ಅಕ್ಕ ಸಮ್ಮೇಳನದಲ್ಲಿ ಸಾಹಿತ್ಯಗೋಷ್ಠಿ; ಆಹ್ವಾನ

ಮುಖ್ಯವೇದಿಕೆಯಲ್ಲಿ ಇವರುಗಳ ಭಾಷಣವನ್ನು ಕೇಳುವ ಸದವಕಾಶ ನಮ್ಮೆಲ್ಲರಿಗೂ ದೊರಕಲಿದೆ. ಅದೇ ರೀತಿ, ಸಮಾನಾಂತರ ವೇದಿಕೆಗಳಲ್ಲಿ ಸಾಹಿತ್ಯ ಸಲ್ಲಾಪ, ಕವಿಗೋಷ್ಠಿ, ವಿಚಾರಸಂಕಿರಣ ಮತ್ತು ಸಾಹಿತಿಗಳೊಂದಿಗೆ ಸಭಾಸದರ ಸಂವಾದ ಕಾರ್ಯಕ್ರಮಗಳನ್ನೂ ಏರ್ಪಡಿಸಲಾಗಿದೆ. ಅಮೆರಿಕದಲ್ಲಿ ನೆಲಸಿರುವ ಹಾಗು ಕರ್ನಾಟಕದಿಂದ ಬರುವ ಕನ್ನಡ ಬರಹಗಾರರು ಈ ಗೋಷ್ಠಿಗಳಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿಚ್ಛಿಸುವವರು ಕೆಳಗೆ ನಮೂದಿಸಿರುವ ವಿಳಾಸಕ್ಕೆ ವಿ-ಅಂಚೆ ಕಳುಹಿಸುವುದರ ಮೂಲಕ ತಮ್ಮ ಇಂಗಿತವನ್ನು ವ್ಯಕ್ತಪಡಿಸಬೇಕೆಂದು ಸಾಹಿತ್ಯ ಸಮಿತಿ ಈ ಮೂಲಕ ಕೋರುತ್ತದೆ. ದಯವಿಟ್ಟು ಗಮನಿಸಿ: ಈಗಾಗಲೇ ತಮ್ಮ ಆಶಯವನ್ನು ವ್ಯಕ್ತಪಡಿಸಿದವರೂ ಸಹ ಮತ್ತೊಮ್ಮೆ ನಮ್ಮನ್ನು ಸಂಪರ್ಕಿಸಬೇಕಾಗಿ ವಿನಂತಿ. (ನಿಮ್ಮ ಹೆಸರು, ದೂರವಾಣಿ ಸಂಖ್ಯೆ, ಯಾವ ಗೋಷ್ಠಿಯಲ್ಲಿ ಭಾಗವಹಿಸಲು ಇಷ್ಟ, ಏನನ್ನು ಓದುವಿರಿ/ಮಂಡಿಸುವಿರಿ, ಇತ್ಯಾದಿ ವಿವರಗಳನ್ನು ಕೊಡಲು ಮರೆಯದಿರಿ.)
ಗೋಷ್ಠಿಗಳಲ್ಲಿ, ಸ್ವಂತ ಕವನಗಳನ್ನು, ಚುಟುಕಗಳನ್ನು, ಲಘು ಪ್ರಬಂಧಗಳನ್ನು, ಅಥವಾ ವೈಚಾರಿಕ ಪ್ರಬಂಧಗಳನ್ನು ಮಂಡಿಸಲು ಅವಕಾಶವಿರುತ್ತದೆ. ಉದಾಹರಣೆಯ ರೂಪದಲ್ಲಿ: 'ನನ್ನ ಮೆಚ್ಚಿನ ಬರಹಗಾರ;" 'ನಾನು ಇತ್ತೀಚೆಗೆ ಓದಿದ ಸ್ವಾರಸ್ಯಕರ ಪುಸ್ತಕ;" 'ನನ್ನನ್ನು ರೋಮಾಂಚನಗೊಳಿಸುವ ಕವಿತೆ;" 'ನಾನು ಮೆಚ್ಚಿದ ಚಲನಚಿತ್ರ;" 'ನಾನು ನೋಡಿದ ಉತ್ತಮ ನಾಟಕ;" 'ಅಮೆರಿಕದಲ್ಲಿ ಕನ್ನಡ;" 'ಮಕ್ಕಳಿಗೆ ಕನ್ನಡ ಕಲಿಸುವ ಬಗೆ;" 'ದೊಡ್ಡವರಿಗೆ ಕನ್ನಡ ಕಲಿಸುವ ಬಗೆ;" 'ಅಮೆರಿಕದ ಕನ್ನಡ ಸಂಘಗಳಲ್ಲಿ ಕನ್ನಡ ಚಟುವಟಿಕೆಗಳು;" 'ಕನ್ನಡದಲ್ಲಿ ಹಾಸ್ಯ;" 'ಅಮೆರಿಕದಲ್ಲಿ/ಭಾರತದಲ್ಲಿ ನಿವೃತ್ತಿಜೀವನದ ಸವಾಲುಗಳು"(ಸಾಂಸಾರಿಕ ಜೀವನದ ರಸಮಯ ಸನ್ನಿವೇಶಗಳ ಚಿತ್ರಣವೇ ಹೊರತು ಸಮಾಜಶಾಸ್ತ್ರದ ದೃಷ್ಟಿಯಿಂದ ಗಂಭೀರ ಚರ್ಚೆ ಅಲ್ಲ!)
