ವಿದ್ಯಾರಣ್ಯ ಕನ್ನಡ ಕೂಟದಲ್ಲಿ 'ಸುಗ್ಗಿಯ ಸಂಭ್ರಮ'
ಅಮೆರಿಕದ ಚಿಕಾಗೋ ವಲಯದ ಕನ್ನಡ ಸಂಘ, "ವಿದ್ಯಾರಣ್ಯ ಕನ್ನಡ ಕೂಟ"ದವರು ಇದೇ ಫೆಬ್ರವರಿ 10 ಭಾನುವಾರದಂದು ಸಂಕ್ರಾಂತಿ ಹಬ್ಬವನ್ನು "ಸುಗ್ಗಿಯ ಸಂಭ್ರಮ"ವನ್ನಾಗಿ ಆಚರಿಸಿದರು. ಲೆಮೊಂಟಿನ ರಾಮ ದೇವಾಲಯದಲ್ಲಿ ಅದ್ದೂರಿಯಾಗಿ ಈ ಕಾರ್ಯಕ್ರಮ ನಡೆಯಿತು. ಕೊರೆಯುವ ಚಳಿ, ಬಹಳಷ್ಟು ಹಿಮಪಾತವಾಗಿದ್ದರೂ ಅಧಿಕ ಸಂಖ್ಯೆಯಲ್ಲಿ ಕೂಟದ ಕನ್ನಡಿಗರು ನೆರೆದಿದ್ದರು.
ಪೂಜೆ, ಪ್ರಸಾದ ವಿನಿಯೋಗದ ನಂತರ ಗಣ್ಯ ಅತಿಥಿಗಳು, ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಗಾಟಿಸಿದರು. ದೇವತಾ ಪ್ರಾರ್ಥನೆಯ ನಂತರ, ಅಮೆರಿಕ ಹಾಗೂ ಭಾರತದ ರಾಷ್ಟೀಯ ಗೀತೆಗಳನ್ನು ಸಿರಿಗನ್ನಡ ಶಾಲೆಯ ಮಕ್ಕಳು ಹಾಡಿದರು. ನಾಡಗೀತೆ ಗಾಯನದ ನಂತರ ವಿದ್ಯಾರಣ್ಯ ಕನ್ನಡ ಕೂಟದ ಈ ವರ್ಷದ ಅಧ್ಯಕ್ಷರಾದ ಶ್ರೀಶ ಜಯಸೀತಾರಾಮ್ ಅವರು ಸ್ವಾಗತ ಭಾಷಣ ಮಾಡಿದರು.

ದಿನದ ವಿಶೇಷ ಮನರಂಜನಾ ಕಾರ್ಯಕ್ರಮ "ನಿರೀಕ್ಷಾ", ಸೈಂಟ್ ಲೂಯಿಸ್ ನಿಂದ ಅತಿಥಿ ಕಲಾವಿದರಾಗಿ ಬಂದಿದ್ದ 'ಸೂರ್ಯ ಕಲಾ ವೃಂದ' ದವರಿಂದ. 'ನಾಟ್ಯ ವಿದ್ವಾನ್' ಪ್ರಸನ್ನ ಕಸ್ತೂರಿ ಮತ್ತು 'ಅಕ್ಕ ಐಡಲ್' ಸೀಮಾ ಕಸ್ತೂರಿ ಅವರ ನೇತೃತ್ವದ ತಂಡ, ನೂತನ ಭಾವಗೀತೆಗಳ ಗಾಯನ ಮತ್ತು ನರ್ತನವನ್ನು ಭರತನಾಟ್ಯ ಹಾಗೂ ಕಥಕ್ ನೃತ್ಯ ಶೈಲಿಗಳಲ್ಲಿ ವಿನೂತನ ರೀತಿಯಲ್ಲಿ ಪ್ರಸ್ತುತಪಡಿಸಿ ಸದಸ್ಯರನ್ನು ರಂಜಿಸಿದರು.
ಇದಲ್ಲದೆ ಕೂಟದ ಸದಸ್ಯರ ಹಿರಿಯರ ನಗೆನುಡಿ, ಕಿರಿಯರ ಸವಿನುಡಿ, ಕಿರಿಯರ ಛದ್ಮವೇಷ ಕಾರ್ಯಕ್ರಮಗಳು ಚೆನ್ನಾಗಿ ಮೂಡಿ ಬಂದವು. 'ಬಂತು ಬಂತು ಸುಗ್ಗಿ' ವೃಂದಗಾನ, 'ಸುಗ್ಗಿ ಕಾಲ ಹಿಗ್ಗಿ ಬಂದಿತು' ಸಮೂಹ ನೃತ್ಯ, ಲೈವ್ ಆರ್ಕೇಸ್ಟ್ರಾದೊಂದಿಗೆ ಹಾಡು, 'ಮಲ್ಲಾರಿ' ನಾಟ್ಯ ಸಭಿಕರ ಮನ ಗೆದ್ದವು.

ಇತ್ತೀಚೆಗಷ್ಟೇ ನಿಧನರಾದ ಖ್ಯಾತ ಕವಿ ಜಿ.ಎಸ್.ಶಿವರುದ್ರಪ್ಪನವರ ನೆನಪಿನಲ್ಲಿ 'ಕಾವ್ಯ ನಮನ' ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಂಕ್ರಾಂತಿ ಅಂಗವಾಗಿ ಮಕ್ಕಳಿಗೆ ಗಾಳಿಪಟದ ಅಲಂಕಾರ ಸ್ಪರ್ಧೆಯನ್ನೂ ಕೂಡ ಏರ್ಪಡಿಸಲಾಗಿತ್ತು. ಎಳ್ಳು-ಬೆಲ್ಲ, ಕೊಸುಂಬರಿ, ಸಿಹಿ ಪೊಂಗಲ್, ಖಾರ ಪೊಂಗಲ್, ಕೂಡಿದ ಸಂಕ್ರಾಂತಿ ಹಬ್ಬದ ವಿಶೇಷ ಊಟದೊಂದಿಗೆ ಕಾರ್ಯಕ್ರಮದ ಮುಕ್ತಾಯವಾಯಿತು.
-
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು












Click it and Unblock the Notifications