ಅಕ್ಕ ಸಮ್ಮೇಳನದಲ್ಲಿ ಕನ್ನಡ ಸಂಸ್ಕೃತಿಯ ಸೊಗಡು
ಬೆಂಗಳೂರು, ಆ.18: ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರೆಲ್ಲರನ್ನು ಒಂದೆಡೆ ಬೆಸೆಯುವ ಕಾರ್ಯವನ್ನು ಅಕ್ಕ ಸಂಸ್ಥೆ ನಿರಂತರವಾಗಿ ಮಾಡಿಕೊಂಡು ಬಂದಿದೆ. ಈ ಬಾರಿಯ 8ನೇ ವಿಶ್ವಕನ್ನಡ ಸಮ್ಮೇಳನದಲ್ಲಿ ಕನ್ನಡ ಸಂಸ್ಕೃತಿ, ಕಲೆ, ಜಾನಪದ ಶ್ರೀಮಂತಿಕೆಯನ್ನು ಅನಾವರಣಗೊಳಿಸಲು ಕಲಾವಿದರ ತಂಡ ಸಜ್ಜಾಗಿದೆ.
ಅಮೆರಿಕಕ್ಕೆ ಹೊರಟಿರುವ ಈ ಕಲಾವಿದರ ತಂಡಕ್ಕೆ ಕಪ್ಪಣ್ಣ ಅವರು ನಾವಿಕರಾಗಿದ್ದಾರೆ. ಮಹಿಳೆಯರಿಂದ ಯಕ್ಷಗಾನ, ನಗಾರಿ, ಚೌಡಿಕೆ ಮೇಳ, ಜಾನಪದ ಗೀತ ಗಾಯನ, ಕುವೆಂಪು ಕಾವ್ಯ ಆಧಾರಿತ ಭರತನಾಟ್ಯ ಆಯೋಜನೆಯಾಗಿದೆ.
ಕಲಾವಿದರ ತಂಡದ ವಿವರ ಈ ಕೆಳಗಿನಂತಿದೆ: [ಸಮ್ಮೇಳನಕ್ಕೊಂದು ಸುಂದರ ಅಪ್ಲಿಕೇಷನ್]
1. ಮಹಿಳಾ ಯಕ್ಷಗಾನ
* ನಾಲ್ವರು ಮಹಿಳೆಯರು ಹಾಗೂ ಇಬ್ಬರು ಪುರುಷ ಕಲಾವಿದರು, ಡಾ. ಶಿವರಾಮ ಕಾರಂತ ಯಕ್ಷಗಾನ ಬ್ಯಾಲೆ.
* ಪ್ರಸಂಗ : ಪಂಚವಟಿ
* ನಿರ್ದೇಶನ : ಶ್ರೀಮತಿ ಮಾಲಿನಿ ಮಲ್ಯ ಹಾಗೂ ಸುಧೀರ್ ರಾವ್ ಕೊಡವೂರು
* ವಿನ್ಯಾಸ ಹಾಗೂ ಸಹಕಾರ : ಶ್ರೀನಿವಾಸ್ ಸಾಸ್ತನ್ ಹಾಗೂ ಗೌರಿ ಕೆ ಶ್ರೀನಿವಾಸ್
* ಶ್ರೀಮತಿ ಕಡೆಕ್ಕೋಡು ಗೌರಿ ಅವರ ನೇತೃತ್ವದ ಕರ್ನಾಟಕ ಮಹಿಳಾ ಯಕ್ಷಗಾನ ತಂಡ

2. ಚೆಲುವ ಕನ್ನಡ ನಾಡು:
ಧಾರವಾಡ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಿತಾರ್ ಮಾಂತ್ರಿಕ ಉಸ್ತಾದ್ ರತನ್ ರಹಿಮತ್ ಖಾನ್, ಉಸ್ತಾದ್ ಅಬ್ದುಲ್ ಕರೀಂ ಖಾನ್, ಉಸ್ತಾದ್ ಬಾಳೆ ಖಾನ್ ಅವರ ಕುಟುಂಬದ ಮುಂದುವರೆದ ಸಂಗೀತ ಪರಂಪರೆಯ ಕುಡಿಗಳಾದ ಉಸ್ತಾದ್ ರಯೀಸ್ ಖಾನ್ ಹಾಗೂ ಉಸ್ತಾದ್ ಹಫೀಜ್ ಖಾನ್ ಅವರು ಸಂಗೀತ ರಸದೌತಣ ನೀಡಲಿದ್ದಾರೆ. ಇವರಿಗೆ ವಿದ್ವಾನ್ ಸತೀಶ್ ಹಂಪಿಹೊಳಿ ತಬಲಾ ಸಾಥ್ ನೀಡಲಿದ್ದಾರೆ.
3. ಶಾಸ್ತ್ರೀಯ ನೃತ್ಯ, ಸಮಕಾಲೀನ ಸಂಗೀತ ಫ್ಯೂಷನ್
"ಕುವೆಂಪು ಕಂಡ ಕನ್ನಡ ಮತ್ತು ಕರ್ನಾಟಕ"
* ಕಲಾವಿದರು ಶ್ರೀಮತಿ ಪದ್ಮಿನಿ ಅಚ್ಚು, ಶ್ರೀಮತಿ ಬೆಳ್ಳಿ ರವಿವರ್ಮ ಕುಮಾರ್, ಕುಮಾರಿ ಪೂಜಾ ಅನುಪ್, ಕುಮಾರಿ ಪ್ರೇರಣಾ ಪರಾವಸ್ತು
* 30 ನಿಮಿಷಗಳ ಈ ಕಾರ್ಯಕ್ರಮದ ಮೂಲಕ ರಾಷ್ಟ್ರಕವಿ ಕುವೆಂಪು ಅವರಿಗೆ ಗೌರವ ನಮನ ಸಲ್ಲಿಸಲಾಗುತ್ತದೆ.
4. ಕರ್ನಾಟಕ ಜಾನಪದ ಮೇಳ [ಕಲಾವಿದರ ಚಿತ್ರಗಳಿಗೆ ಕ್ಲಿಕ್ಕಿಸಿ]
* ಜಾನಪದ ವಾದ್ಯ ಸಂಗೀತ ಹಾಗೂ ಗೀತ ಗಾಯನ.
* ಚಾಮರಾಜನಗರದ ಸಿ.ಎಂ ನರಸಿಂಹ ಮೂರ್ತಿ ನೇತೃತ್ವ ತಂಡ
5. ಜಾನಪದ ತಂಡ : ನಗಾರಿ
* ಬೇಸ್ ಡ್ರಮ್ಸ್ ಮಾದರಿಯ ನಗಾರಿ ವಾದ್ಯ, ತಮಟೆ, ತಾಳ ವಾದ್ಯ ಮೇಳ, ನೃತ್ಯ ಮೈಸೂರಿನ ಸಿ ಮಂಜುನಾಥ್ ಅವರ ತಂಡ
6. ಜಾನಪದ ತಂಡ: ಚೌಡಿಕೆ ಮೇಳ
* ಎಲ್ಲಮ್ಮ ದೇವಿ ಕುರಿತ ತತ್ವ ಪದ ಗೀತ ಗಾಯನ, ನೃತ್ಯ
* ಬೆಳಗಾವಿಯ ಅಥಣಿ ತಾಲೂಕಿನ ಶ್ರೀಮತಿ ರಾಧಾ ಬಾಯಿ ಮಾರುತಿ ಮಾದರ್ ಹಾಗೂ ತಂಡ
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications