ಸಾಮೂಹಿಕ ಜನಗಣಮನ ಗಾಯನದ ಸಮ್ಮೋಹನ
ಆಮೇಲಿನ ಒಂದು ಕ್ಷಣವಿದೆ ನೋಡಿ. ಅದು ಬಣ್ಣನೆಗೆ ನಿಲುಕದ್ದಾದರೂ ಒಂದು ಪ್ರಯತ್ನ ಮಾಡುತ್ತೇನೆ. ಅಮೆರಿಕದ ರಾಷ್ಟ್ರಗೀತೆಯಾದ ಮೇಲೆ ಭಾರತದ ರಾಷ್ಟ್ರಗೀತೆ. ಜನಗಣಮನ. ನಾನು ಚಿಕ್ಕ ಹುಡುಗಿಯಿದ್ದಾಗಿನಿಂದಲೂ ರಾಷ್ಟ್ರಗೀತೆ ಹೇಳುವಾಗೆಲ್ಲ ರೋಮಾಂಚನಗೊಂಡಿದ್ದೇನೆ. ಆದರೆ ಇವತ್ತು, ಅಲ್ಲಿ ನಾವು ಇಪ್ಪತ್ತು ಸಾವಿರದಷ್ಟು ಸಂಖ್ಯೆಯ ಭಾರತೀಯರು ಒಂದೇ ಸೂರಿನಡಿ ಸೇರಿ, ನಮ್ಮ ನೆಚ್ಚಿನ ಪ್ರಧಾನಿಯವರ ಸಮಕ್ಷಮದಲ್ಲಿ, ಕವಿತಾ ಕೃಷ್ಣಮೂರ್ತಿಯವರೊಡನೆ ದನಿಗೂಡಿಸಿ, ಎಲ್ಲರೂ ಎದ್ದುನಿಂತು ಜನಗಣಮನ ಹಾಡಿದೆವಲ್ಲ... ಆ ದಿವ್ಯ ಅನುಭೂತಿಯನ್ನು ಅನುಭವಿಸಬೇಕಷ್ಟೇ ಹೊರತು ಮಾತಿನಲ್ಲಿ, ಅಕ್ಷರಗಳಲ್ಲಿ, goose bumps/ ರೋಮಾಂಚನ ಮುಂತಾದ ಪದಗಳಲ್ಲೂ ಹೇಳುವುದು ಸಾಧ್ಯವಿಲ್ಲ ಬಿಡಿ. ಇದು ನನ್ನೊಬ್ಬಳ ಕತೆಯಲ್ಲ. ಎಷ್ಟು ಜನರು ಅಲ್ಲಿ ಭಾವುಕರಾಗಿ ಗದ್ಗದಿತ ಕಂಠದಿಂದ ಮಾತನಾಡಲಾರದೆ ಹೋದರೋ, ಬಳಬಳನೆ ಕಣ್ಣೀರು ಸುರಿಸಿದರೋ ನಾನರಿಯೆ.
ಆಮೇಲೆ ಮೋದಿಯವರ ಭಾಷಣ. ಅದನ್ನಂತೂ ಏನೆಂದು ಹೇಳಲಿ! ಹಿತಾನುಭವ ಒದಗಿಸಿ ಕೇಳುಗನ ಮನಮುಟ್ಟುವ ಕಲೆ ಅವರಿಗೇನು ಹೊಸತೇ? ಅವರಾಡಿದ ಒಂದೊಂದು ಮಾತು ಸಹ ನಮ್ಮ ಕಿವಿಗಳೊಳಗೆ ಹೊಕ್ಕುವ ಮೊದಲೇ ನಮ್ಮ ಹೃದಯಗಳನ್ನು ತಟ್ಟಿ ಆಗಿರುತ್ತಿತ್ತು! ಹಾಗಂತ ಅವರು ಬರೀ ಮಾತಿನ ಗಾಳಿಗೋಪುರ ಕಟ್ಟಲಿಲ್ಲ. ಕರಗುವ ಮೇಣದ ಗೊಂಬೆಗಳನ್ನಾಗಿಸಲು ನಮ್ಮೊಡನೆ ಭಾವಲಹರಿ ಬಿಚ್ಚಲಿಲ್ಲ. ಹಾವಿನೆದುರು ಪುಂಗಿ ಊದುವಂತೆ ಊದಲಿಲ್ಲ. ಮೋದಿಯವರ ಒಂದೊಂದು ಆಲೋಚನೆಯೂ ಎಷ್ಟು ಪ್ರಾಕ್ಟಿಕಲ್ ಆಗಿರುತ್ತದೆ ಎಂದು ಯೋಚಿಸಿದರೇನೇ ಮೈಝುಮ್ಮೆನ್ನುತ್ತದೆ.

