ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕದಲ್ಲಿ 'ಕನ್ನಡವೇ ಶ್ರೇಷ್ಠ' ಸಂಗೀತ ಔತಣ

By Prasad
|
Google Oneindia Kannada News

Divya Raghavan
ನ್ಯೂ ಜೆರ್ಸಿಯ ಬೃಂದಾವನದ ಆಶ್ರಯದಲ್ಲಿ ನಡೆಸಲಾಗುತ್ತಿರುವ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಶನಿವಾರ ಸೆಪ್ಟೆಂಬರ್ 4, ರಾತ್ರಿ 9.30ಕ್ಕೆ ಸಂಗೀತಪ್ರಿಯರಿಗೊಂದು ಭರ್ಜರಿ ರಸದೌತಣ ಕಾದಿದೆ.

ಕರ್ನಾಟಕದ ಶ್ರೇಷ್ಠ ಗಾಯಕ ಗಾಯಕಿಯರಿಂದ, ಶ್ರೇಷ್ಠ ಕವಿ, ಬರಹಗಾರರ, ಉತ್ಕೃಷ್ಟ ಸಾಹಿತ್ಯವುಳ್ಳ ಜನಪ್ರಿಯ ಚಿತ್ರಗೀತೆಗಳು, ಸುಶ್ರಾವ್ಯ ಭಾವಗೀತೆಗಳು ಹಾಗು ನಿಂತಲ್ಲೇ ಕುಣಿಸುವ ಜಾನಪದ ಗೀತೆಗಳ ಸುಂದರ ಸಂಗೀತ ಸಂಜೆ ಕಾರ್ಯಕ್ರಮ 'ಕನ್ನಡವೇ ಶ್ರೇಷ್ಠ' ಸಮ್ಮೇಳನಾರ್ಥಿಗಳನ್ನು ರಂಜಿಸಲಿದೆ.

ಗಾಯಕ ಗಾಯಕಿಯರಾದ ದಿವ್ಯಾ ರಾಘವನ್, ಅಜಯ್ ವಾರಿಯರ್, ನಂದಿನಿ ರಾವ್, ಶಂಕರ್ ಶಾನ್ ಭಾಗ್, ಮಂಗಳ ರವಿ, ಜೋಗಳೆ ಸಿದ್ದರಾಜು, ಕನ್ನಿಕ, ನರಸಿಂಹಮೂರ್ತಿ ಶ್ರೋತೃಗಳನ್ನು ಗಂಧರ್ವಲೋಕಕ್ಕೆ ಕರೆದೊಯ್ಯಲಿದ್ದಾರೆ.

ಅವರಿಗೆ ಸಾಥಿಯಾಗಿ ಸಂಗೀತ ಸಂಜೆಗೆ ರಂಗೇರಿಸುವವರು ಪಕ್ಕ ವಾದ್ಯಗಾರರಾದ ಬಿ.ವಿ.ಶ್ರೀನಿವಾಸ್ - ಕೀಬೋರ್ಡ್, ಅರುಣ್ ಕುಮಾರ್ - ರಿಧಮ್ ಪ್ಯಾಡ್ಸ್, ಜಗದೀಶ್ ಕುರ್ತಕೋಟಿ - ತಬಲ, ಪ್ರಪಂಚಮ್ ಸೀತಾರಾಮ್ - ಕೊಳಲು, ನಿಂಗರಾಜು - ಸ್ಯಾಕ್ಸಾಪೋನ್ ಹಾಗು ಲಕ್ಷ್ಮೀಶ - ಮೃದಂಗ.

ಕನ್ನಡವೇ ಶ್ರೇಷ್ಠ ಸಂಗೀತ ಸಂಜೆಯ ಪರಿಕಲ್ಪನೆ : ಶ್ರೀನಿವಾಸ್ ಕಪ್ಪಣ್ಣ ಹಾಗು ಸುನೀತ ಅನಂತಸ್ವಾಮಿ ಅವರದು.

ಈ ಅಪೂರ್ವ ಕಾರ್ಯಕ್ರಮವನ್ನು ಮಿಸ್ ಮಾಡಿಕೊಳ್ಳಬೇಡಿ. ನೆನಪಿನಲ್ಲಿಡಿ, ಅಕ್ಕ ಸಮ್ಮೇಳನಕ್ಕೆ ರಿಯಾಯಿತಿ ದರದಲ್ಲಿ ನೊಂದಾಯಿಸಲು ಕೊನೆಯ ದಿನಾಂಕ ಆಗಸ್ಟ್ 29, ಭಾನುವಾರ. ನೊಂದಾಯಿಸಲು ಮರೆಯಬೇಡಿ, ಮರೆತು ನಿರಾಶರಾಗಬೇಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X