ಕೆಕೆಎನ್ ಸಿ ಸಣ್ಣಕಥಾ ಸ್ಪರ್ಧೆಗೆ ಕಥೆ ಕಳಿಸಿ

ಇಗೊಳ್ಳಿ, ನಿಮಗಾಗಿ ಸ್ವರ್ಣಸೇತು 2011ರ ಸಂಪಾದಕ ಸಮಿತಿಯು ಕಥಾಸ್ಪರ್ಧೆಯ ಮೂಲಕ ಆ ನಿಮ್ಮ ಕನಸನ್ನು ನನಸಾಗಿಸುವ ಸದವಕಾಶ ನೀಡುತ್ತಿದೆ. ಅತ್ಯುತ್ತಮ ಕಥೆಗಳು ಬಹುಮಾನ ಪಡೆಯುವುದರೊಂದಿಗೆ, ಸ್ವರ್ಣಸೇತು 2011ರಲ್ಲಿ ಅಚ್ಚಾಗುವ ಅವಕಾಶ ಪಡೆಯುತ್ತವೆ.
ಅಮೆರಿಕಾದ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ ಈ ಕಥಾ ಸ್ಪರ್ಧೆಯನ್ನು ಆಯೋಜಿಸಿದೆ. ಕಥೆ ಕಳಿಸುವ ಮುನ್ನ ಸ್ಪರ್ಧೆಯ ನಿಯಮಗಳನ್ನು ತಪ್ಪದೆ ಓದಿರಿ. ಕಥೆಗಳನ್ನು ಸೆಪ್ಟೆಂಬರ್ 25, 2011ರೊಳಗೆ, [email protected]ಗೆ ಕಳುಹಿಸಬೇಕು.
ಸ್ಪರ್ಧೆಯ ನಿಯಮಗಳು:
1. ನಿಮ್ಮ ಸ್ವರಚಿತ ಕಥೆಗಳನ್ನು ಮಾತ್ರ ಕಳುಹಿಸಿಬೇಕು, ಅನುವಾದಿತ ಕಥೆಗಳಿಗೆ ಅವಕಾಶವಿರುವುದಿಲ್ಲ. ನಿಮ್ಮ ಕಥೆ ಈ ಮುನ್ನ ಬೇರೆಲ್ಲೂ ಪ್ರಕಟವಾಗಿರಬಾರದು, ಬಾನುಲಿಯಲ್ಲಿ, ವೆಬ್-ಮ್ಯಾಗ್/ಬ್ಲಾಗ್ ಗಳಲ್ಲಿಯೂ ಪ್ರಕಟವಾಗಿರಬಾರದು.
2. ಕಥೆಗಳು “ಬರಹ", “MS-WORD" ಅಥವಾ “ನುಡಿ"ಯಲ್ಲಿರಬೇಕು. ಕೈ ಬರಹದ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ.
3. ಬರಹ/ನುಡಿಯ 12 ಫಾಂಟ್ ಸೈಜಿನಲ್ಲಿ ನಾಲ್ಕು ಪುಟಗಳಿಗೆ ಮೀರದಂತೆ ನಿಮ್ಮ ಕಥೆ ಅರಳಲಿ.
4. ಸ್ವೀಕರಿಸಿದ ಕಥೆಗಳನ್ನೂ ಸ್ವರ್ಣಸೇತು 2011ರಲ್ಲಿ ಪ್ರಕಟಣೆಗಾಗಿ ಪರಿಗಣಿಸಲಾಗುವುದು. ಪ್ರಕಟಿಸುವ ಅಥವಾ ಪ್ರಕಟಿಸದಿರುವ ತೀರ್ಮಾನ ಸ್ವರ್ಣಸೇತು ಸಂಪಾದಕ ಸಮಿತಿಯದಾಗಿರುತ್ತದೆ.
5. ಸ್ಪರ್ಧೆಗೆ ಕಳುಹಿಸಿದ ಕೃತಿಗಳನ್ನು ಸ್ವರ್ಣಸೇತು-2011 ಬಿಡುಗಡೆಯವರೆಗೂ ಬೇರೆಲ್ಲೂ ಪ್ರಕಟಿಸಬಾರದು.
6. ಕಥೆಗಳನ್ನು ನಿಮ್ಮ ಈ-ಮೇಲ್ ಹಾಗೂ ದೂರವಾಣಿ ಸಂಖ್ಯೆಯ ಜೊತೆಯಲ್ಲಿ ಈ ವಿಳಾಸಕ್ಕೆ ಕಳುಹಿಸಿ [email protected].
7. ಕಥೆಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 25, 2011.
8. ತೀರ್ಪುಗಾರರ ನಿರ್ಧಾರವೇ ಅಂತಿಮ.
ಸಂಪಾದಕ ಸಮಿತಿ, ಸ್ವರ್ಣಸೇತು 2011












Click it and Unblock the Notifications