ಕನ್ನಡಕ್ಕೆ ಶ್ರಮದಾನ ಮಾಡಿದವರಿಗೆ ಸನ್ಮಾನ

ಕನ್ನಡ ಕಲಿಯೋಣ ಶಾಲೆಯ ಗುರುಗಳ ಸ್ವಯಂಸೇವೆ ಮತ್ತು ವಿದ್ಯಾದಾನ ಶ್ರಮ ಗುರುತಿಸಿ ಕಾವೇರಿ ಸಮಿತಿಯವರು ಗೌರವ ಪತ್ರ ನೀಡಿ ಆವರಿಗೆ ಮೆಚ್ಚುಗೆ ಸಲ್ಲಿಸಿದರು. ಗಾಲ್ಫ್ ಕ್ರೀಡೆಗೆ ಪ್ರತೀ ವರ್ಷವೂ ಧನ ಸಹಾಯ ಮಾಡಿ ಪೋಷಿಸಿದ ಭಾರತಿ ಹಾಗೂ ಬೋಗಾರಮ್ ಶೆಟ್ಟಿಯವರು, ಮತ್ತು ಆ ಕ್ರೀಡೆಯನ್ನು ಶ್ರದ್ಧೆಯಿಂದ ನಡೆಸಿಕೊಟ್ಟ ಶಿವು ಭಟ್, ಡಾ. ರಮೇಶ್ ರಾವ್ ಹಾಗೂ ಮೋಹನ್ ರಾವ್ ರವರಿಗೆ ಮೆಚ್ಚುಗೆ ಫಲಕ ನೀಡಿ ಗೌರವಿಸಲಾಯಿತು. ಅಂತೆಯೇ ಬ್ಯಾಡ್ಮಿಂಟನ್ ಗೆ ಧನ ಸಹಾಯ ಸಲ್ಲಿಸಿದ ಮಾದೇಶ್ ಬಸವರಾಜು ಮತ್ತು ಮುತುವರ್ಜಿವಹಿಸಿ ನಡೆಸಿಕೊಟ್ಟ ಅನಂತ ಕಲಾಲೆ, ಟೆನ್ನಿಸ್ ನಡೆಸಿಕೊಟ್ಟ ರಾಮಮೂರ್ತಿ ಅವರನ್ನೂ ಕೂಡ ಗೌರವಿಸಲಾಯಿತು. ಕ್ರಿಕೆಟ್ ಕ್ರೀಡೆಗೆ ಸತತವಾಗಿ ಧನ ಸಹಾಯ ಮಾಡುತ್ತಿರುವ ನರ್ಮದ ಹಾಗೂ ರವೀಂದ್ರ ದಂಕನಿಕೋಟೆಯವರನ್ನೂ ಮತ್ತು ಎಲ್ಲಾ ಕ್ರೀಡೆಗಳನ್ನೂ ಅಚ್ಚುಕಟ್ಟಾಗಿ ನಡೆಸಿಕೊಟ್ಟ ಗಿರೀಶ್ ವಾಸುದೇವ ಅವರನ್ನು ಗೌರವಿಸುವ ಕಾರ್ಯಕ್ರಮವನ್ನು ಅಂದು ಕಾವೇರಿಯವರು ಹಮ್ಮಿಕೊಂಡಿದ್ದರು.
ಈ ಸಮಾರ೦ಭದಲ್ಲಿ "ಪರಿ" ಚಿತ್ರದ ಧ್ವನಿ ಸುರುಳಿಯನ್ನು ಬಿಡುಗಡೆ ಮಾಡಲಾಯಿತು. ಭಾರದ್ವಾಜ ಅವರ ಕಾದ೦ಬರಿ ಆಧಾರಿತ ಚಿತ್ರ "ಪರಿ" ಕಳೆದ "ಅಕ್ಕ" (AKKA) ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಪಡೆದಿತ್ತು. ಈ ಚಿತ್ರದ ನಿರ್ದೇಶಕರಲ್ಲೊಬ್ಬರು ರಮೇಶ್ ಭಟ್ ರವರು ನಮ್ಮ ಕಾವೇರಿಯ ಸದಸ್ಯರೆ೦ದರೆ ಹೆಮ್ಮೆಯ ವಿಷಯ.
ಎಲ್ಲಾ ಕಾರ್ಯಕ್ರಮ ಮುಗಿಸಿ, ಊಟದ ಮನೆಗೆ ಸಾಗಿದಾಗ, ಭರ್ಜರಿ ಹಬ್ಬದೂಟ ಕಾದಿತ್ತು. ಸಾಲು ಸಾಲಾದ ಟ್ರೇಗಳಲ್ಲಿ ತುಂಬಿದ ಹೋಳಿಗೆ, ಬಾದೂಷಾ, ಬಿಸಿಬೇಳೆ ಭಾತ್, ಚಪಾತಿ ಪಲ್ಯ, ಖಾರಾ ಬೂಂದಿ ಹಬ್ಬದ ವಾತಾವರಣಕ್ಕೆ ಕಳಶವಿಟ್ಟಿತ್ತು. “ಮದುವೆಮನೆಯ ಕಳೆ ತಂದಿತ್ತು, ಕನ್ನಡದ ಕೆಂಪು, ಹಳದಿ ಬಣ್ಣ. ಅದನ್ನು ನೂರ್ಮಡಿಸಿತ್ತು ಬಾದೂಷಾ ಜೊತೆ ಹೋಳಿಗೆಯ ಹೂರಣ" ಎಂದ ಒಬ್ಬ ನವ್ಯ ಕವಿ. ಜಯಶ್ರೀ ಜಗದೀಶ್ ರವರ ನೇತೃತ್ವದಲ್ಲಿ 2011ನೇ ತ೦ಡ ದೀಪಾವಳಿ ಮತ್ತು ರಾಜ್ಯೋತ್ಸವವನ್ನು ಬಹಳ ವಿಜೃ೦ಭಣೆಯಿ೦ದ ನಡೆಸಿ ಎಲ್ಲರ ಮನಗೆದ್ದರು.
-
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ












Click it and Unblock the Notifications