ಹೌದು, ನಮ್ಮಲ್ಲಿ ಎಷ್ಟೋ ಜನ ಭಾರತದೇಶ ಬಿಟ್ಟು ಇಲ್ಲಿಗೆ ಬಂದದ್ದು ಅಲ್ಲಿ ಬಡತನವಿದೆ ಅಂತ ಅಲ್ಲ. ಗಲೀಜಿದೆ ಅಂತ ಅಲ್ಲ. ಸರಳ ಸೌಹಾರ್ದ ಜೀವನ ನಡೆಸುವುದಕ್ಕೆ, ಪ್ರತಿಭೆಗೆ ತಕ್ಕ ಅವಕಾಶ ಸಿಗುವುದಕ್ಕೆ ನೂರೆಂಟು ಕಾನೂನು-ಕಂಟಕಗಳಿರುವನ್ನು ನೋಡಿ ರೋಸಿಹೋಗಿ ಬಂದವರೇ ಹೆಚ್ಚು. ಅಂಥ ಕಂಟಕದ ಕಾನೂನುಗಳನ್ನೆಲ್ಲ ನಿರ್ಮೂಲ ಮಾಡುವೆನೆನ್ನುತ್ತಾರೆ ಮೋದಿ. ಗಂಗಾನದಿಯನ್ನು ಸ್ವಚ್ಛಗೊಳಿಸೋಣ ಎನ್ನುತ್ತಾರೆ. ಅಲ್ಲಿ ಗಂಗಾನದಿ ಸಾಂಕೇತಿಕ ಅಷ್ಟೇ. ನಮ್ಮನಮ್ಮ ವಠಾರಗಳನ್ನು, ಮನೆಗಳನ್ನು, ಮನಗಳನ್ನು ಸ್ವಚ್ಛವಾಗಿಟ್ಟುಕೊಂಡರೆ ಒಬ್ಬೊಬ್ಬ ಭಾರತೀಯನ ಭಾವಗಂಗೆಯೂ ಸ್ವಚ್ಛವಾದಂತೆಯೇ ಅಲ್ಲವೇ?
ಭಾರತದ, ಭಾರತೀಯತೆಯ ಹೆಮ್ಮೆಯನ್ನು ವಿಶ್ವಕ್ಕೆಲ್ಲ ಮತ್ತೊಮ್ಮೆ ಎದೆತಟ್ಟಿ ಹೇಳೋಣ ಎನ್ನುವ ನೇತಾರನೊಬ್ಬ ಕೊನೆಗೂ ನಮಗೆ ಸಿಕ್ಕನಲ್ಲ! ಚಿಕ್ಕಚಿಕ್ಕ ಸಾಧನೆಗಳಿಂದಲೇ ಆರಂಭಿಸೋಣ ಎಂದು ಹೇಳುತ್ತ "ನಾನಂತೂ ಚಹ ಮಾರಿಕೊಂಡು ಬಂದ ಸಾಮಾನ್ಯರಲ್ಲಿ ಅತಿಸಾಮಾನ್ಯ ಎಂದರಲ್ಲ ಮೋದಿ, ಅದನ್ನು ಕೇಳಿದಾಗಂತೂ ಎಲ್ಲರೂ ಭಾವೋದ್ವೇಗದಿಂದ ಎದ್ದುನಿಂತು ಚಪ್ಪಾಳೆ ತಟ್ಟಿದ ದೃಶ್ಯ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ನಿಂತಿದೆ!
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ












Click it and Unblock the Notifications