ಸಾಹಸ ಕುಂಭಾಸಿ ಶ್ರೀನಿವಾಸ ಭಟ್, ಟ್ರಾಯ್, ಮಿಶಿಗನ್.srinivasa.k.bhat& commat gm.com(ಇಪ್ಪತ್ತೈದು ವರುಷಗಳ ಅಮೆರಿಕದ ಜೀವನದ ಸಿಹಿ ಕಹಿಗಳನ್ನು ನೆನಪಿಸಿಕೊಂಡು ಬರೆದ ನನ್ನ ಅನಿಸಿಕೆ)ಬಲುದೂರ ಬಂದಿಹೆವು, ಬಹುಕಾಲ ಕಳೆದಿಹೆವು,ಬಯಕೆಗಳ ಸಾಧನೆಯ ಹೊಂಗನಸ ಕಂಡಿಹೆವುಬರಿಗೈಲಿ ಬಂದಿಹೆವು, ಮನೆಮಠಗಳನು ತೊರೆದುತರಲಿಲ್ಲ ಏನನ್ನು ವಿದ್ಯೆ, ಬುದ್ಧಿಯ ಹೊರತುಅರಿವಿಲ್ಲದೀ ಹೊಸತು ಅತಿಭಿನ್ನ ಪರಿಸರದಿಬೆರೆತು ಜತೆ ಒಂದಾಗಿ, ಕರಗಿ ಸೇರುವ ಮನದಿಹಲವು ವಿದ್ಯೆಯ ಕಲಿತು, ವಿವಿಧ ವೃತ್ತಿಯನರಿತುಹೊಸನಾಡ ಪರಿಸರಕೆ ಅಳವಡಿಸಿ ಕೊಂಡಿಹೆವುನಾವೇನು ಓದಿಲ್ಲ ವೇದ ಶಾಸ್ತ್ರದ ಕಂತೆತಿಳಿದಿಲ್ಲ ನಮಗೇನು ತತ್ತ್ವ ಮಿಥ್ಯದ ಚಿಂತೆನಾವು ಅರಿತಿಹುದಿಷ್ಟೆ, ನಮ್ಮ ಜೀವನಕಷ್ಟೆದುಡಿತ, ಸಂತಸ, ದುಖ, ನೆಮ್ಮದಿಯು ಇಷ್ಟೆಬದುಕು ನಶ್ವರವೆಂಬ ಹೇಡಿತನ ನಮಗಿಲ್ಲಮುಕ್ತಿ ಬೇಕಿಂತೆಂಬ ಅತಿ ಆಸೆ ನಮಗಿಲ್ಲಹುಟ್ಟಿದೆವು, ಬೆಳೆದಿಹೆವು, ಒಟ್ಟಾಗಿ ಬದುಕಿದೆವುಕಷ್ಟಸುಖ, ನೋವುನಲಿವುಗಳ ಸಿಹಿಬೇವುನಮ್ಮ ಸಂಸ್ಕೃತಿ, ಸಂಪ್ರದಾಯಗಳು ಮರೆಯಾಗಿನಮ್ಮ ಭಾಷೆಯು, ಧರ್ಮ ನಂಬಿಕೆಯು ಬದಲಾಗಿಎಳೆ ಪೀಳಿಗೆಯ, ನವ್ಯ ಚಿಂತನೆಯ ಫಲವಾಗಿಹಳೆ ಹೊಸತ ಬೆರೆಸಿ ವಿಶ್ವ ಪ್ರಜೆಗಳೇ ನಾವಾಗಿಬರುವ ಮೊದಲಿನ ನಿರೀಕ್ಷೆಗಳೇನೊ ಬೇರೆಬಂದಮೇಲಾಗಿರುವ ಅನುಭವವೆ ಬೇರೆಇದಕೆ ಬೇಸರವಿಲ್ಲ, ನಿರಾಸೆ ಮೊದಲೇ ಇಲ್ಲಬದುಕೆ ಸಾಹಸ ಎಂಬ ತತ್ವ ನಮದೆಲ್ಲPost your viewsಮುಖಪುಟ / ಎನ್ಆರ್ಐ