ಹಿಜಡಾಗಳ ಕೊರಳಿಗೆ ಗಂಟೆ ಕಟ್ಟುವವರಾರು?

ನಾನು ಕೆಲಸಕ್ಕೆ ಹೋಗಿ ಬರುವ ದಾರಿಯುದ್ದಕ್ಕೂ ಸುಮಾರು 20 ಸಿಗ್ನಲ್ ಲೈಟುಗಳನ್ನು ದಾಟಬೇಕು. ಪ್ರತಿಯೊಂದು ಸಿಗ್ನಲ್ ಲೈಟಿನಲ್ಲೂ ಇವರು ಹಿಂಡುಹಿಂಡಾಗಿ ದಂಡೆತ್ತಿಬಂದು ಕಾಸು ಕೀಳುತ್ತಾರೆ. ಒಬ್ಬರಿಗೋ ಇಬ್ಬರಿಗೋ ರೂಪಾಯಿ ಎರಡು ರೂಪಾಯಿ ಕೊಟ್ಟು ಸಾಗಹಾಕಬಹುದು, ಆದರೆ ಹತ್ತು ಸಿಗ್ನಲ್ ಲೈಟಿನ ಸ್ಟಾಪುಗಳಲ್ಲಿ ಪ್ರತಿದಿನ ಅಟಕಾಯಿಸಿಕೊಳ್ಳು ಇವರ ಕಾಟದಿಂದ ಬೇಸತ್ತಿದ್ದೇನೆ. ಕೆಲವರಿಗೆ ಕಾಯಿನ್ ಕೊಟ್ಟರೆ ಆಗದು. ಹತ್ತು ರೂಪಾಯಿ ಕೊಡು ರಾಜಾ ಎಂದು ಕೆನ್ನೆ ಸವರಿ ದೃಷ್ಟಿ ತೆಗೆಯುತ್ತಾರೆ.
ಸಾರ್ವಜನಿಕ ಸ್ಥಳದಲ್ಲಿ ವಾಹನ ಚಾಲಕರ ತಲೆ ಹಾಳು ಮಾಡುತ್ತಿರುವ ಇವರ ಉಪಟಳ ತಡೆಯುವವರಿಲ್ಲವೇ ಎಂದು ಕೇಳುತ್ತಿದ್ದೇನೆ. ಬೈಕಿನಲ್ಲಿ ನಿಂತಾಗ ಬಂದು ಕೆನ್ನೆ ಮುಟ್ಟುವುದು, ತಲೆ ಸವರುವುದು, ಸೊಂಟಕ್ಕೆ ಕಚಗುಳಿ ಇಡುವುದು, ಗಾಡಿ ಆಫ್ ಮಾಡಿ ಕೀ ತೆಗೆದುಕೊಳ್ಳುವುದು ಮುಂತಾದ ಕಪಿಚೇಷ್ಟೆಗಳನ್ನು ಮಾಡುವವರ ವಿರುದ್ಧ ನೊಂದವರು ದನಿ ಎತ್ತಲೇ ಬೇಕಾಗಿದೆ.
ಎಲ್ಲರಿಗೂ ಬದುಕುವ ಹಕ್ಕಿದೆ. ಹಾಗೆ ಇವರಿಗೂ ಕೂಡ ಇರಲಿ. ಆದರೆ ಜನರನ್ನು ಸುಲಿಗೆ ಮಾಡಿಕೊಂಡು ಹಿಂಸೆ ಕೊಡುವುದು ಯಾವ ನ್ಯಾಯ? ಕೆಲವು ಬಾರಿ ಟ್ರಾಫಿಕ್ ಸಿಗ್ನಲ್ ಬಳಿ ನಿಂತಿರುವ ಪೊಲೀಸರ ಗಮನಕ್ಕೆ ಈ ವಿಚಾರ ತಂದಿದ್ದೇನೆ. ಅವರು ಏನೂ ಆಗಿಲ್ಲವೇನೋ, ಅಥವಾ ರಸ್ತೆಯಲ್ಲಿ ಹಿಜಡಾಗಳು ಉಪದ್ರವ ಕೊಡುವುದನ್ನು ಪೊಲೀಸ್ ಕಮಿಷನರ್ ಅಧಿಕೃತ ಮಾಡಿದ್ದಾರೋ ಎನ್ನುವಂತೆ ವರ್ತಿಸುತ್ತಾರೆ. ಕೋರಮಂಗಲದ ಸೋನಿ ಮಳಿಗೆಯ ಸಮೀಪವಿರುವ ಸಿಗ್ನಲ್ ನಲ್ಲಿ ನಿಂತಿದ್ದ ಒಬ್ಬ ಕಾನ್ ಸ್ಟೇಬಲ್ ಗೆ ಒಮ್ಮೆ ಈ ವಿಷಯ ಹೇಳಿ ತಕರಾರು ಎತ್ತಿದೆ. ಅಯ್ಯೋ ಹೋಗಿ ಸ್ವಾಮಿ. ಇವು ನಮ್ಮನ್ನೇ ಬಿಡಲ್ಲ. ನಮ್ಮ ಹತ್ತಿರಾನೇ ಕಾಸು ಕೀಳುತ್ತವೆ ಎಂದು ಕೈಚೆಲ್ಲಿದ. ಬೈಕಲ್ಲಿ ಮಾತ್ರವಲ್ಲ, ಎಸಿ ಕಾರಿನಲ್ಲಿ ಗ್ಲಾಸ್ ಹಾಕಿಕೊಂಡು ಕುಳಿತಿದ್ದರೆ, ಗಾಜು ಖಟ್ ಖಟ್ ಎಂದು ಕುಟ್ಟಿ ಹಿಂಸೆ ಮಾಡುತ್ತಾರೆ.
ಶೇಕಡಾ 90ರಷ್ಟು ಹಿಜಡಾಗಳು ತಮಿಳಿನಲ್ಲಿ ಮಾತನಾಡುತ್ತಾರೆ. ಇವರೆಲ್ಲ ತಮಿಳುನಾಡಿನಿಂದ ಬೆಂಗಳೂರಿಗೆ ವಲಸೆ ಬಂದಿರಲಿಕ್ಕೂ ಸಾಕು. ಕಾವೇರಿ ನೀರು ಜಗಳ, ಹೊಗೇನಕಲ್ ವಿವಾದಗಳು ಕನ್ನಡ ನಾಡಿನಲ್ಲಿ ಬಹಿರಂಗವಾಗಿ ನಡೆಯುತ್ತವೆ. ಆದರೆ, ತಮಿಳು ಹಿಜಡಾಗಳ ಈ ಬಗೆಯ ನಿತ್ಯ ಕಿರಿಕಿರಿಗಳನ್ನು ಸಹಿಸಿಕೊಳ್ಳುವವರಾರು. ನಮಗೇನು ಕರ್ಮ? ನನ್ನಂತೆ ಅನೇಕರನ್ನು ಈ ಸಮಸ್ಯೆ ಬಾಧಿಸುತ್ತಿದೆ. ಆದರೆ ಎಲ್ಲರೂ ಸಹಿಸಿಕೊಂಡು ಸುಮ್ಮನಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಲು ಬೆಂಗಳೂರಿನ ಆಡಳಿತ, ಅಂದರೆ, ಬಿಬಿಎಂಪಿ, ಪೊಲೀಸರು, ಜಿಲ್ಲಾಧಿಕಾರಿಗಳು ಮತ್ತು ನಾಗರಿಕ ಗುಂಪುಗಳು ಕಲೆತು ಚರ್ಚಿಬೇಕಾಗಿದೆ.
ಸಮಸ್ಯೆಯನ್ನು ಹೀಗೇ ಬೆಳೆಯಲು ಬಿಟ್ಟರೆ, ಒಂದು ದಿನ ಹಿಜಡಾಗಳ ಸಂಖ್ಯೆ ಲಕ್ಷಾಂತರವಾಗಿ ಬೆಂಗಳೂರಿನಲ್ಲಿ ಅವರೇ ಒಂದು ಕಾಲೋನಿ ಕಟ್ಟಿಕೊಳ್ಳುತ್ತಾರೆ. ಅಲ್ಲಿಂದ ಚುನಾವಣೆಗೆ ನಿಂತು ಗೆದ್ದು ಬಂದರೂ ಆಶ್ಚರ್ಯವಿರುವುದಿಲ್ಲ. ಬೆಂಗಳೂರು ದೇವರೇ ಗತಿ ಆಗುತ್ತದೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications