ಅಕ್ಕ ಸಮ್ಮೇಳನಕ್ಕೆ ಆರಂಭಿಕ ದರದ ವಿಶೇಷ ಕೊಡುಗೆ
ಅಮೆರಿಕಾದ ಪಶ್ಚಿಮ ಕರಾವಳಿಯಲ್ಲಿರುವ ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾದಲ್ಲಿ ನಡೆಯಲಿರುವ 8ನೇ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನಕ್ಕೆ ಭರ್ಜರಿ ಸಿದ್ಧತೆಗಳು ಸಾಗುತ್ತಿರುವಂತೆ, ನೋಂದಾವಣಿಯೂ ಸಾಕಷ್ಟು ವೇಗದ ಗತಿಯಲ್ಲಿ ಸಾಗುತ್ತಿದೆ. ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಆಶ್ರಯದಲ್ಲಿ ಮೂರು ದಿನಗಳ ಜಾಗತಿಕ ಕನ್ನಡ ಸಮ್ಮೇಳನ ಜರುಗಲಿದೆ.
ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರು ಈ ಸಮ್ಮೇಳನದ ಬ್ರಾಂಡ್ ಅಂಡಾಸಡರ್ ಆಗಿದ್ದು, ಸ್ಯಾನ್ ಹೋಸೆ ನಗರದ ಪ್ರತಿಷ್ಠಿತ ಮೆಕೆನ್ರಿ ಸಭಾಂಗಣದಲ್ಲಿ ಆಗಸ್ಟ್ 29ರಿಂದ 31ರವರೆಗೆ ನಡೆಯಲಿರುವ ಎಂಟನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ನೋಂದಣಿ ಪ್ರಕ್ರಿಯೆಯನ್ನು ಸಂಕ್ರಾಂತಿಯ ಶುಭದಿನ ಜನವರಿ 14ರಿಂದ ಆರಂಭಿಸಲಾಯಿತು.
ಪ್ರತಿ ಸಮ್ಮೇಳನದಂತೆ ಮೊದಲು ನೋಂದಾವಣಿ ಮಾಡಿಕೊಂಡವರಿಗೆ ಭರ್ಜರಿ ರಿಯಾಯಿತಿಯನ್ನೂ ನೀಡಲಾಗುತ್ತಿದೆ. ಆರಂಭಿಕ ಆಹ್ವಾನದ ನೋಂದಾವಣಿ ಮಾರ್ಚ್ 1ನೇ ತಾರೀಖಿನಂದು ಕೊನೆಗೊಳ್ಳುತ್ತಿದ್ದು, ಈ ಅವಧಿಯೊಳು ನೋಂದಾಯಿಸಿಕೊಂಡರು ಇದರ ಲಾಭ ಪಡೆಯಬಹುದಾಗಿದೆ. ಕೇವಲ 159 ಡಾಲರ್ ನೀಡಿ ವಯಸ್ಕರು ಮತ್ತು ಕೇವಲ 99 ಡಾಲರ್ ನೀಡಿ ಮಕ್ಕಳು ನೋಂದಾಯಿಸಿಕೊಳ್ಳಬಹುದು.

ಆರಂಭಿಕ ಆಹ್ವಾನವನ್ನು ಪಡೆದವರು ಬಿಸಿನೆಸ್ ಫೋರಂನಂಥ ಕೆಲವೊಂದು ಕಾರ್ಯಕ್ರಮಗಳನ್ನು ಹೊರತುಪಡಿಸಿ, ಮೂರು ದಿನಗಳ ಕಾಲ ಎಲ್ಲ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ಜೊತೆಗೆ ಸುಖ್ರಾಸ ಭೋಜನವನ್ನೂ ಸವಿಯಬಹುದು. ಇದರಲ್ಲಿ ವೈಯಕ್ತಿಕ, ಕೌಟುಂಬಿಕ, ಟಿಕೆಟ್ ಇರುವಂಥ ಕಾರ್ಯಕ್ರಮ ಮತ್ತು ದೇಣಿಗೆ ನೀಡುವವರ ಆಫರುಗಳು ಪ್ರತ್ಯೇಕವಾಗಿವೆ. [ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ]
ಸಂಚಾಲಕ ಸುರೇಶ್ ಬಾಬು ಹೇಳುವಂತೆ, "ಸಮ್ಮೇಳನಕ್ಕೆ ನೋಂದಾಯಿಸಿಕೊಳ್ಳಲು ಬಯಸುವ ಕನ್ನಡಿಗರೆಲ್ಲರಿಗೂ ನಮ್ಮ ಸಮಿತಿಯು ಅತ್ಯಂತ ಆಕರ್ಷಕ ಪ್ಯಾಕೇಜ್ ಗಳನ್ನು ತಯಾರಿಸುವಲ್ಲಿ ಬಹಳ ಮುತುವರ್ಜಿ ವಹಿಸಿ ಕೆಲಸ ಮಾಡಿ, ವಿಶೇಷ ಪಾರಿವಾರಿಕ ಹಾಗೂ ವೈಯಕ್ತಿಕ ದರಗಳನ್ನು ನಿಗದಿಪಡಿಸಿದ್ದಾರೆ. ಇವು ಅಮೇರಿಕದಲ್ಲಿರುವ ಹಾಗೂ ಹೊರನಾಡಿನ ಕನ್ನಡಿಗರೆಲ್ಲರನ್ನೂ ಆಕರ್ಷಿಸುವುದು ಖಂಡಿತ. ಅದರಲ್ಲೂ ನಮ್ಮ 'ಆರಂಭಿಕ ವಿಶೇಷ ದರ'ಗಳಂತೂ ಸಮ್ಮೇಳನ ಹಾಗೂ ವಸತಿ ಇವೆರಡರ ನೋಂದಣಿಗೂ ಬಹಳ ಆಕರ್ಷಕವಾಗಿವೆ.
ಇವುಗಳ ಜೊತೆಗೆ, ಇಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಇಚ್ಛಿಸುವವರಿಗೋಸ್ಕರ ನಾವು ಹಲವಾರು ಅನುಕೂಲಕರ 'ಟ್ರಾವೆಲ್ ಪ್ಯಾಕೇಜ್'ಗಳನ್ನೂ ಸಹ ತಯಾರಿಸಿದ್ದೇವೆ. ಇದೇ ಮೊದಲ ಬಾರಿಗೆ ನಮ್ಮ ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದಲ್ಲಿ ನಡೆಯುತ್ತಿರುವ ಈ ಅಕ್ಕ ವಿಶ್ವ ಕನ್ನಡ ಸಮ್ಮೇಳನವನ್ನು ಮರೆಯಲಾಗದ ಮಧುರ ಅನುಭವವಾಗಿ ಕಟ್ಟಿಕೊಡಲು ಉತ್ಸುಕರಾಗಿದ್ದೇವೆ ಎಂದು ಸುರೇಶ್ ಬಾಬು ಅವರು ಒನ್ಇಂಡಿಯಾ ಕನ್ನಡಕ್ಕೆ ಹೇಳಿದರು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications