ಅಕ್ಕ : ಕಾರ್ಯಕ್ರಮ ನಿರೂಪಕಿ ಅನುರಾಧ
ಅನುರಾಧ ದೀಪಕ್ ಬೇಗಾರಿ ಸುಮಾರು 5 ವರ್ಷಗಳಿಂದ ನ್ಯೂ ಜೆರ್ಸಿ ನಗರದಲ್ಲಿ ವಾಸವಾಗಿದ್ದಾರೆ. ಈ ಹಿಂದೆ ಬೆಂಗಳೂರು ನಗರದಲ್ಲಿದ್ದು, ಕನ್ನಡ ಚಾನೆಲ್ ಗಳಾದ ಉದಯ ಟೀವಿ, ಈ ಟೀವಿ ಕನ್ನಡ ಮತ್ತು ಬೆಂಗಳೂರು ದೂರದರ್ಶನದಲ್ಲಿ ಮುನ್ನೂರಕ್ಕೂ ಹೆಚ್ಚು ಕಾರ್ಯಕ್ರಮಗಳ ನಿರ್ದೇಶಕಿಯಾಗಿ, ನೂರಾರು ಕಾರ್ಯಕ್ರಮಗಳ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಹಲವಾರು ಸಾಕ್ಷಚಿತ್ರ ಮತ್ತು ಜಾಹೀರಾತುಗಳನ್ನು ನಿರ್ದೇಶಿಸಿರುವ ಇವರು ನಾಲ್ಕೈದು ಕನ್ನಡ ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಕೂಡ. ದಿ. ಜಿವಿ ಅತ್ರಿ ಅವರ ಶಿಷ್ಯೆಯಾಗಿದ್ದ ಅನುರಾಧ, ಅತ್ರಿ ಅವರು ಕರ್ನಾಟಕದಾದ್ಯಂತ ಕೈಗೊಂಡಿದ್ದ ಸುಗಮ ಸಂಗೀತ ಯಾತ್ರೆಗಳಲ್ಲಿ ಭಾಗವಹಿಸಿದ ಅನುಭವ ಪಡೆದಿದ್ದಾರೆ. ಹೆಸರಾಂತ ಸಂಗೀತ ನಿರ್ದೇಶಕರ ನಿರ್ದೇಶನದಲ್ಲಿ ಹಾಡಿದ್ದಾರೆ ಸಹ.
ಒಂದೇ ಸೂರಿನಡಿ ಸಕಲಕಲೆ, ಕನ್ನಡ ಭಾಷೆ, ವೇದ, ಸಂಗೀತ, ನೃತ್ಯ, ನಾಟಕ, ಕರಕುಶಲ ಕಲೆ, ಯೋಗಾಭ್ಯಾಸ ಇವುಗಳನ್ನು ನುರಿತ ಶಿಕ್ಷಕರಿಂದ ಆಸಕ್ತರಿಗೆ ಕಲಿಸುವಂತಹ ಪುಟ್ಟದೊಂದು ಶಾಲೆಯನ್ನು ನ್ಯೂ ಜೆರ್ಸಿಯ ಎಡಿಸನ್ ನಲ್ಲಿ ತೆರೆಯುವ ಮಹದಾಸೆಯನ್ನು ಹೊಂದಿರುವ ಅನುರಾಧ ದೀಪಕ್ ಆ ನಿಟ್ಟಿನಲ್ಲಿ ಧೃಡವಾದ ಹೆಜ್ಜೆಗಳನ್ನಿಡುತ್ತಿದ್ದಾರೆ.
ಅಕ್ಕ
:
ಕಾರ್ಯಕ್ರಮ
ನಿರೂಪಕಿ
ಶ್ರುತಿ
ಜಿ
ರಾವ್
»