ಹೀಗೆ ಒಂದೇ, ಎರಡೇ? ನಿಮ್ಮ ಸೃಜನಶೀಲ ಮನಸ್ಸಿನಲ್ಲಿ ಹುಟ್ಟಬಹುದಾದ ಯಾವುದೇ ವಿಚಾರವನ್ನು ಭಟ್ಟಿ ಇಳಿಸಿ ಐದಾರು ನಿಮಿಷಗಳಲ್ಲಿ ಸಹೃದಯ ಸಭಾಸದರೊಂದಿಗೆ ಹಂಚಿಕೊಳ್ಳಲು ನಿಮಗೆ ಆಸೆಯಿದ್ದರೆ, ಇದೋ, ನಾವು ಒದಗಿಸುತ್ತೇವೆ ನಿಮಗೆ ಒಂದು ಸುವರ್ಣಾವಕಾಶ! ಉಪಯೋಗಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ! ಬರಹ ಯಾವುದೇ ಆದರೂ ಅದು ಸಾಹಿತ್ಯಾತ್ಮಕವಾಗಿರಬೇಕೆಂಬುದು ನಮ್ಮ ಆಶಯ.
ಒಟ್ಟು ಎಷ್ಟು ಗೋಷ್ಠಿಗಳು? ತಲಾ ಎಷ್ಟೆಷ್ಟು ನಿಮಿಷಗಳು? 'ಏನೇನು ನಿರ್ಬಂಧಗಳು?"--ಇವೇ ಮುಂತಾದ ನಿಮ್ಮ ಸಹಜ ಕುತೂಹಲದ ಪ್ರಶ್ನೆಗಳಿಗೆ ಈಗಲೇ ನಿರ್ದಿಷ್ಟವಾದ ಜವಾಬುಕೊಡುವುದು ಕಷ್ಟ, ಏಕೆಂದರೆ, ಎಷ್ಟು ಮಂದಿ ಉತ್ಸಾಹ ತೋರುತ್ತಾರೋ ನೋಡಿಕೊಂಡು ನಮ್ಮ ಯೋಜನೆಯನ್ನು ಚೂಪುಗೊಳಿಸಿ, ನಂತರ ನಿಮ್ಮ ಕಾಲದ ಇತಿ-ಮಿತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ. ಸಾಧ್ಯವಾದಷ್ಟೂ ಹೆಚ್ಚು ಮಂದಿಗೆ ಅವಕಾಶ ನೀಡಲು ಪ್ರಯತ್ನಿಸುತ್ತೇವೆ.
ಎಲ್ಲಕ್ಕಿಂತ ಮೊದಲು, ಕೆಳಕಂಡವರನ್ನು ಕೂಡಲೆ ನೀವು ಸಂಪರ್ಕಿಸಿ ಭಾಗವಹಿಸುವ ನಿಮ್ಮ ಇಚ್ಛೆಯನ್ನು ವ್ಯಕ್ತಪಡಿಸಿ. ಹ್ಞಾ, ಮುಖ್ಯವಾದ ಒಂದು ನಿರ್ಬಂಧವಿದೆ, ಅದೇನೆಂದರೆ --ಸಮ್ಮೇಳನದಲ್ಲಿ ನೋಂದಾಯಿಸಿಕೊಂಡವರಿಗೆ ಮಾತ್ರ ಸಾಹಿತ್ಯಗೋಷ್ಠಿಗಳಲ್ಲಿ ಅವಕಾಶ! ಇನ್ನೂ ನೋಂದಾಯಿಸಿಕೊಂಡಿಲ್ಲವೇ? ಕೂಡಲೇ ನೋಂದಾಯಿಸಿಕೊಳ್ಳಿ. ಸದವಕಾಶವನ್ನು ಕಳೆದುಕೊಂಡು ಮರುಗಬೇಡಿ! ತ್ವರೆ ಮಾಡಿ.
ಸಾಹಿತ್ಯ ಸಮಿತಿಯ ಪರವಾಗಿ,
ಮೈ.ಶ್ರೀ. ನಟರಾಜ
ವಿ-ಅಂಚೆಯ ವಿಳಾಸ: [email protected]
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications