ಹಬ್ಬಕೆ ಹಬ್ಬವು ಹುಟ್ಟಿದ ಹಬ್ಬ

ನಮ್ಮ ಕುಟುಂಬದ ಹುಟ್ಟುಹಬ್ಬದಾಚರಣೆಯ ವಿಶೇಷತೆಯೇನೆಂದರೆ, ವರುಷದ ಮೊದಲ ದಿನವಾದ ಜನವರಿ ಒಂದರಂದು ಶುರುವಾಗಿ, ಎಲ್ಲಾ ಮಾಸಗಳಲ್ಲೂ ಸಂಭ್ರಮವು ಹಾಸುಹೊಕ್ಕಾಗಿ, ವರುಷದ ಬೀಳ್ಗೊಡುಗೆಯ ದಿನವಾದ ಡಿಸೆಂಬರ ಮೂವತ್ತೊಂದರಂದೂ ಕಡೆಯ ಕಂತಿನ ಆಚರಣೆಯಾಂದಿಗೆ ಮುಕ್ತಾಯಗೊಳ್ಳುವುದು. ಈ ಕವನದಲ್ಲಿ ಕುಟುಂಬದ ಎಲ್ಲಾ ಸದಸ್ಯರ ಪರಿಚಯವಿದೆ.)
ಹಬ್ಬಕೆ ಹಬ್ಬವು ಹುಟ್ಟಿದ ಹಬ್ಬ
ನೋಡಿರಿ ನಮ್ಮ ಕುಟುಂಬದ ಹಬ್ಬ
ವರುಷದುದ್ದಕೂ ಸಾಲಿನ ಹಬ್ಬ
ಎಲ್ಲೂ ಸಿಗದ ಚಂದದ ಹಬ್ಬ
ಜನವರಿ ಬರುತಲೆ ರಾಜ, ಸೂರಜರು
ವಿನಯ, ಮಂಜುಳರು ಜೊತೆಯಲಿ ನಿಲುವರು
ಶ್ಯಾಮಲ ಇದಕೆ ಮುಂದಾಳು ಮುಖಂಡರು
ಫೆಬ್ರವರಿ ಮಾಸಕೆ ಸೊಬಗನು ತಂದರು
ಸವಿತಾ, ಸಿಂಧು, ವೀಣಾ, ವಿಜಯರು
ವೆಂಕಟಾಚಲಯ್ಯರಿವರೊಡಗೂಡಿಹರು
ಮಾರ್ಚನು ಸುಮನಳು ಕಂಗೊಳಿಸಿಹಳು
ಪೂರ್ಣಿಮ ತಿಂಗಳ ಬೆಳಗಿಹಳು
ಸುಶೀಲ, ದಿನೇಶರು ನಲಿ ನಲಿದಿಹರು
ಏಪ್ರಿಲ್ ಫೂಲನೆ ಮಾಡಿಹರಿವರು
ರೋಹನ, ರಶ್ಮಿ, ಪ್ರೀತಮರು
ನಗುತಲೆ ಮೋಡಿಯ ಮಾಡಿಹರು
ಸ್ವಾತಿ ಮುತ್ತೊಂದು ಹುಟ್ಟಿತು ಮೇ ಯಲ್ಲಿ
ನಿಖಿಲ, ವಿಶಾಖರೊಡೆ ಸಂಭ್ರಮದಲ್ಲಿ
ನಾಗರಾಜ, ಮಂಜು, ಹೇಮ ಅದೇ ಮಾಸದಲ್ಲಿ
ಜುಂ ಎಂದು ಬಂದರು ಜೂನ್ ತಿಂಗಳಲ್ಲಿ
ಆದಿತ್ಯ, ಸುಮ, ಪ್ರಿಯಾಂಕ, ನಿಹಾರಿಕಾ
ಸೀಮ, ಜಲಜರಂತೂ ಒಂದೇ ದಿನಾಂಕ
ಜುಲೈ ತಿಂಗಳ ನಾಯಕರಿವರು
ಪವನ, ಭರತ, ರವಿಶಂಕರರು
ರಾಜಲಕ್ಷ್ಮಿ, ಮಮತ ನಾಯಕಿಯರು
ಆಗಸ್ಟ್ ತಿಂಗಳಿಗೆ ಒಬ್ಬಳೆ ರಾಣಿ
ಆಗಿಹಳೆಲ್ಲರ ಮುದ್ದಿನ ಕಣ್ಮಣಿ
ಒಪ್ಪಿಹರೆಲ್ಲರು ಮಾನಸ ಜಾಣಿ
ಶಂಕರಭಾರತಿ, ಮಹೇಶ, ರಮೇಶ
ಸೆಪ್ಟಂಬರದಲಿ ಇವರ ಪ್ರವೇಶ
ಸುನಿತ, ಶ್ರೀಧರರು ಎಂಥಾ ವಿಶೇಷ
ಅಕ್ಟೋಬರ ದಸರಕೆ ಕಳೆಯನು ತಂದರು
ವೆಂಕಟೇಶ, ಮನೀಶ, ಸುದರ್ಶನರು
ಮಧು, ಸ್ವಾಮಿ ಸಂಭ್ರಮದೆ ನಿಂದಿಹರು
ವೇಣು, ಶ್ರೀಕಾಂತ, ರಾಹುಲರ ಜನನ
ನವಂಬರ ಎಂಬಾ ಮಾಸದಲಿ
ಮನೆಬೆಳಕಾಯ್ತು ಮಂದಹಾಸದಲಿ
ಡಿಸೆಂಬರ ಚಳಿಯಾ ಮರೆಸಲು ಬಂದರು
ಮಂಜುನಾಥ, ಕೃಷ್ಣ, ಚಂದನರು
ಬೆಚ್ಚನೆ ಮುದವಾ ತಂದಿಹರು
ಕಂಡಿರ ನಮ್ಮ ಕುಟುಂಬದ ಹಬ್ಬ
ಸೊಬಗಿನ, ಸೊಗಸಿನ ಸಾಲಿನ ಹಬ್ಬ
ಎಲ್ಲೂ ಸಿಗದ ಚಂದದ ಹಬ್ಬ
ಅನನ್ಯ ಅತಿಶಯ ನಮ್ಮಯ ಹಬ್ಬ
(ಶಾರದ, ದೊರೆಸ್ವಾಮಿ, ಲೀಲ, ಕೃಷ್ಣಸ್ವಾಮಿ
ಶ್ರೀನಿವಾಸ, ಶರತ್, ರಘುನಂದನರು
ಅಂದಿದ್ದವರು, ಇಂದಿಲ್ಲವಾದರೂ
ನಮ್ಮ ಹೃದಯದಲಿ ನೆಲೆಸಿಹರು)
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications