Get Updates
Get notified of breaking news, exclusive insights, and must-see stories!

ಅರುಂಧತಿ ರಾಯ್ ಹೇಳಿದ್ದು ರೈಟ್!

Barack Obama, President of America
ಭಾರತದಲ್ಲಿ ಪ್ರಜಾಪ್ರಭುತ್ವ ಇಲ್ಲ ಎಂದು ಲೇಖಕಿ ಅರುಂಧತಿ ರಾಯ್ ಹೇಳಿದ್ದು ಸರಿಯಾಗಿದೆ. ಪರದೇಶದ ಓರ್ವ (ಪ್ರಥಮ)ಪ್ರಜೆ ಭಾರತಕ್ಕೆ ಬಂದನೆಂದರೆ, ಆಗ ಭಾರತದಲ್ಲಿ ಆತ ಬಂದಿಳಿದು ಹರಿದಾಡುವ ಜಾಗಗಳಲ್ಲಿ ಪ್ರಜೆಗಳಿಗೆ ಬೀಡಾಡಿ ನಾಯಿಗಳಿಗಿರುವ ಸ್ವಾತಂತ್ರ್ಯವೂ ಇರುವುದಿಲ್ಲ.

* 23 ನಿಮಿಷ ಕಾಲ ವಿಮಾನ ನಿಲ್ದಾಣವನ್ನು ಪ್ರಯಾಣಿಕರೂ ಸೇರಿದಂತೆ ಸಾರ್ವಜನಿಕರಿಗೆ ಬಂದ್ ಮಾಡಲಾಗುತ್ತದೆ.

* ರಸ್ತೆಗಳಲ್ಲಿ ಅಂಗಡಿಮುಂಗಟ್ಟುಗಳನ್ನು ಮುಚ್ಚಿಸಲಾಗುತ್ತದೆ.

* ರಸ್ತೆ ಹಾಗೂ ಫುಟ್‌ಪಾತ್‌ಗಳಲ್ಲಿ ವಾಹನ ಸಂಚಾರ ಹಾಗೂ ಪಾದಚಾರಿಗಳ ಉಪಸ್ಥಿತಿಗಳನ್ನು ನಿರ್ಬಂಧಿಸಲಾಗುತ್ತದೆ.

* ಆತನ ಭದ್ರತಾಧಿಕಾರಿಗಳ ಮತ್ತು ಭಾರತದ ಪೋಲೀಸರ ಕೆಂಗಣ್ಣುಗಳು ಸುತ್ತಲೂ ಮನೆಮಾರುಗೂಡುಗಳೊಳಗಿರುವ ಪ್ರಜೆಗಳಮೇಲೆಲ್ಲ ಬಿದ್ದಿರುತ್ತದೆ.

* ಆತ ಸಂಚರಿಸುವ ಪ್ರದೇಶಗಳ ಸುತ್ತಮುತ್ತೆಲ್ಲ ಅಘೋಷಿತ ಕರ್ಫ್ಯೂ ಜಾರಿಯಲ್ಲಿರುತ್ತದೆ.

* ಬೃಹತ್ ಕಟ್ಟಡಗಳ ಮೇಲೆ ಬಂದೂಕು ಹಿಡಿದ ಗುರಿಕಾರರು ಪ್ರಜೆಗಳ ಎದೆಗೆ ಭಯದ ಬಾಂಬ್ ಹಾಕುತ್ತಿರುತ್ತಾರೆ.

* ಭದ್ರತಾ ಪಡೆ, ಪೋಲೀಸ್ ಪಡೆ, ಅರೆಸೇನಾಪಡೆ, ಎನ್‌ಎಸ್‌ಜಿ ಕಮಾಂಡೊ ಪಡೆ ಮೊದಲಾದ ಯಮದೂತರೆಲ್ಲ ಸೇರಿ ಪ್ರಜೆಗಳ ಬಾಳನ್ನು ನರಕ ಮಾಡಿಡುತ್ತಾರೆ.

* ಆ ಪರದೇಸಿಯ ಭಾಷಣ ಆಲಿಸಿ ಅನಂತರ ಆತನ ಸಾಮೀಪ್ಯ ಬಯಸುವ ಗಣ್ಯರನ್ನೂ ಕೂಡ ಮುಲಾಜಿಲ್ಲದೆ ದೂರ ಇಡಲಾಗುತ್ತದೆ.

* ಸುದ್ದಿಮಾಧ್ಯಮಗಳಲ್ಲಿ ಆತನ ಸುದ್ದಿಯು ದೇಶದ ಪ್ರಜೆಗಳ ಸುದ್ದಿಗಳನ್ನು ಬದಿಗೊತ್ತಿ ವಿಜೃಂಭಿಸುತ್ತದೆ.

* ಅರುಂಧತಿ ರಾಯ್ ಭಾರತವನ್ನು ಬಿಟ್ಟು ತೊಲಗುವುದೊಳ್ಳೆಯದು.

* ಪಾಕಿಸ್ಥಾನದಲ್ಲಿ ಆಕೆಗೆ ಪ್ರಜಾಪ್ರಭುತ್ವ ಗೋಚರಿಸಬಹುದೇನೋ. ಹೋಗಿ ನೋಡಲಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+