ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಪ್ರಳಯ’

By Staff
|
Google Oneindia Kannada News

‘ಪ್ರಳಯ’
  • ಈರಣ್ಣ ಮೂಲೀಮನಿ (ಕಸ್ತೂರಿಪ್ರಿಯ), ದುಬೈ
    [email protected]
ಎಂಥ ಸುಂದರ ಘಳಿಗೆ
ನವ ಜೀವ ಸೃಷ್ಟಿಗೆ
ಸೃಷ್ಟಿಕರ್ತನೆಂದೋ ಬೆಸೆದ
ರವಿ-ಭುವಿಯ ಬೆಸುಗೆ
ಕಣ್ತೆರೆದು ನೋಡು ಗೆಳೆಯ
ತಾಪ ಹೆಚ್ಚಿದ ಇಳೆಯ
ಬಿರುಕು ಬಿಡುತಿದೆ ಇಂದು
‘ಓರೆkೂೕನ್‌’ನ ವಲಯ
ಏಳು ಎದ್ದೇಳು ಓ ಮನುವೇ
ಅಜ್ಞಾನದ ಅರಿವಿಂದ, ವಿಜ್ಞಾನದ ಮದದಿಂದ

ಹೊತ್ತು ಹೊತ್ತಿಗೂ ಚಿತ್ತ
ಭೀಕರ ಪ್ರಳಯದ ಕುತ್ತ
ಕಂಡೂ ಕಾಣದ, ಕೇಳಿ ಕೇಳದ
ಭವಿಷ್ಯದಾಳದ ಸುತ್ತ
ಅಧ್ಯಾತ್ಮದ ಅಡಿಯಾಳಗೆ
ವಿಜ್ಞಾನದ ಹಿಡಿಯಾಳಗೆ
ಪಾಪದ ‘ನುಡಿ’ಗೋ,ಪುಣ್ಯದ‘ಮಡಿ’ಗೋ
ಸಿಲುಕಿ ನಲುಗುವ ಮುನ್ನ
ಏಳು ಎದ್ದೇಳು, ಓ ಮನುವೇ
ಅಜ್ಞಾನದ ಅರಿವಿಂದ, ವಿಜ್ಞಾನದ ಮದದಿಂದ

ಹಸಿರೇ ಸೃಷ್ಟಿಯ ಉಸಿರು
ಕ್ರಾಂತಿ ಕಹಳೆಯನೂದು
ದೈವ ಶಕ್ತಿಯ ನೆನೆದು
ಸೃಷ್ಟಿಕರ್ತನ ಬಲದಿ


ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X