರೆ ಹಂಚುತ್ತಾ ಹೋಗುವುದು ಅಭಿವೃದ್ಧಿಯೇ ?

ಭಾಗ್ಯಲಕ್ಷ್ಮೀ ಯೋಜನೆಯ ಬಾಂಡ್ ಪಡೆಯಲು ರಾಜ್ಯದಲ್ಲಿ 10 ಲಕ್ಷ ಮಂದಿ ಹೆಸರು ನೋಂದಾಯಿಸಿದ್ದಾರೆ. ಇವರಲ್ಲಿ ಇನ್ನೂ 2.5 ಲಕ್ಷ ಮಂದಿಗೆ ಬಾಂಡ್ ದೊರಕಿಲ್ಲ. ಇಂಥ ಸಂದರ್ಭದಲ್ಲಿ ಬಾಂಡ್ ನೀಡುವ ಮುನ್ನ ಸೀರೆ ನೀಡಬೇಕಿತ್ತೇ? ಇದು ಅಭಿವೃದ್ಧಿಯೇ? ಸುಮಾರು 10 ಲಕ್ಷ ತಾಯಂದಿರಿಗೆ 26 ಕೋಟಿ ರೂಪಾಯಿ ವೆಚ್ಚ ಮಾಡಿ ಸೀರೆ ನೀಡಲಾಗಿದೆ.
ಸರಿ, ಯೋಜನೆಯಡಿ ವಿತರಿಸಲು 250-300 ರೂಪಾಯಿ ಮೌಲ್ಯದ ಸೀರೆಗಳನ್ನು ಸೂರತ್ನಿಂದ ತರಿಸಲಾಗಿದೆ. ಇಷ್ಟು ಸೀರೆಗಳನ್ನು ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮದಿಂದಕೊಂಡಿದ್ದರೆ ನಮ್ಮ ನೇಕಾರರ ಬದುಕು ಒಂದಷ್ಟು ಹಸನಾಗುತ್ತಿತ್ತು. ಸಾಗಾಣಿಕೆ ವೆಚ್ಚ , ಮಾರಾಟ ತೆರಿಗೆ ರಾಜ್ಯಕ್ಕೆ ಸಲ್ಲುತಿತು. ಬೇರೆ ಯಾವುದೋ ರಾಜ್ಯಕ್ಕೆ, ಯಾರೋ ಉದ್ಯಮಿಗೆ ಲಾಭ ಆಯಿತಷ್ಟೆ. ಇದು ಅಭಿವೃದ್ಧಿಯೇ?
ಸಂಕಷ್ಟದಲ್ಲಿ ಯಾವ ರಾಜ್ಯದ ನೇಕಾರರಿಗೆ ನೆರವಿನ ಹಸ್ತ ಚಾಚಿದ್ದ ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮ(ಕೆಹೆಚ್ಡಿಸಿ) ವಿವಿಧೆಡೆ ಎರಡು ಸಾವಿರ ಮನೆಗಳನ್ನು ಹುಡ್ಕೊ ನೆರವಿನಿಂದ ಕಟ್ಟಿಕೊಟ್ಟಿತ್ತು. ಇಂದಿಗೂ ಈ ಮನೆಗಳು ನೇಕಾರರ ಹೆಸರಿಗೆ ಖಾತೆ ಆಗಿಲ್ಲ. ಈ ಯೋಜನೆಯಡಿ ಸಾಲಗಾರರಾದ ನೇಕಾರರ 4.5 ಕೋಟಿ ರೂಪಾಯಿ ಮನ್ನಾ ಮಾಡುವ ಭರವಸೆ ಇನ್ನೂ ಈಡೇರಿಲ್ಲ.
ಸೀರೆ ಹಂಚಲು 26 ಕೋಟಿ ವ್ಯಯ ಮಾಡುವ ಬದಲು ಈ ಸಾಲ ಮನ್ನಾ ಮಾಡಿದ್ದರೆ ನೇಕಾರರ ಬದುಕಿಗೊಂದು ಸ್ವಂತ ಸೂರು ಸಿಗುತ್ತಿತು. ಇದರ ಬದಲು, ಒಂದು ದಿನ ಆಯಾ ಜಿಲ್ಲೆಯ ಸಾರಿಗೆ ವ್ಯವಸ್ಥೆ ಹದಗೆಡಿಸಿ, ಒಂದು ದಿನದ ದುಡಿಮೆಯನ್ನು ಕಿತ್ತುಕೊಂಡು 300 ರೂಪಾಯಿ ಮೌಲ್ಯದ ಸೀರೆ ನೀಡುವುದು ಅಭಿವೃದ್ಧಿ? ತವರುಮನೆ ಲೆಕ್ಕದಲ್ಲಿ ಈ ಸೀರೆಗಳನ್ನು ವಿತರಣೆ ಮಾಡಲಾಗಿದೆಯಂತೆ. ಮುಂದೆ ಭಾಗ್ಯಲಕ್ಷ್ಮೀ ಯೋಜನೆಯ ಅಪ್ಪಂದಿರಿಗೆ ಪಂಚೆ ವಿತರಿಸುವ ಯೋಜನೆ ಹಮ್ಮಿಕೊಳ್ಳಬಹುದು. ಸೀರೆ ಹಂಚುವುದು ಅಭಿವೃದ್ಧಿಯಾದರೆ, ಪಂಚೆ ಹಂಚುವುದೂ ಅದೇ ತಾನೇ?
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications