ಮುಂಬಯಿ ಸಮುದ್ರ ಸೇತು ರಾಜೀವ್ ನೇಮ್ ಪ್ಲೇಟು!

ಆದರೆ ಯಥಾಪ್ರಕಾರ ಸೋನಿಯಾ ಗಾಂಧಿಯವರು ಈ 'ಸಮುದ್ರ ಕೊಂಡಿ'ಯನ್ನು ಉದ್ಘಾಟನೆ ಮಾಡುತ್ತ ಅದಕ್ಕೆ ಇಟ್ಟ ಹೆಸರು ಮಾತ್ರ 'ರಾಜೀವ್ ಗಾಂಧಿ ಸೇತುವೆ!' ಈ ಒಂದು ವಿಷಯವಂತೂ ನನ್ನ ಊಹೆಗೆ ನಿಲುಕದ್ದು. ಕಾಂಗ್ರೆಸ್ ಸರಕಾರಕ್ಕೆ ದೇಶದ ಎಲ್ಲ ಕಾರ್ಯಕ್ರಮ, ಯೋಜನೆ, ಪ್ರಶಸ್ತಿ ಇತ್ಯಾದಿಗಳಿಗೆ ಗಾಂಧಿ ಕುಟುಂಬದ ಹೆಸರನ್ನು ಸೇರಿಸದೇ ಹೋದರೆ ಸಮಾಧಾನವೇ ಇಲ್ಲವೇ?
ಎಲ್ಲಿ ನೋಡಿದರೂ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಹೆಸರುಗಳೇ ರಾರಾಜಿಸುತ್ತವೆ. ಎಲ್ಲ ತ್ರಿಮೂರ್ತಿ ಗಾಂಧಿಮಯ. (ಅದೇ ನಮ್ಮ ಮಹಾತ್ಮಾ ಗಾಂಧೀಜಿ ಹೆಸರು ಅಷ್ಟಾಗಿ ಕಾಣೊಲ್ಲ). ಸರಿ, ಇವರೆಲ್ಲ ನಮ್ಮನ್ನ ಆಳಿ ಅಗಲಿದ ಮಹಾನ್ ನಾಯಕರುಗಳು ನಿಜ. ಆದರೂ 'ಅತಿಯಾದರೆ ಅಮೃತವೂ ವಿಷ' ಅಂತಾರಲ್ಲ ಹಾಗಾಯಿತು ಇದು. ಜವಾಹರ ರೋಜಗಾರ್ ಯೊಜನೆ, ಇಂದಿರಾ ಆವಾಸ್ ಯೋಜನೆ, ಇಂದಿರಾ ವಿಕಾಸ್ ಪತ್ರ, ರಾಜೀವ್ ಖೇಲ್ ರತ್ನ ....... ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ದೇಶದ ಪ್ರಜೆಗಳ ತೆರಿಗೆ ದುಡ್ಡಿನಿಂದ ಕಾರ್ಯರೂಪಕ್ಕೆ ಬಂದ ಈ ಎಲ್ಲ ಯೋಜನೆ, ಸೇತುವೆಗಳಿಗೆ ಒಂದೇ ಕುಟುಂಬದ ಹೆಸರನ್ನ ಇಡುವದು ಯಾವ ನ್ಯಾಯ? ಅದೇ ನಮ್ಮ ಮಾನ್ಯ ವಾಜಪೇಯಿಯವರು ಎಲ್ಲ ಹಳ್ಳಿಗಳ ರಸ್ತೆ ಸುಧಾರಣೆಗೆ ಜಾರಿಗೆ ತಂದ ಯೋಜನೆಗೆ 'ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ' ಅಂತ ಹೆಸರಿಟ್ಟು ಎಲ್ಲರಿಗೂ ಮಾದರಿಯಾದರು.
ಕಾಂಗ್ರೆಸ್ಸಿಗರಿಗೆ ದೇಶದ ಎಲ್ಲ ಕಡೆ ಈ ತ್ರಿಮೂರ್ತಿ ಗಾಂಧಿಗಳ ಹೆಸರನ್ನ ತೂಗು ಹಾಕುತ್ತಿರುವ ಆ ಕುಟುಂಬದವರಿಗೆ ನಮ್ಮ ದೇವರು ಎಂಬ ಬುದ್ಧಿ ಯಾವಾಗ ಕೊಡುತ್ತಾನೋ? ಮಹಾನ್ ಸ್ವಾತಂತ್ರ್ಯ ಹೋರಾಟಗಾರರಾದ ಸುಭಾಸ್ ಚಂದ್ರ ಭೋಸ್, ಲೋಕಮಾನ್ಯ ತಿಲಕ್, ಸರ್ದಾರ್ ವಲ್ಲಭಭಾಯಿ ಪಟೇಲ್ ಅಥವಾ ಸಿ. ವಿ. ರಾಮನ್ ... ಇವರುಗಳ ಹೆಸರು ತೋಚುವುದೇ ಇಲ್ಲವೇ? ಒಂದು ಸುಂದರ ಸಮುದ್ರ ಸೇತುವೂ ರಾಜೀವ್ ಹೆಸರೆಂಬ ಕಪ್ಪುಚುಕ್ಕೆ ಅಂಟಿಸಿಕೊಂಡಿದೆ.












Click it and Unblock the Notifications