ಅಮೆರಿಬೆಂಗ್ಳೂರು ಕನ್ನಡ ಸಾಹಿತ್ಯ ಲೈವ್!

ಅಮೆರಿಕದ ಎಡಿಸನ್ ನಗರದಲ್ಲಿ ನಡೆಯುವ ಅಕ್ಕ ಸಮಾವೇಶದ ವೇದಿಕೆಯಿಂದ ಮತ್ತು ಬೆಂಗಳೂರಿನ ನಯನ ಸಭಾಂಗಣದಲ್ಲಿ ಉಪಸ್ಥಿತಿಯಲ್ಲಿರುವ ಕನ್ನಡದ ಹೆಸರಾಂತ ಸಾಹಿತಿಗಳು, ಸಾಹಿತ್ಯಾಸಕ್ತರ ನಡುವೆ ನೇರ ವಿಚಾರ ವಿನಿಮಯ ಮಾಡುವುದು ಈ ಕಾರ್ಯಕ್ರಮದ ಉದ್ದಿಶ್ಯ. ಕಾರ್ಯಕ್ರಮದ ನೇರ ಪ್ರಸಾರ ಸೆಪ್ಟೆಂಬರ್ 4 ಶನಿವಾರ ಬೆಳಗ್ಗೆ 9.30 (ಎಡಿಸನ್ ಸಮಯ), ಅದೇ ದಿನ ಸಂಜೆ 7.30 (ಬೆಂಗಳೂರು ಸಮಯ).
ಜೊತೆಗೆ ಸುಶ್ರಾವ್ಯ ಸಂಗೀತ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಕ್ಕ ಸಮಾವೇಶಕ್ಕೆ ತಮ್ಮ ಸಂದೇಶವನ್ನು ಈ ವೇದಿಕೆಯಿಂದ ಬಿತ್ತರಿಸಲಿದ್ದಾರೆ. ರಾಷ್ಟ್ರಕವಿ ಡಾ. ಜಿಎಸ್ ಶಿವರುದ್ರಪ್ಪ, ನಾಗತಿಹಳ್ಳಿ ಚಂದ್ರಶೇಖರ್, ಸುಧಾ ಮೂರ್ತಿ/ಚಿತ್ರ ನಟಿ ತಾರಾ ಮುಂತಾದವರು ಪಾಲ್ಗೊಳ್ಳಲಿರುವ ಈ ವಿನೂತನ ಕಾರ್ಯಕ್ರಮದಲ್ಲಿ ಹೊರತರಲಿರುವ ಕನ್ನಡ ಕಾದಂಬರಿಗಳ ಸರಳ ಸಚಿತ್ರ ರೂಪಾಂತರವೂ ಬಿಡುಗಡೆಯಾಗಲಿದೆ.
ನಂತರ ಎರಡೂ ಸಭೆಗಳಲ್ಲಿ ಪಾಲ್ಗೊಂಡಿರುವ ಸಾಹಿತ್ಯಾಸಕ್ತರ ನಡುವೆ ಮುಕ್ತ ಸಮಾಲೋಚನೆ ನಡೆಯಲಿದೆ. ವಿವರಗಳಿಗೆ ಕಾರ್ಯಕ್ರಮ ಪಟ್ಟಿ ನೋಡಿ. ಕನ್ನಡ ಸಾಹಿತ್ಯವನ್ನು ಜಾಗತಿಕ ಮಟ್ಟದಲ್ಲಿ ಪಸರಿಸುವಂತಹ ಉದಾತ್ತ ಧ್ಯೇಯವನ್ನು ಹೊಂದಿರುವ ಸಂಸ್ಥೆ ಇಂಡ್ಯಾ ಕಾಮಿಕ್ಸ್. ಕನ್ನಡದಲ್ಲಿ ಓದುವ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ, ಕನ್ನಡ ಸಾಹಿತ್ಯವನ್ನು ಹೊಸ ಜನಾಂಗಕ್ಕೆ ಮುಟ್ಟಿಸುವ ಆಶೋತ್ತರವನ್ನು ಹೊಂದಿದೆ.
* ನಾಡಗೀತೆ ರಮ್ಯ ವಸಿಷ್ಟ ಅವರಿಂದ
* ಆಶಯ ಗೀತೆ ಎಡಿಸನ್ ನಗರದಿಂದ
* 125 ಗಾಯಕರ ತಂಡದಿಂದ ಸಮೂಹ ಗಾನ ಪ್ರಸ್ತುತಿ
* ಸ್ವಾಗತ ಭಾಷಣ ಬಿ.ಎಸ್ ರಘುರಾಮ್, ಇಂಡ್ಯಾ ಕಾಮಿಕ್ಸ್ ವತಿಯಿಂದ
* ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಂದ ಅಕ್ಕ ಸಮ್ಮೇಳನಕ್ಕೆ ಸಂದೇಶ
* ಯಾವ ಮೋಹನ ಮುರಳಿ ಕರೆಯಿತು ಗೀತೆ ರತ್ನಮಾಲಾ ಪ್ರಕಾಶ್ ಅವರಿಂದ
* ರಾಷ್ಟ್ರಕವಿ ಜಿಎಸ್ಎಸ್ ಅವರಿಂದ ಸಂದೇಶ ನಯನ ಸಭಾಂಗಣದಿಂದ
* ಡಾ. ಎಚ್ಎಸ್ವಿ ಅನಿಸಿಕೆ (ಆಶಯ ಗೀತೆಯ ಕುರಿತು) ಅಕ್ಕ ಸಮಾವೇಶದಿಂದ
* ಜಿಎಸ್ಎಸ್ ಕವನ ವಾಚನ ಶಿವಮೊಗ್ಗ ಸುಬ್ಬಣ್ಣ ಅವರಿಂದ
* ತಾರಾ ಚಿತ್ರರಂಗ ಹಾಗೂ ಸಾಹಿತ್ಯ : ಒಂದು ವಿಶ್ಲೇಷಣೆ
* ನಾಗತಿಹಳ್ಳಿ ಚಂದ್ರು ಕನ್ನಡ ಸಾಹಿತ್ಯ ಪರಂಪರೆ ಬಗ್ಗೆ ವ್ಯಾಖ್ಯಾನ ನಯನದಿಂದ
* ಜನಪದ ಗೀತೆ ಅಕ್ಕ ಸಮಾವೇಶದಿಂದ
* ಸಂವಾದ
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications