ಲಾಸ್ ಏಂಜಲಿಸ್ನಲ್ಲಿ ನ.3ರಂದು ನಾಟಕ 'ಸಪ್ತಮುಖಿ'

ಬದುಕೇ ಒಂದು ನಾಟಕವೆಂಬ ಮಾತೊಂದಿದೆ. ಬದುಕಿನಲ್ಲಿ ನಡೆದುಕೊಂಡು ಬಂದ ಪರಂಪರೆಗಳು ನಾಟಕಗಳಲ್ಲಿ, ಅದರಲ್ಲೂ ಇತ್ತೀಚೆಗಿನ ಸಮಕಾಲೀನ ನಾಟಕ ಪ್ರದರ್ಶನಗಳಲ್ಲಿ ಅಭಿವ್ಯಕ್ತಗೊಂಡಿರುವುದನ್ನು ಗಮನಿಸಬಹುದು. ನಮ್ಮ ಒಡಲೊಳಗಿನ ಪಿಸು ಮಾತುಗಳಿಗೆ ಅರ್ಥ ಕಲ್ಪಿಸಿಸಲು, ಈ ಪರಂಪರೆಗಳನ್ನು ಆಗಾಗ ಒರೆಗಿಟ್ಟು ನೋಡಬೇಕಾಗುತ್ತದೆ. ನಮ್ಮ ಧಾರ್ಮಿಕ ಪರಂಪರೆ, ರಾಜಕೀಯ ಪರಂಪರೆ, ಪೌರಾಣಿಕ ಪರಂಪರೆ ಹಾಗೂ ನಂಬಿಕೆಗಳನ್ನು ಒರೆಗಿಟ್ಟಾಗ, ಅವು ಒಂದು ಬಗೆಯ ತರ್ಕಬದ್ಧ ವ್ಯಾಖ್ಯಾನಗಳಿಗೆ ದಾರಿ ಮಾಡಿಕೊಡುತ್ತವೆ. ಇದೇ ಅಸೀಮ ಪ್ರಸ್ತುತಪಡಿಸುತ್ತಿರುವ 'ಸಪ್ತಮುಖಿ' ಸಾರುವ ಮುಖ್ಯ ಸಂದೇಶವಾಗಿದೆ. ಈ ನಾಟಕದಲ್ಲಿ ನಾಟಕಕಾರರ ಚಮತ್ಕಾರವೂ, ಸಾಹಿತ್ಯಕ ಸೃಜನಶೀಲತೆಯೂ ಎದ್ದು ತೋರುತ್ತದೆ.
ಪ್ರಸ್ತುತ, 'ಸಪ್ತಮುಖಿ'ಯಲ್ಲಿ, "ಅರಹಂತ" (ರಾಮನಾಥ), "ಗಾಳಿ ಎಂಬ ಕುದುರೆ ಏರಿ" (ಪ್ರಭುಶಂಕರ), "ಯುದ್ಧ", (ಜಯಂತ ಕಾಯ್ಕಿಣಿ ಪ್ರಬಂಧದ ಮೇಲೆ ಆಧಾರಿತ), "ಪರಂಪರೆ" (ಜಯಂತ ಕಾಯ್ಕಿಣಿ - ಜತೆಗಿರುವನು ಚಂದಿರ ನಾಟಕದಿಂದ), "ಪರಿತ್ಯಕ್ತ" (ಅಂಬಾತನಯ ಮುದ್ರಾಡಿ), "ಕೊಡೆಗಳು" (ಚಂದ್ರಶೇಖರ ಪಾಟೀಲ) ಮತ್ತು "ಉಳ್ಳವರ ನೆರಳು" (ಎಸ್. ವಿಜಯ) - ಎಂಬ ಏಳು ನಾಟಕಗಳ ದೃಶ್ಯಗಳನ್ನು ಅಳವಡಿಸಿಕೊಳ್ಳಲಾಗಿದೆ. ಇವುಗಳನ್ನು ಒಂದು ವಿಶಿಷ್ಟ ಕೊಂಡಿಗಳಿಂದ ಚಂದ್ರ ಐತಾಳರು ಜೋಡಿಸಿದ್ದಾರೆ. ಸೂತ್ರಧಾರರ ಪಾತ್ರಗಳು ಮತ್ತು ಅವರ ಹಾಡುಗಳು ಇಲ್ಲಿ ಪ್ರಮುಖವಾಗಿವೆ. ಹಿಮ್ಮೇಳದ ಸಂಗೀತ ನಾಟಕಗಳ ಒಳಗೇ ಇರುವ ಹಾಡುಗಳು ಮತ್ತು ನಾಟಕಗಳನ್ನು ಒಂದಕ್ಕೊಂದು ಜೋಡಿಸುವ ಹಾಡುಗಳನ್ನು ಹಿಮ್ಮೇಳದವರು ಒದಗಿಸಲಿದ್ದಾರೆ. ಸಪ್ತಸ್ವರಗಳು ಸೇರಿ ಉತ್ತಮ ಗಾಯನವಾಗುವಂತೆ, ಈ ಸಪ್ತ ನಾಟಕಗಳು ಇಲ್ಲಿ ಜೋಡಣೆಯಾಗಿವೆ. ಹೀಗೆ ಜೋಡಿಸುವಲ್ಲಿ, ಮಾನವನ ಮೂರು ಮುಖಗಳಾದ ಮಾನವತೆ, ದಾನವತೆ ಮತ್ತು ದೈವತ್ವಗಳಿಗೆ ಪ್ರಾಮುಖ್ಯತೆ ಕೊಡಲಾಗಿದೆ. ಇದೊಂದು ಅನನ್ಯ ಪ್ರಯೋಗವೆಂದೇ ಹೇಳಬಹುದು. ನಾಟಕದ ನಿರ್ದೇಶಕರೂ, ಸಂಗೀತ ನಿರ್ದೇಶಕರೂ ಚಂದ್ರ ಐತಾಳರು. ಅಸೀಮ ತಂಡದವರು ಪ್ರಸ್ತುತಪಡಿಸುತ್ತಿರುವ ಈ ಅನನ್ಯ ಕೊಡುಗೆಯ ಪ್ರಾಯೋಜಕರು ದಕ್ಷಿಣ ಕ್ಯಾಲಿಫೋರ್ನಿಯದ ಸಾಂಸ್ಕೃತಿಕ ಸಂಘದವರು. ಈ ಪ್ರದೇಶದ ಕನ್ನಡಿಗರೇ ಪ್ರಸ್ತುತಪಡಿಸುವ ಕಾರ್ಯಕ್ರಮ ಇದು.
ನಾಟಕ ಪ್ರದರ್ಶನದ ವಿವರಗಳು ಹೀಗಿವೆ:
ನಾಟಕ : 'ಸಪ್ತಮುಖಿ'
ರಚನೆ : ಸಮಕಾಲೀನ ಕನ್ನಡ ನಾಟಕಕಾರರು
ಪ್ರದರ್ಶನ ದಿನಾಂಕ ಮತ್ತು ವೇಳೆ : ಶನಿವಾರ, ನವೆಂಬರ್ 3, 2012; ಅಪರಾಹ್ನ - 5.30ಕ್ಕೆ
ಸ್ಥಳ : Baldwin Park Performing Arts CenteBaldwin Park Performing center, 4640, Maine St, Baldwin Park, CACA 91706
ಪ್ರವೇಶ ಧನ : 15.00 ಡಾಲರುಗಳು
ಕಾರ್ಯಕ್ರಮ ಮುಗಿದ ಮೇಲೆ ಲಘು ಭೋಜನದ ವ್ಯವಸ್ಥೆ ಮಾಡಲಾಗಿದೆ.
ಈ ಕಾರ್ಯಕ್ರಮವನ್ನು ಸಹಪ್ರಾಯೋಜಿಸಲು ಉದಾರೀ ದಾನಿಗಳನ್ನು ನಮ್ರತೆಯಿಂದ ಕೋರಿಕೊಳ್ಳುತ್ತಿದ್ದೇವೆ. ಸಹಪ್ರಾಯೋಜಿಕ ವಿವರಗಳು:
Platinum Co-sponsors : $ 500.00 and above (4 complimentary tickets provided)
Gold Co-sponsors : 250.00 (4 complimentary tickets provided)
Silver Co-sponsors : 100.00 (2 complimentary tickets provided)
ಹೆಚ್ಚಿನ ವಿವರಗಳಿಗೆ ಈ ಕೆಳಗಿನವರನ್ನು ಸಂಪರ್ಕಿಸಿರಿ:
ಶ್ರೀನಿವಾಸ ಭಟ್ - 909-623-3185
ಅಮೃತ ಬಸವಾಪಟ್ನ - 562-556-6198
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications