ಅಮೆರಿಕದ ಕನ್ನಡ ಮಕ್ಕಳು ಬೆಳಗಿದ ದೀಪಾವಳಿ

ರಂಗು ರಂಗಾದ ವೇಷತೊಟ್ಟ ಮಕ್ಕಳ ಕಂಸಾಳೆ ಒಂದು ಕಡೆಯಾದರೆ, ಬಣ್ಣದ ಕೋಲಾಟ ಮತ್ತೊಂದೆಡೆ ಸಾಗಿತ್ತು. ನೀಲಿ ಸೀರೆಯುಟ್ಟ ಕಾವೇರಿ ತನ್ನ ಕೊಡದಿಂದ ಚಿಮ್ಮಿದ ಅನುರಾಗ ಧಾರೆಯಲ್ಲಿ ಇನ್ನೂ ನಾಲ್ಕು ನದಿಗಳನ್ನು ಜೊತೆಗೂಡಿಸಿಕೊಂಡು McLean ಹೈಸ್ಕೂಲಿನ ವೇದಿಕೆಯನ್ನೇರಿದ್ದಳು. ಪುಟಾಣಿ ಶರಣ ಶರಣೆಯರು ಹಾಗೂ ಹರಿದಾಸರ ತಂಡ, ತಂಬೂರಿ ಮಿಡಿಯುತ್ತಾ ಕಾವೇರಿಯನ್ನು ಹಿ೦ಬಾಲಿಸಿದರು. ತಾಳಕ್ಕೆ ತಕ್ಕ ಲಯಬದ್ದವಾದ “ಲೆಜಿ೦" (Lezim) ನೃತ್ಯ ಪ್ರೇಕ್ಷಕರ ಮನಸೆಳೆದಿತ್ತು. ಜ್ಞಾನಪೀಠ ವಿಜೇತ ಸಾಹಿತಿಗಳ ತಂಡ ಹಚ್ಚಿದ ದೀವಳಿಗೆಯ ದೀಪ, ಭುವನೇಶ್ವರಿಯ ಅಲಂಕೃತ ಪಲ್ಲಕ್ಕಿಗೆ ಬೆಳಕು ನೀಡಿತ್ತು. ಈ ಎಲ್ಲಾ ವಿಸ್ಮಯಗಳನ್ನು ಆನಂದಿಸುತ್ತ ಕುಳಿತ ಭುವನೇಶ್ವರಿ, ಕನ್ನಡ ಕಲಿಯೋಣ ಶಾಲೆಯ ಗುರುಗಳಿಗೆ ಮತ್ತು ಯುವ ನಿರೂಪಕರಾದ ವಿಭ, ಇಶಿಕ, ಮೇಧಿನಿಯವರಿಗೆ ಅಭಯ ಹಸ್ತ ನೀಡಿ ಹೆಮ್ಮೆಯಿಂದ ನಸುನಕ್ಕಳು.
ವಾಣಿ ರಮೇಶ್ ರವರ ನಿರ್ದೇಶನದಲ್ಲಿ ತಯಾರಾದ ಕೋಲಾಟದಿಂದ ಪ್ರಾರಂಭವಾದ ಕಾರ್ಯಕ್ರಮಗಳು ಒಂದಕ್ಕಿಂತ ಮತ್ತೊಂದು ಚೆನ್ನ ಎನ್ನುವಂತಿದ್ದವು. “ಕನ್ನಡ ಭಾಷೆಯಲ್ಲಿ ಧರ್ಮಚಿಂತನ" ಎಂಬ ಶೀರ್ಷಿಕೆಯಂತೂ ಎಲ್ಲಾ ಮನರಂಜನಾ ಕಾರ್ಯಕ್ರಮಗಳನ್ನೂ ಮೀರಿಸಿತ್ತು. ಸಂಧ್ಯಾ ದಾಮೋದರ್ ರವರ ನೇತೃತ್ವದಲ್ಲಿ ರೂಪುಗೊಂಡ ದಾಸರ ಪದಗಳನ್ನೊಳಗೊಂಡ ನೃತ್ಯ ರೂಪಕ ಅಮೋಘವಾಗಿತ್ತು. ಉಮಾ ಇಟ್ಟಿಗಿ ಅವರ ತಂಡದವರು ನಿರೂಪಿಸಿದ ನೃತ್ಯ ರೂಪಕ “ಅನುಭವ ಮಂಟಪ" ಮನ ಸೆಳೆಯಿತು. ಶ್ರೀ ತರಳಬಾಳು ಜಗದ್ಗುರುಗಳ ನೇತೃತ್ವದಲ್ಲಿ ನಿರ್ಮಾಣಿತ ಧ್ವನಿ ಸುರುಳಿಗೆ ಜೋಡಿಸಿದ ನೃತ್ಯ ಕಲ್ಪನಾತೀತವಾಗಿತ್ತು. ಅವರೊಂದಿಗೆ ಬಿಜ್ಜಳ, ಬಸವಣ್ಣ, ಅಲ್ಲಮಪ್ರಭು, ಮಂತ್ರಿ ಇನ್ನಿತರ ಪಾತ್ರಗಳಲ್ಲಿ ಅಭಿನಯ ನೀಡಿದ ಸ್ಥಳೀಯ ಕಲಾವಿದರು ಮತ್ತು ಅವರ ವೇಷಭೂಷಣಗಳು ಮತ್ತಷ್ಟು ಶೋಭೆ ತಂದವು.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications