ಖರ್ಗೆ : ಅಮೆರಿಕನ್ನಡಿಗರ ಮನೆಯಂಗಳದ ಅತಿಥಿ

ಪ್ರಸಕ್ತ ಉತ್ತರ ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ಅಧಿಕೃತ ಭೇಟಿಯಲ್ಲಿರುವ ಖರ್ಗೆ ಸದ್ಯ ಟೆಕ್ಸಾಸ್ ನಲ್ಲಿದ್ದು ಮಂಗಳವಾರ ಡಿಸಿ ಮೆಟ್ರೊಗೆ ಆಗಮಿಸುವವರಿದ್ದಾರೆ. ಕಾವೇರಿ ಕನ್ನಡಿಗರನ್ನು ಅವರು ಭೇಟಿ ಮಾಡುವ ಸ್ಥಳ : Diya Restaurant, 2070 Chain Bridge Road (Near Tysons Corner), Vienna, Virginia 22182. ಸಮಯ : ಸಂಜೆ 7 ಗಂಟೆ.
ಬುಧವಾರ ಸಂಜೆಯ ಸ್ನೇಹ ಕೂಟಕ್ಕೆ ಕಾವೇರಿ ಸಂಘದ ಸದಸ್ಯ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮನೆಯಂಗಳದ ಅತಿಥಿಯೊಂದಿಗೆ ಲೋಕಾಭಿರಾಮದಲ್ಲಿ ಪಾಲ್ಗೊಳ್ಳಬೇಕೆಂದು ಕಾವೇರಿ ಅಧ್ಯಕ್ಷ ಹರಿದಾಸ್ ಲಹರಿ ಸೋಮವಾರ 'ಒನ್ಇಂಡಿಯಕನ್ನಡ' ತಾಣಕ್ಕೆ ತಿಳಿಸಿದರು. ಖರ್ಗೆಯವರ ಜತೆಗೆ ವಾಣಿಜ್ಯ ಮಂತ್ರಿ ವಿನಯ್ ಕ್ವಾತ್ರ ಹಾಗೂ ರಾಯಭಾರ ಕಚೇರಿಯ ಕೌನ್ಸಲರ್ (ವಾಣಿಜ್ಯ) ಡಾ. ಬಾಲ ಭಾಸ್ಕರ್ ಇರುತ್ತಾರೆ.
ಆರಡಿ ಆಳು : ಕರ್ನಾಟಕ ರಾಜಕೀಯ ಅಂಗಳದಲ್ಲಿ ನಾಲಕ್ಕು ದಶಕಗಳ ಕಾಲ ಬಿಳಿಜೋಳ ಬೀಸಿದ ಅನುಭವಿ ಮಲ್ಲಿಕಾರ್ಜುನ ಖರ್ಗೆ. ಗುಲಬರ್ಗ ಜಿಲ್ಲೆ ಗುರುಮಿಠಕಲ್ ವಿಧಾನಸಭಾ (ಮೀಸಲು) ಕ್ಷೇತ್ರದಿಂದ ಸತತ 9 ಬಾರಿ ಆಯ್ಕೆಯಾದ ಹೆಗ್ಗಳಿಕೆ ಅವರದ್ದು. ಕಟ್ಟಾ ಕಾಂಗ್ರೆಸ್ಸಿಗ, ಇಂದಿರಾಗಾಂಧೀ ಕುಟುಂಬ ರಾಜಕೀಯ ಹೊಳೆಯಲ್ಲಿ ನಿರಂತರವಾಗಿ ಈಜುವ, ಕಾಂಗ್ರೆಸ್ ಹೈಕಮಾಂಡಿಗೆ ನಿಯತ್ತಿನ ಸೈನಿಕರಾಗಿರುವುದು ಖರ್ಗೆಯವರ ವೈಶಿಷ್ಯ್ಟ.
1972 ರಿಂದ 2009ರವರೆಗೆ ಶಾಸಕರಾಗಿ ಮತ್ತು ನಾನಾ ಮುಖ್ಯಮಂತ್ರಿಗಳ ಕೈಕೆಳಗೆ ವಿವಿಧ ಇಲಾಖೆಗಳ ಸಚಿವರಾಗಿ ಸೇವೆ ಸಲ್ಲಿಸಿರುವ ಮಲ್ಲಿಕಾರ್ಜುನ್, ಅಧಿಕಾರ ಇಲ್ಲದ ವೇಳೆ ವಿರೋಧಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಕರ್ನಾಟಕ ಕಾಂಗ್ರೆಸ್ಸಿನ ಒಳಪದರಗಳನ್ನು ಅರಿತವರಾಗಿದ್ದಾರೆ.
ಮೊದಲಬಾರಿಗೆ 2009ರ ಲೋಕಸಭಾ ಚುನಾವಣೆಯಲ್ಲಿ ಗುಲಬರ್ಗ (ರಿಸರ್ವ್ಡ್) ಕ್ಷೇತ್ರದಿಂದ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದ ಖರ್ಗೆ ಅವರಿಗೆ ಕೇಂದ್ರ ಸಚಿವ ಸ್ಥಾನ ಒಮ್ಮೆಗೆ ಒಲಿದು ಬಂತು. ಅವರೀಗ ಕಾರ್ಮಿಕ ಮಂತ್ರಿ, ಉದ್ಯೋಗ ಸಚಿವ. [ಅನಿವಾಸಿಗಳೆ, ಭಾರತದಲ್ಲಿನ ಪಾಲಕರಿಗೆ ಹಣ ಹಳುಹಿಸಿ]
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications